ನನ್ನ ನೋವುಗಳನ್ನೆಲ್ಲ ಮೂಟೆ
ಕಟ್ಟಿ ಇಟ್ಟಿರುವೆ
ಕನಸಿನಲ್ಲಾದರು ಬಂದು ಹೊತ್ತೊಯ್ದು
ದೂರ ಬಿಸಾಡಿಬಿಡು ಪ್ರಿಯೆ
ಮತ್ತೆಂದೂ ನನ್ನ ಸನಿಹ ಬಾರದಂತೆ.-
🔥Don't follow me I'm Right Person 🔥
ಒಲವ... read more
ಪ್ರಸ್ತುತ ನಡೆಯುತ್ತಿರುವ
ಅತ್ಯಾಚಾರ, ಕೊಲೆ, ಸುಲಿಗೆ, ಗಾಂಜಾ, ಡ್ಸಗ್ಸ್
ಇತ್ಯಾದಿ ಪ್ರಕರಣಗಳಿಗೆಲ್ಲ ಮೂಲ ಕಾರಣ "ಶಿಕ್ಷಣದ ಕೊರತೆ".
ಇಂತಹ ಹ್ಯೇಯ ಕೃತ್ಯಗಳನ್ನು ಎಸಗುತ್ತಿರುವವರೆಲ್ಲ ಯುವಕರೇ ಆಗಿದ್ದಾರೆ.
ಇಂತವರಿಗೆ ಸರಿಯಾದ ಶಿಕ್ಷಣ ಸಿಗದೆ ಸಮಾಜವನ್ನು,
ದೇಶವನ್ನು ಹಾಳುಮಾಡುತ್ತಿದ್ದಾರೆ.
ಶಾಲಾ-ಕಾಲೇಜುಗಳು,ಶಿಕ್ಷಕರು ಸರಿಯಾದ ಶಿಕ್ಷಣ ಕೊಟ್ಟರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದಾಗಿದೆ.
ಇನ್ನಾದರೂ ಸರ್ಕಾರ, ಶಿಕ್ಷಕರು ಸರಿಯಾದ ಶಿಕ್ಷಣ ಕೊಡಲಿ.-
ಅಸಹಾಯಕರ
ಬದುಕಿನಲ್ಲಿ
ನಿರೀಕ್ಷೆಗಳಿಗಿಂತ
ಪರೀಕ್ಷೆಗಳೆ ಹೆಚ್ಚು
ಪರಿಗಣನೆಗಳಿಗಿಂತ
ಕಡೆಗಣನೆಗಳೆ ಹೆಚ್ಚು.-
ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಆದಂಗೆ
ಸರ್ಕಾರಿ ಪಂಕ್ಷನ್ನಲ್ಲಿ ಖಾಸಗಿ ಎಂಗೇಜ್ಮೆಂಟ್ ಆಗೋಯ್ತು
ಎಲ್ಲ 'ಗೊಂಬೆ'ಯಾಟವಯ್ಯಾ...
-
ಕೊಲ್ಲುವುದಾದರೆ ಕೊಂದುಬಿಡು ಒಂದೇ ಸಾರಿ
ಮತ್ತೆ ಮತ್ತೆ ಕೊಲ್ಲಬೇಡ ಇರಿದು ಕಣ್ಣ ಚೂರಿ
ನಾ ಆಗಲೇ ಸತ್ತು ಹೋಗಿರುವೆ
ಚೆಲುವೆ ಚೆಲುವೆ ಚೆಲವೆ ಓ ಚೆಲವೇ...
-
ಕಾಲಕ್ಕೆ ಬಾಡುವ ಹೂ ನಾನು
ಬಾಡುವ ಮುನ್ನ ಮುಡಿ ನೀನು
ನಿನ್ನ ಮುಡಿಗಾದರೂ...
ಇಲ್ಲ
ನಿನ್ನೆದೆ ಗುಡಿಗಾದರೂ...
-
ಕೂತು ಉಣ್ಣುವವರೆ ಅರಸರಾಗುತ್ತಿರುವಾಗ,
ಇನ್ನು ದುಡಿದು ಉಣ್ಣುವವರು ಅರಸರಿಗುವುದಿಲ್ಲವೇ
ಚಿಂತಿಸಬೇಡಿ ನಿಮಗೂ ಒಳ್ಳೆಯ ಕಾಲ ಬರುವುದು
ಬೀದಿಗೆ ಬಿದ್ದ ಮಕ್ಕಳನ್ನೂ ಗದ್ದುಗೆ ಏರಿಸುವುದು.-