ಬದುಕು ಹಸನಾಗಲಿ
ಬರಡು ಬಯಲಿಗೆ ಮಳೆಯಾಗಲಿ
ಹಕ್ಕಿಯ ಹಿಕ್ಕಿಯಿಂದ ಗಿಡ ಮರವಾಗಲಿ
ಮರಕ್ಕೊಂದು ಹೂವಾಗಲಿ
ಇನ್ನೊಂದು ಹಣ್ಣಾಗಲಿ
ಹೂವು ಶಿವನ ಜಡೆಯೇರಲಿ
ಹಣ್ಣು ಹಸಿದವನಿಗೆ
ಆ ಜಡೆ ಶಿವನಲಿ ನಂಬಿಕೆಯಾಗಲಿ
-
ಅವಳೇನು ನನಗೆ
ಸೂಜುಗವಲ್ಲ
ರಶ್ಮಿಗೆ ಕರಗಿದ ಮಂಜು
ಹನಿಮುತ್ತಾಗಿ ಹೂವಂತರಾತ್ಮವ ಹೊಕ್ಕಂತೆ
ಗದ್ದಲದ ಜಾತ್ರೆಯಲಿ
ಗಾಂಭೀರ್ಯದಿ ತೇರನೇರಿ
ನನ್ನದೇಯ ಗರ್ಭಗುಡಿಯಲಿ
ಸಾಕಾರವಾದ ದೇವತೆಯವಳು
-
ಕುಲದ ಕಾಮನೆಗಳೆಲ್ಲಾ
ತಲೆ ಕೆದರಿ ನಿಂತಾಗ
ಹರಿದು ಹಂಚಿ ಬದುಕಿದವನೇ
ನನ್ನ ಬಸವಣ್ಣ-
ಅದ್ಯಾಕೋ ಈಗೀಗ ಬಹಳ ಬಿಕ್ಕಳಿಕೆ
ಹೇ ಬಲುದೂರದ ಹುಡ್ಗಿ
ಕನಸಿಗೆ ಆದರೂ ಬಂದು ಹೇಳು
ಅದೇನು ನಿನ್ನ ಬಯಕೆ-
ಭಾವನೆಗಳ ಚಡಿಯೇಟಿನಲಿ
ಬೆವರು ಹನಿ ಬತ್ತದು
ನೆತ್ತರದ ಮಳೆಯಲಿ
ಹೆತ್ತವಳ ಋಣ ತೊಯ್ಯದು
ಕಡು ಸತ್ಯವ ಕಾರುವ ಕಣ್ಣಿನಲಿ
ದಾರಿದ್ರ್ಯ ದಯೆಯೂ ಮರೆಯದು-
ಇರಬೇಕಿತ್ತು ನೀ ಇವತ್ತು
ಗೆಳತಿ ಇರಬೇಕಿತ್ತು ನೀ
ಆ ಹುಚ್ಚು ಕವಿ ಬರೆದಿದ್ದು
ಬರೀ ಕಲ್ಪನೆಯಂತೆ
ಆದರೆ ಅದು ನಮ್ಮಿಬ್ಬರಿಗೆ
ಪೂರಾ ಖಾಸವಂತೆ-
-:ಹೆಣ್ಣು:-
ಅವಳಲ್ಲವೇ ನನ್ನ ತಾಯಿ ಭುವನೇಶ್ವರಿ
ಹಿಮಾಲಯದಂತೇ ಶುಭ್ರಳು, ಗಂಭೀರಭಾವದವಳು
ಹಸಿರು ಘಟ್ಟದಂತೇ ರಮ್ಯಳು ,ಸಮೃದ್ಧವಾದವಳು
ಶಾಂತ ಕಡಲಂತೇ ವಿಶಾಲಳು , ವೈವಿಧ್ಯಮಯಳು
-
ಕನ್ನಡಕ್ಕೆ ಒಂದನ್ನ ಒತ್ತು
ರಾಯಲ್ ಚಾಲೆಂಜರ್ಸ್ಗೆ ಕೈ ಎತ್ತು
ಕರಗೊಲ್ಲ ಅಭಿಮಾನ
Blood ಒಳಗಿನ ಸ್ವಾಭಿಮಾನ
ಹೋಡಿ ಮಗಾ ಬಡಿ ಮಗಾ
ನೂರಿರಲೀ ಸವಾಲೂ
ಎತ್ತು ಮಗಾ ಕೀಳು ಮಗಾ
ನಿಮ್ಮ ಆಟ ಕಮಾಲೂ
ನಮಗೇನೂ ಕಮ್ಮಿ ಬಾಸು
ನೀವೆಲ್ಲಾ ಡಮ್ಮಿ ಪೀಸು
ಈ ಸಲಾ ಕಪ್ಪಿಗೆ ಕೆಂಪು ಕಲರೇ ಬೆಸ್ಟು choice
ತಲೆಯಲೀ ಹುಚ್ಚು ನಿಂದೇ
ಮೈ ಮೇಲೆ ಮಚ್ಚೇ ನಿಂದೇ
ಮೂರಹೊತ್ತು ಯೋಚನೆ ನಿಂದೇ
ಮಣ್ಣಲ್ಲಿ ಹೊದ್ರುನು ಮೈ ಮನ ಹೇಳೊದೊಂದೆ
'ಈ ಸಲಾ ಕಪ್ ನಮ್ದೇ'
-
ಬೆಳೆದವರ ಗುಂಪಿನಲೀ
ನಾ ಬಳ್ಳೀಯಾಗಿ ಹಬ್ಬಲೇ
ಕುಲದ ಹಂಗಿಲ್ಲದೆ ಕರೆದು
ಅನ್ನನಿಕ್ಕುವರರ ಮನೆಯಲೀ
ಕಳ್ಳ ಬೆಕ್ಕನು ಡಂಡಿಸಲು
ಕಡಿದ ಬೆತ್ತವಾಗಿರಲೇ
ಶರಣಬಸವನ ಧ್ಯಾನಿಸುವವರ
ಕಾಲಲೀ ಸಾರಿಸಿದ
ಸಗಣಿಯಾಗಿರಲೇ
-