ಪಾಪಿಗಳ ಲೋಕ
ನಕಲಿ ದೇವಮಾನವ
ಮಾನವೀಯತೆ ಮರೆತ ಮತಾಂಧರು
ಅತ್ಯಾಚಾರದ ಕೂಪ ಧರ್ಮದ ನಾಡು
ಎಲ್ಲಿಹುದು ಧರ್ಮದ ಮೂಲ ಧಯೆ?
-
ಭರತ ಪುಣ್ಯ ಭೂಮಿಯಲ್ಲಿ ,
ಕರುಣೆಯ ಕರುನಾಡಿನಲ್ಲಿ,
ಅಪ್... read more
ಅಭಿಜ್ಞಾನದೊಂದಿಗಿನ ಕಲೆಯನ್ನು
ಗೀರ್ವಾಣಿಯ ಕೃಪಾ ಕಟಾಕ್ಷದಿಂದ
ಹಾಡುತ್ತಾ,ನುಡಿಸುತ್ತಾ,ರಿಂಗಣಿಸುತ್ತಾ,
ತನ್ಮಯತೆಯನು ಅನಾವರಣಗೊಳಿಸುವ
ಅದ್ಭುತ ಕಲೆಯೇ ಸಂಗೀತ-
ಲೇಖನಿಯ ಹಿಡಿಯಲಾರೆ ನೀನು ಮೆಚ್ಚಲೆಂದು
ಆದರೂ ಬರೆಯುವೆನು ವಿರಹದ ಕವಿತೆಯನು,
ಬಾಳ ಸಂಪುಟದಲಿ ವಿರಹಗೀತೆಯ ಸಾಲು
ರೂಪುಗೊಂಡಿದೆ ನಲ್ಲ ನಿನಗಾಗಿಯೇ ಕೇಳು,,,
ನಾ ಬರೆದ ಗೀತೆಯ ಪ್ರತಿ ಸಾಲಿನಲ್ಲೂ ನೀ ನೀಡಿದ
ಪ್ರೇಮದ ಆಶ್ವಾಸನೆಯೇ ತುಂಬಿಹುದು ನೋಡು,,,
ಭಾವನೆಗಳ ನೆನಪಿನಾಳದಲ್ಲಿ ನಿನ್ನದೇ ಹಚ್ಚಹಸಿರು
ಎದೆ ಮಿಡಿತ ತುಂಬಿಹುದು ಮನದಾಳದಲ್ಲಿ,,,,,,
ಭಾವನಾಹೀನಳಲ್ಲಿ ನೀನೇ ತುಂಬಿದೆ ಸುಮಧುರಭಾವ
ಪ್ರೇಮದ ಎಳೆಯಾಗಿ ನೀನೇ ಮೀಟಿದೆ ಎದೆಯ ವೀಣೆಯನು,,,
ಮುಸ್ಸಂಜೆಯಲಿ ನಮ್ಮೊಲವಿನ ಮಾತಿಗೆ ಬನದ ಹೂಗಳು ಬಿರಿದು
ಕಂಪನು ಸೂಸುತಿದ್ದ ಗಳಿಗೆಯ ನೆನೆದು ನೋಡು,,,
ನಿನಗಾಗಿಯೇ ಕೇಳು ನಲ್ಲಾ
ಆದರೂ ಬರೆಯುವೆನು ವಿರಹ ಗೀತೆಯನು,,,,
ಕುಂಟು ನೆಪ ಹೇಳಿ ನೀ ದೂರ ಸರಿದುದ,,,, ನೆನೆದು ನೋಡು
-ಪ್ರಭಾ ಮೈಸೂರು
-
ಅಧಿಕಾರದಿಂದ
ನೆಲವನ್ನು ಕೊಂಡುಕೊಳ್ಳಬಹುದಷ್ಟೇ,
ಜ್ಞಾನವನ್ನು ಕಸಿದುಕೊಳ್ಳಲಾಗದು,,,,,-
ಅವಳು
ಮೌನವಾದವಳನ್ನು ಎಲ್ಲರೂ ದೂರುತಿರುವರು,,,,
ಮಾಲಿಯಂತೆ ಅಂದಗೊಳಿಸಿದ ತೋಟದಲ್ಲರಳಿದ ಹೂಗಳು,ಹಸಿರ ನಡುವೆ ಸ್ವಚ್ಛಂದವಾಗಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು,
ಎಲ್ಲವನ್ನು ಗ್ರಹಿಸುತ್ತಾ ಕುಳಿತಾ ಅವಳೀಗ ಮೌನಿ,,,,
ಇಷ್ಟು ಮೌನವನ್ನಾಳಲು ಅವಳು ಅದೆಷ್ಟು ಕಂಬನಿಯ ಕಡಲಲ್ಲಿ ಮೀಯ್ದು,ನೋವಿನಾಳವನ್ನೊಕ್ಕಿರಬೇಕು
-