ಸುಮ್ನೆ ಕೂತವ್ರನ್ನ ತಡವಿ, ದೇಹ ಮನಸ್ಸು ಬ್ಯಾರೆ ಬ್ಯಾರೆ ಅಂತ ಹೇಳಿ ಹೊರಟವನಿಗೆ "ಎಲ್ಲೊಂಟ್ರಿ?" ಅಂತ ಕೇಳಿದ್ದಾರೆ ಫ್ರೆಂಡು..
ಅವಾ.. "ಯಾಕೋ ಮೈ-ಕೈ ಸುಸ್ತು, ಪೇನ್ ಕಿಲ್ಲರ್ ತಗೊಳೋಕೆ ಮೆಡಿಕಲ್ಲಿಗೆ ಹೋಗ್ತಿದ್ದೀನಿ" ಆಂದ್ನಂತೆ..-
ಖಾಲಿ ಜೇಬಿನ ಸಂದರ್ಭದಲ್ಲಿ
ಕೈ ಹಿಡಿದವರನ್ನು,
ಜೇಬು ತುಂಬಿದ ಸಂದರ್ಭದಲ್ಲಿ
ತಪ್ಪದೇ ನೆನೆಯೋಣ...-
ಬೆಳಿಗ್ಗೆ ಎದ್ದೊಡನೆ ಭಗವಂತನಿಗೊಂದು ಧನ್ಯವಾದ ಹೇಳಿ. ಅನೇಕರು ಇಂದಿನ ಬೆಳಗನ್ನು ನೋಡದೇ ಭುವಿಯಿಂದ ನಿರ್ಗಮಿಸಿದ್ದಾರೆ...
-
ಬದುಕು ಹೇರ್ ಕಟ್ ಇದ್ದಂತೆ. ಹೊಸ ಸ್ಟೈಲ್ ಗಾಗಿ ಹಳೆಯದೊಂದಷ್ಟನ್ನು ಕಳೆದುಕೊಳ್ಳಲೇಬೇಕು...
-
ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಭಾರತಕ್ಕಾಗಿ ಧ್ಯಾನಿಸಿದಾಗ ಗುರು ಅನುಗ್ರಹದಿಂದ ಗುರಿ ನಿಶ್ಚಯವಾದ ದಿನವಿಂದು.
-
ಒಳ್ಳೆಯ ಊಟವೊಂದೇ 'ಆಹಾ' ಎನ್ನುವ ತೃಪ್ತಿಯ ಮಾತು ಹೊರಬರುವಂತೆ ಮಾಡೋದು. ಪ್ರೀತಿಯಿಂದ ಇತರರಿಗೆ ಉಣಬಡಿಸುವ ಅವಕಾಶ ಕಳಕೊಳ್ಳಬೇಡಿ!
-
ಪ್ರಕೃತಿಯ ಆರ್ಕೆಸ್ಟ್ರದಲ್ಲಿ ಸದ್ದಿಲ್ಲದೇ ಕುಣಿಯುವ ನರ್ತಕಿ ಸೊಳ್ಳೆ! ಸ್ವಲ್ಪ ಎಡವಟ್ಟಾದರೆ ದೈತ್ಯದೇಹಿಯನ್ನೂ ಅಡ್ಡಡ್ಡ ಮಲಗಿಸಬಲ್ಲದು. ಯಾರನ್ನೂ ನಿರ್ಲಕ್ಷಿಸುವಂತಿಲ್ಲ ಅಷ್ಟೇ!
-
ಬ್ರೇಕಿನ ಮೇಲೆ ವಿಶ್ವಾಸವಿದ್ದರೆ, ವೇಗದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ!
-
ರಾಜರ ಕಾಲದಲ್ಲಿ ಈ ಮೊಬೈಲ್ ಇದ್ದಿದ್ರೆ ಫಸ್ಟ್ Status ಹಾಕಿ ಆಮೇಲೆ, ಯುದ್ದಕ್ಕೆ ಹೋಗತಿದ್ದ್ರು!
-