ಪಾರಿವಾಳ ಶ್ರೀನಿವಾಸ ಕುಂಬಳಹಳ್ಳಿ  
10 Followers · 2 Following

Joined 8 July 2018


Joined 8 July 2018

ಕೆಲವೊಂದು ಮನೆಗಳಲ್ಲಿ ಸಂಜೆಯಾದರೆ ಮಕ್ಕಳು ಪುಸ್ತಕ ಮುಟ್ಟುತ್ತಿಲ್ಲವಲ್ಲಾ ಎಂಬ ಚಡಪಡಿಕೆ ತಂದೆಯದಾದರೆ.. ತಾಯಿಗೆ ಮಾತ್ರ ಆಕಾಶ ಕೆಳಗೆ ಬಿದ್ದರೂ ದಿನನಿತ್ಯದ ಟಿವಿ ಸೀರಿಯಲ್ ಗಳನ್ನು ನೋಡಲೇಬೇಕೆಂಬ ಕಾತರ

-



ಎಲ್ಲರ ನೋವಿನಲ್ಲಿ ನಾ ಪಾಲುದಾರ
ನನ್ನ ನೋವಿಗೆ ಮಾತ್ರ ನಾನೊಬ್ಬನೇ ಸಾಹುಕಾರ

-



ಬದುಕು ಬರಡಾಗಿ ಭಾವನೆಗಳಿಗೆ ಧಕ್ಕೆ ಉಂಟಾದಾಗ ಮನದ ಮಾತುಗಳನ್ನು ಸ್ಟೇಟಸ್ ಗಳ ಮೂಲಕ ಹೊರಹಾಕುತ್ತಾರೆ. ಆದರೆ ಸಂಬಂಧಪಟ್ಟವರು ಇದು ಬೇರೆಯವರಿಗಾಗಿ ಎಂದು ಭಾವಿಸುತ್ತಾರೆ ಭಾವನೆಗಳಿಗೆ ಬೆಲೆಯೇ ಸಿಗದ ಲೋಕವಿದು.

-



ಕೋಪದಿಂದ ದೂರವಾದವರು ಮರಳಿ ಬಂದರೆ ಆಶ್ಚರ್ಯವೇನಿಲ್ಲ.. ಆದರೆ ನಂಬಿಕೆದ್ರೋಹದ ನೋವಿನಿಂದ ದೂರವಾದ ಸ್ವಾಭಿಮಾನಿಗಳು ಮತ್ತೆ
ನಿಮ್ಮ ಜೀವನದಲ್ಲಿ ಹಿಂದಿರುಗಿ ಬರುವುದಿಲ್ಲ.




-



ಖುಷಿಯನ್ನು ಹಂಚಿಕೊಂಡಾಗ ಸಂಬಂಧಗಳು ಹತ್ತಿರವಾಗುತ್ತವೆ ಎಂಬುದು ನಿಜ.. ಆದರೆ ಕಷ್ಟಗಳನ್ನು ಹಂಚಿಕೊಂಡಾಗ ಆ ಸಂಬಂಧವು ಬದುಕಲ್ಲಿ ಎಂದೂ ಬಿಡಿಸಲಾಗದ ಅಮರ ಬಂಧನವಾಗಿ ಉಳಿಯಲಿದೆ.

-



ಮನುಷ್ಯ ಜೀವನದಲ್ಲಿ ನಿರೀಕ್ಷೆಗಳು ಜಾಸ್ತಿ
ದೇವರ ಆಟದಲ್ಲಿ ಪರೀಕ್ಷೆಗಳು ಜಾಸ್ತಿ
ಕೆಲವೊಮ್ಮೆ ಎಲ್ಲಾ ತಿಳಿದುಕೊಳ್ಳುವ ಶಕ್ತಿಯನ್ನು ಕೊಟ್ಟರೂ, ಏನನ್ನೂ ಮಾಡದೇ ಇರುವ ಅಸಹಾಯಕ ಪರಿಸ್ಥಿತಿಯಲ್ಲಿ ಇಡುತ್ತಾನೆ.

-



ಅರಿತವರು ಅಳಿಸಿ ಹೋದರೆ
ಮುದ್ದಿಸಿದವರು ಮರೆತು ಹೋದರೆ
ಪ್ರೀತಿಗೆ ಬೆಲೆಯಾದರೂ ಎಲ್ಲಿದೆ..?


-



ಅಂಧ ನೋಡಿ ಹುಟ್ಟೋ ಪ್ರೀತಿ.
ಹಣ ನೋಡಿ ಕೊಡುವ ಬೆಲೆ.
ಆಸ್ತಿ ನೋಡಿ ಒಂದಾಗೋ ಬಂಧುಗಳು
ಹೆಚ್ಚು ಕಾಲ ಉಳಿಯುವುದಿಲ್ಲ.
ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನಿಗೆ ನಿಜವಾದ ಸಂಪತ್ತು.

-



ನನ್ನತನವನ್ನು ಮಾರಿಕೊಂಡು ಯಾರೊಬ್ಬರನ್ನೂ ಮೆಚ್ಚಿಸುವ ಅವಶ್ಯಕತೆ ನನಗಿಲ್ಲ. ಸ್ವಾಮಿ ವಿವೇಕಾನಂದರು ನುಡಿದಂತೆ ಗೌರವವಿಲ್ಲದ ಸ್ಥಳಕ್ಕೆ ಹೋಗುವುದಿರಲಿ ನನ್ನ ಚಪ್ಪಲಿಯನ್ನು ಸಹ ಅಲ್ಲಿ ಬಿಡುವುದಿಲ್ಲ.









-



ಕಾಲಹರಣಕ್ಕಾಗಿ ಹಾಗೂ ಅವಶ್ಯಕತೆಗಳನ್ನು ತೀರಿಸಿಕೊಳ್ಳಲಿಕ್ಕಾಗಿ ಯಾರ ಜೊತೆಯೂ ಸಂಬಂಧವನ್ನು ಬೆಳೆಸಬೇಡಿ. ಏಕೆಂದರೆ ಅವರು ಕೆತ್ತನೆ ಮಾಡಿದ ಮೂರ್ತಿಗಳಲ್ಲ - ಭಾವನೆಗಳಿರುವ ಮನುಷ್ಯರು.

-


Fetching ಪಾರಿವಾಳ ಶ್ರೀನಿವಾಸ ಕುಂಬಳಹಳ್ಳಿ Quotes