ಸಖಿ,
ಕಡು ಸೆಕೆಯಲಿ
ಸುಳಿದು ನಲಿಸೋ
ತಂಗಾಳಿ ನಿನ್ನುಸಿರು-
ಸದರದಿ ಅಧರದ ಬಣ್ಣವ
ಮೊಗದ ತುಂಬ ಹರಡಿದಳು,
ಹೋಳಿಯ ಹಬ್ಬವೆಂದು
ತುಂಟತನದಿ ನೆನಪಿಸಿದಳು.-
ಕನಸಲ್ಲ ನನಸಲ್ಲ
ಕನಸು ನನಸು ಮೀರಿದ ಭಾವ
ನನ್ನೊಳಿಲ್ಲ ನಿನ್ನೊಳಿಲ್ಲ
ನನ್ನ ನಿನ್ನ ಮೀರಿದ ಅನುಭಾವ
ಸತ್ಯವಲ್ಲ ಮಿಥ್ಯವಲ್ಲ
ಯಾವ ನಾಮ ಇವನಿಗಿಲ್ಲ
ಪುಣ್ಯವಲ್ಲ ಪಾಪವಲ್ಲ
ಯಾವ ಹಂಗೂ ಇಲ್ಲವಲ್ಲ
ಇಹದಲಿಲ್ಲ ಪರದಲಿಲ್ಲ
ಎಲ್ಲವೂ ಹೌದು, ಏನೂ ಅಲ್ಲ
ಆಕಾರವಿಲ್ಲ, ಗುಣಭೇದವಿಲ್ಲ
ಚರಾಚರಗಳ ತೇಜವಷ್ಟೇ ಮತ್ತೆನಿಲ್ಲ
ರವಿಯಲ್ಲ, ಭುವಿಯಲ್ಲ
ಛವಿಯಲ್ಲ, ಕವಿಯ ಸವಿಭಾವವಲ್ಲ
ಬೆಳಗಿದಲ್ಲ, ಕತ್ತಲೂ ಅಲ್ಲ
ಅನಾದಿ, ಅನಂತನೀತ ಬೇರೆನೂ ಇಲ್ಲ...!-
ನಿಸಾರರು ಇನ್ನಿಲ್ಲ,
ಎಂಬುದು ನಿಜವಲ್ಲ..!
ಸಂಜೆ ಐದರ ಮಳೆ
ಇನ್ನೂ ನಿಂತಿಲ್ಲ
ಗಾಂಧಿಬಜಾರು ಇನ್ನೂ
ಮೌನವಾಗಿಲ್ಲ
ನಿಸಾರರು ಇನ್ನಿಲ್ಲ
ಎಂಬುದು ತರವಲ್ಲ..
ಜೋಗದ ಸಿರಿಯ
ಬೆಳಕಿನ್ನೂ ನಂದಿಲ್ಲ
ಬೆಣ್ಣೆ ಕದ್ದ ನಮ್ಮ ಕೃಷ್ಣ
ನಮಗಿನ್ನೂ ಸಿಕ್ಕಿಲ್ಲ
ನಿಸಾರರು ಇನ್ನಿಲ್ಲ
ಇದೇನು ಸತ್ಯವಲ್ಲ..
ಕಾವ್ಯ ನೆಲೆಸಿಹ ನನ್ನ
ಎದೆಯಲಿನ್ನೂ ಬೆಳಕಿದೆ
ಅಕ್ಷರದ ಅಮರದೀಪ
ಅನಂತವಾಗಿ ಬೆಳಗುತಿದೆ
ನಿಸಾರರು ಇನ್ನಿಲ್ಲ
ಎಂಬುದು ಸತ್ಯವಲ್ಲ..
ಇದೆಂದೂ ನಿಜವಲ್ಲ..-
ಹುಡುಗಿ,
ನಿನ್ನ ಕಂಡಕ್ಷಣ
ಮದವೇರಿ
ಮಧುಹೀರಿ
ಮುದ್ದಿಸುವಾಸೆ
ಮೊಳಕೆಯೊಡೆಯುತ್ತದೆ
ರಾಮನಂತಿದ್ದ
ಮನದ ತುಂಬ
ಕಾಮನ ಬಿಂಬ
ಆವರಿಸಿ
ಉನ್ಮಾದಗೊಳಿಸುತ್ತದೆ-
ಆಪತ್ಸುಮಗ್ನಃ ಸ್ಮರಣ೦ ತ್ವದೀಯ೦
ಕರೋಮಿ ದುರ್ಗೇ ಕರುಣಾರ್ಣವೇಶಿ|
ನೈತಚ್ಛರತ್ವ೦ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀ೦ ಸ್ಮರ೦ತಿ|
ಕೆಡುಕಿನ ಮೇಲೆ
ಒಳಿತಿನ ವಿಜಯದ ಕುರುಹಾಗಿರುವ
'ವಿಜಯ ದಶಮಿ'ಯ ಹಾರ್ದಿಕ ಶುಭಾಶಯಗಳು.
ವಿಜಯ ನಿಮ್ಮದಾಗಲಿ ಎಲ್ಲ ಒಳ್ಳೆಯ ಕೆಲಸಗಳಲಿ
ಸರ್ವಮಂಗಳೆ ಸರ್ವರಿಗೂ
ಸನ್ಮಂಗಳವನ್ನುಂಟು ಮಾಡಲಿ💐-
ಎಲ್ಲ YourQuote ಬರಹಗಾರರು
ಇಂದು YourQuote appನ
ಪೂಜಿಸಬೇಕಲ್ಲವೇ?
ಏಕೆಂದರೆ ಅವರ ಬರಹಗಳಿಗೆ
ಇದೇ ಆಯುಧವಲ್ಲವೇ?-
ಅವಳು:
ಒಲವ ಮಳೆಯಲ್ಲಿ
ನಿತ್ಯ ನೆನೆಯುತಿರುವೆವು
ಶೀತ-ನೆಗಡಿ ಬರಬಹುದು.
ಅವನು:
ಆಗಾಗ ಪಡೆದರೆ
ಬಿಸಿಯಪ್ಪುಗೆಯ ಕಾವು
ಏನೂ ತೊಂದರೆ ಇರದು.-