ಇನಿಯನ ಬಾಹುವಿನಲ್ಲಿ ಒರಗುವ ಕನಸು
ಅವಕಾಶದ ನಿರೀಕ್ಷೆಯಲ್ಲಿ ತವಕಿಸಿದೆ ಕಣ್ಣೆರಡು
-
ಹೃದಯದ ಮಾತು ಕೇಳಲು ಮಾತು ಬೇಕಂತ ಇಲ್ಲ..
ಕಾರಣ...
ಮಾತಿಗಿಂತ ಮೌನವೆಂದರೆ ಹೃದಯಕ್ಕೆ ಬಲು ಇಷ್ಟ..
ಮೌನದ ಸಂಭಾಷಣೆಯಲ್ಲೆ ಹೃದಯ ಹೆಚ್ಚು ಆಹ್ಲಾದ ಆಗುವುದು...-
ದೀಪ ಬೆಳಗಲು ಕಾರಣವಾಗಿತ್ತು
ಒಂದು ಮೇಣದ ಬತ್ತಿ
ದೀಪ ಬೆಳಗಿದ ಬಳಿಕ
ಮೇಣದ ಬತ್ತಿ ಒಬ್ಬಂಟಿಯಾಗಿ
ಮೂಲೆಯಲ್ಲಿ ಬಿದ್ದಿತ್ತು ...-
ನೆರಳ ಕೊಡುವ ಮರದ ಆಶ್ರಯವನ್ನು ಪಡೆದ ಮನುಜ
ನೆರಳ ಕೊಟ್ಟ ಮರ ಬಿಸಿಲಿಗೆ ಮೈಯೊಡ್ಡಿದ್ದನ್ನ ಮರೆತ
ಮರಕ್ಕೆ ತಿಳಿದಿರಲಿಲ್ಲ ಮನುಜನ ಸ್ವಭಾವ
ಮನುಜನಿಗೆ ಮರಕ್ಕೇನು ಗೊತ್ತು ಅನ್ನುವ ಜಂಭ-
ರೆಕ್ಕೆಯನ್ನು ಕತ್ತರಿಸಲು ಪ್ರಯತ್ನಿಸಿದವರೆಷ್ಟೋ , ಹಿಂಬದಿಯಿಂದ ಬಾಣ ಬಿಟ್ಟವರೆಷ್ಟೋ , ಪಕ್ಷಿ , ಪಾಪ ಎಂದು ಬಿಡದೆ ಬಂಧಿಸಲು ಪಣತೊಟ್ಟವರೆಷ್ಟೋ..ಆದರು ಬದುಕುವ ಹಂಬಲ , ಹಾರಲು ಆಗದಿದ್ದರೂ ಹದವಾಗಿ ಜೀವಿಸುವ ಬಯಕೆ , ರೆಕ್ಕೆ ಕತ್ತರಿಸಲು ಕಷ್ಟ ಪಡುತ್ತಿರುವವರ ಕಾರ್ಯ ಮುಂದುವರಿಯಲಿ , ಬಡಪಕ್ಷಿ ಬದುಕುವ ಪ್ರಯತ್ನದಲ್ಲೇ ಸಾಗಲಿ..
-
1. ನಂಬಿಕೆ ದ್ರೋಹ ಮಾಡುವವರ ಸಂಘ
2. ವಿಶ್ವಾಸದ ಮೇಲೆ ಘಾತಿಸಿದ ಕೆಲವರ ಸ್ನೇಹ
3.ನೇರವಾಗಿ ಮಾತನಾಡುತ್ತೇನೆ ಎಂದು ಮಾತು ಬಿಡುವ ಮಂದಿ
ಇಂತಹವರಿಂದ ಅಪಾಯವೇ ಹೆಚ್ಚು ..-
ಎಲ್ಲರೂ ನನ್ನವರೇ ಎಂದು ಅಂದುಕೊಂಡಿದ್ದೆ ;
ಅರಿವಾಗಲು ತಡವಾಯಿತು !
ಅವರ ಕೆಲಸವಾಗಲು ನಾ ಮಾದ್ಯಮವಾಗಿದ್ದೆ ;
ಕೆಲಸ ಮುಗಿದ ಮೇಲೆ ನನ್ನ ಕಣ್ಣು ತೇವವಾಗಿತ್ತು..!-
ಸಾಧಿಸುವ ಛಲವೊಂದಿದ್ದರೆ , ಪರಿಶ್ರಮ ಪಡುವ ಮನಸ್ಸು ನಿಮ್ಮದಾಗಿದ್ದರೆ , ಅದೃಷ್ಟವನ್ನು ನಂಬಿ ಕೈ ಚೆಲ್ಲಿ ಕೂರದೇ ಇದ್ದರೆ , ಕಾಲಕ್ಕೆ ಗೌರವ ಕೊಟ್ಟು ಮುನ್ನೆಡೆದರೆ , ಬದುಕಿನಲ್ಲಿ ಅಸಾಧ್ಯ ಎನ್ನುವುದು ಯಾವುದು ಇಲ್ಲ... ಕೆಲಸ ಮಾಡಿ ಯಶಸ್ಸು ಸಾಧಿಸಬೇಕೆಂಬ ಗುರಿ ಇದ್ದಾಗ ಸಮಯ ಮೀರಿತು ಎಂಬುದು ನೆಪಕ್ಕಷ್ಟೆ ಸಿಮೀತವಾಗುತ್ತದೆ...
-
ಬದುಕಿನ ಸ್ಟೇಟಸ್ ನೋಡಿಕೊಂಡೇ
ಕೆಲವರು
ಇನ್ನೊಬ್ಬರ ವಾಟ್ಸ್ಯಾಪ್ ಸ್ಟೇಟಸ್ ನೋಡುವುದು...!!-
1. ನಂಬಿದವರಿಂದಲೇ ಆದ ದ್ರೋಹ
2.ದುಡಿದು ದಣಿದರೂ ಸಿಗದ ಮಾನ್ಯತೆ
3.ಎಲ್ಲಾ ಇದ್ದು ಅಪರಿಚಿತನಾದ ಸಂಕಟ
ಈ ಮೂರು ಅಂಶಗಳು ಕಳೆದ ವರ್ಷದಲ್ಲಿ ಅನುಭವಿಸಿದ ಹಾಗೂ ಅರಗಿಸಿಕೊಳ್ಳಲು ಕಷ್ಟಕರವಾಗಿದ್ದ ಸಂದರ್ಭಗಳು... ಈ ವರ್ಷ ಇಂತಹ ಯಾವ ಘಟನೆಗಳು ಮರುಕಳಿಸದೇ ಇರಲಿ..-