ದಿನಗಳು ಕಳೆದು ಹೋದರೇನು
ಸಾಧಿಸುವ ಛಲ ಗುರಿ ಸದಾ ಇರಲಿ
ವರುಷಗಳುರುಳಿ ಹೋದರೇನು
ಹರುಷ ಕೊನೆಯದಾಗದಿರಲಿ
ಮೌಢ್ಯತೆಯ ಕಳೆ ಕರಗಲಿ
ವೈಚಾರಿಕತೆಯ ಸುಮ ಅರಳಲಿ
ಕಹಿಯೆಲ್ಲ ಕರಗಲಿ
ಸಿಹಿ ಜೇನಾಗಿ ಸುರಿಯಲಿ
ದ್ವೇಷ ಮತ್ಸರ ಅಳಿಯಲಿ
ಪ್ರೀತಿ ವಿಶ್ವಾಸ ಬೆಳೆಯಲಿ
ಹೊಸ ವರುಷ ಬಂದವೆಷ್ಟೋ, ಹೋದವೆಷ್ಟೋ
ನಾವೇ ಬದಲಾಗದಿದ್ದರೆ
ಬದಲಾಗೋಣ ಮಾನವರಾಗಿ
ಮಾನವೀಯತೆ ಮೆರೆಯೋಣ
ಹೊಸ ವರುಷದ ಶುಭಾಶಯಗಳು 💐💐
- ಪ್ರಭಾ.-
ನಿನ್ನನ್ನು ಮರೆಯಬೇಕೆಂದಷ್ಟು
ಸಮೀಪ ಆಗುತ್ತೀಯ..
ನೆನಪಲ್ಲೇ ಇರಬೇಕೆಂದಷ್ಟು
ದೂರ ಹೋಗುತ್ತೀಯ..
ಮರೆತು ಬದುಕಲಾರೆ
ನೆನೆಯದೆ ಇರಲಾರೆ
ಹೃದಯದ ಮಿಡಿತವಾಗಿರುವೆ ಗೆಳೆಯ....
- ಪ್ರಭಾ.-
ಮರೆವು ದೇವರು ಕೊಟ್ಟ ವರ
ಕಹಿ ಘಟನೆಗಳನ್ನು ಮರೆತಾಗ ಮಾತ್ರ
ಬದುಕಿನಲ್ಲಿ ಮಧುರ ಹೊಸ ಘಟನೆಗಳನ್ನು
ಸೃಷ್ಟಿಸಲು ಸಾಧ್ಯ....
ಆ ಶಕ್ತಿ ಪ್ರತಿ ವ್ಯಕ್ತಿಯಲ್ಲಿ ಇದ್ದಾಗ ಮಾತ್ರ
ಹೊಸ ಹೊಸ ಆವಿಷ್ಕಾರಗಳು
ತನ್ನಿಂದ ತಾನೇ ಸೃಜಿಸಲು
ಅಸಾಧ್ಯವೇನಿಲ್ಲ....
- ಪ್ರಭಾ.
-
ಜನರು ನಿಮ್ಮನ್ನು ಎಷ್ಟೇ
ಕಡೆಗಣಿಸಿ ಅವಮಾನಿಸಿದರೆ
ನೀವು ತಲೆಕೆಡಿಸಿಕೊಳ್ಳಬೇಡಿ..
ನಿಮ್ಮ ಪ್ರಾಮಾಣಿಕತೆ,
ನಿಸ್ವಾರ್ಥ ಸೇವೆ, ಸಾಧನೆ
ಒಂದಲ್ಲ ಒಂದು ದಿನ
ನಿಮ್ಮನ್ನು ಮೇಲಕ್ಕೇರಿಸುತ್ತದೆ....
- ಪ್ರಭಾ.
-
ನಿಮ್ಮ ಸ್ನೇಹಿತರು ನಿಮ್ಮಿಂದ
ಯಾವ ಕಾರಣವಿಲ್ಲದೆ
ದೂರ ಆಗುತ್ತಾರೆ ಎಂದರೆ
ಇದರರ್ಥ ..
ಅವರು ನಿಮ್ಮ ಪರಿಸ್ಥಿತಿ
ಅರ್ಥಮಾಡಿಕೊಳ್ಳದ ಅವಿವೇಕಿಗಳು
ನಿಮ್ಮ ಪರಿಶುದ್ಧ ಸ್ನೇಹಕ್ಕೆ ಅವರು
ಅಯೋಗ್ಯರು ಎಂದು..
ಯಾರು ಇದ್ದರೇನು , ಬಿಟ್ಟರೇನು
ನಿಮ್ಮ ಬದುಕು ನಿಮ್ಮದು
ನೀವು ನಿಮ್ಮ ಬದುಕಿನಲ್ಲಿ
ಸಂತೋಷದಿಂದ ಇದ್ದೀರಿ ಅಷ್ಟು ಸಾಕು ..
- ಪ್ರಭಾ....
-
ಮೋಸ,- ಕಪಟಗಳ ಅರಿವಿಲ್ಲದ
ನಿಷ್ಕಲ್ಮಶ- ನಿರ್ಮಲ ಮನಸ್ಸಿನ
ಭಾವನೆಗಳ ನನ್ನದೇ ಪ್ರತಿರೂಪ....
- ಪ್ರಭಾ.-
ನಲ್ಲ....
ನನ್ನ ನಿನ್ನ
ಬಾಳಪಯಣ
ಏಳೇಳು ಜನ್ಮಗಳ
ಚಾರಣ
ಬೆಳೆಯುತಿರಲಿ
ಭಾವಬಂಧ
ಅಳಿಯದಿರಲಿ
ಅನುಬಂಧ....
- ಪ್ರಭಾ.-
ಒಳಗೆ ಮೋಸ ಕಪಟಗಳ
ಮುಖವಾಡ ಧರಿಸಿ
ಹೊರಗೆ ಪ್ರೀತಿಯ ನಾಟಕವಾಡುವ
ಜನರ ಮುಂದೆ ಈ ಜಗತ್ತಿನಲ್ಲಿ
ನೇರ ನಿಷ್ಠುರ ಪ್ರಾಮಾಣಿಕತೆಗೆ
ಬೆಲೆ , ಗೌರವ ಇಲ್ಲವೆಂದು
ಈಗ....ಅರಿವಾಗಿದೆ !!
-ಪ್ರಭಾ.-
ಕಣ್ಣ ಮುಂದೆ ಇರುವಾಗ
ವ್ಯಕ್ತಿಯ ಬಗ್ಗೆ ಒಳ್ಳೆಯದನ್ನು
ಮಾತಾಡಿ
ಬೆನ್ನ ಹಿಂದೆ ಅದೇ ವ್ಯಕ್ತಿಯ ಬಗ್ಗೆ
ಕೆಟ್ಟದ್ದನ್ನು ಮಾತಾಡಬೇಡಿ....
-ಪ್ರಭಾ..-
ಸೃಷ್ಟಿಯಲಿ ಹೊಸತನದ ಪುಳಕ
ಶಿಶಿರ ಕಳೆದು ವಸಂತನ ಆಗಮನ
ಮಾವು-ಬೇವುಗಳಲಿ ಚಿಗುರಿನ ತವಕ
ಕೋಗಿಲೆ- ಪಿಕಗಳ ಮಧುರ ಕೂಜನ
ಭೂದೇವಿ ಹಸಿರುಡುಗೆ ತೊಟ್ಟು ನಲಿವ ಸಮಯ
ಬೇವು-ಬೆಲ್ಲ ಸವಿದು ಕಹಿ ಮರೆವ ಸುದಿನ
ಪ್ರೀತಿ-ವಿಶ್ವಾಸ ಮರುಕಳಿಸುವ ಚಣ
ಎಲ್ಲೆಲ್ಲೂ ನಾವಿನ್ಯತೆಯ ಸೊಬಗು
ಮರೆಸಿ ಮನದ ದುಗುಡ ಹರಿಸಲಿ ಆನಂದ
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 🪴🌿
- ಪ್ರಭಾ.-