ಎಲ್ಲರೂ ಹೇಳುವರಲ್ಲ...
"ಅಂದು ನಿನ್ನ ಪ್ರತಿ ಮೌನವೂ ನನ್ನ ಕೊಂದಿತ್ತು"
ಎಂದು, ಹಾಗಾದರೆ ಅವರಿಗೇನಾದರೂ ಸತ್ತ
ಮೇಲೂ ಮತ್ತೆ ಮತ್ತೆ ಬದುಕುವ ಸೂಪರ್
ಪವರ್ ಇದೆಯಾ?🤔-
ಮಳೆಗಾಲ...!!
ಕೆಲವರಿಗೆ ತೂಗುಯ್ಯಾಲೆಯಲ್ಲಿ ಕುಳಿತು ಬಿಸಿ
ಕಾಫಿ ಹೀರುತ್ತಾ ಮಳೆಹನಿಗಳ ಸುದ್ದಿಗೆ
ಕಳೆದೋಗಿಸುವ ಬೆಚ್ಚಗಿನ ಕಾಲ..!!
ಇನ್ನೂ ಕೆಲವರಿಗೆ ಅಲ್ಲಲ್ಲಿ ಸೋರುವ
ಹರುಕು ಮುರುಕು ಚಾವಣಿಗೆ ಸೀಟಿನ
ಅಲಂಕಾರ ಮಾಡುವ ಬಿಡುವಿಲ್ಲದ ಕಾಲ..!!-
ಸತ್ಯ ಮಿಥ್ಯಗಳ ಜಗದೊಳಗೆ
ಸತ್ಯವೆಂಬುವುದು ಅವನೊಬ್ಬನೆ,
ಆದಿ,ಅಂತ್ಯದ ನಡುವೆ ಕಾಲ್ಜಾರಿದಾಗ
ಕೈ ಹಿಡಿವವನು ಅವನೊಬ್ಬನೆ,
ಅತ್ತು ಬತ್ತಿದ ಕಣ್ಣಾಲಿಯಲಿ ನಗುವ
ಭರವಸೆ ಬಿತ್ತುವವನು ಅವನೊಬ್ಬನೆ,
ನಶ್ವರದ ಜಗದೊಳಗಿನ ಶಾಶ್ವತ
ಜೀವದ ಸಂಗಾತಿ ಅವನೊಬ್ಬನೆ.-
ನಮ್ಮಿಂದ ನೊಂದವರ ಶಾಪ
ನಮಗೆ ತಟ್ಟುತ್ತದಂತೆ..!!
ಹಾಗಾದರೆ ನನಗೂ ಒಂದಿಷ್ಟು ಶಾಪ
ತಟ್ಟಿರಬೇಕು, ಸುಮ್ಮನೆ ಹುಟ್ಟಿಸಿ
ಕಾರಣವಿಲ್ಲದೇ ಕೊಂದಿದ್ದ
ಒಂದಿಷ್ಟು ಕನಸುಗಳಿಂದ..!!-
ಅಂತಹಾ ಬಯಕೆಯೇನಿಲ್ಲ...!!
ಸರಿಸಿದಲ್ಲೂ ಮಂಜು ಮಂಜಾಗುವ
ಬದುಕ ಮಜಲುಗಳ ನಡುವೆ,
ಅದೇ... ಆ ಬಾಲ್ಯದಲ್ಲಿ ಯಾವ ಗೋಜಲೂ
ಇಲ್ಲದೆ ಹಾದಿ ಬೀದಿಗಳ ಸುತ್ತಿ ಗುಳಿಬಿದ್ದ ರಸ್ತೆಗಳ ನೀರ
ತೊಗೆದು ಅಲ್ಲಲ್ಲಿ ಕುಣಿದು ಕುಪ್ಪಳಿಸಿದ ಅದೇ ಆ
ಬಾಲ್ಯವೆಂಬ ಬೀದಿಗಿಳಿಯಬೇಕಷ್ಟೆ..!!-
ಭಯ, ಬಯಕೆಯ ನಡುವೆ
ಕಳೆದು, ಪಡೆದುಕೊಳ್ಳುವ
ಪ್ರಮೇಯವೊಂದು ಇಲ್ಲದೇ
ಹೋಗಿದ್ದರೆ,, ಸೊಡರು
ಬೆಳಗಿ ಕರವ ಮುಗಿವ
ದೇವನಿಗೆ ಮಾನ್ಯತೆಯೇ
ಇರುತ್ತಿಲ್ಲವೇನೊ....!!-
ಗೆಳೆತನ ಒಂತರಾ ಹೀಗೆಯೇ...ಒಂಟಿತನವೆಂಬ
ಪದವ ಶಬ್ಧಕೋಶದಿ ತೆಗೆದು ಮೌನದೊಳಗಿನ
ಮಾತ ಉಸುರದೇ ಅರಿತು ಮನಸೊಳಗಿನ
ಪ್ರೀತಿಯ ಬಚ್ಚಿಟ್ಟು ಕಾಳಜಿಯಲ್ಲಿ ಗದರುತ
ಬಾಳಲ್ಲಿ ಒಂತರಾ ಅರಿಯದೇ ಬೆಳಕನೀಡುವ
ಮಿಣುಕು ಹುಳದಂತೆ...!!-
ಹಳೆತಾಗಿ ಮಾಸಿದ ಭಾವನೆಗಳಿಗೆ ಬಣ್ಣದೊದಿಕೆ
ಹೊದಿಸಿ ನವಿರಾಗಿಸುವ ನವ ಸ್ವಪ್ನಗಳು...
ನಗುವಿನ ಪರದೆಯೊಂದು ಕಳಚಿ ಬಿತ್ತೆನ್ನುವಾಗ
ಹೊಸ ಸಂತಸದಲೆಯ ಲೇಪಿಸುವ ಕೆಲ ಬಂಧಗಳು...
ಮುಗುಳು ನಗೆಯ ಜೊತೆಗೆ ಮೌನದ ಸಂಗಾತಿಯಾಗ
ಹೊರಟ ಮನವ ಮಡಿಲಲ್ಲಿ ಮಲಗಿಸಿ ಭಾವನೆಗೆ
ಕಿವಿಗಾನಿಸುವ ಕೆಲ ಸ್ನೇಹಗಳು...
ಮೂಲೆ ಗುಂಪಾಗಿ ಬಿದ್ದ ಗುರಿಯೆಂಬ ಕಾಮಗಾರಿಗೆ
ಹೊಸ ಚಾಲನೆಯ ಗುಂಡಿ ಒತ್ತುವ ಒಂದಿಷ್ಟು ಕೈಗಳು....-
ಮನಸೆಲ್ಲೊ ಇಟ್ಟು ಮನಸ್ಸಿನ ಭಾವನೆಗಳ
ಬಿಳಿ ಹಾಳೆಯ ಮೇಲೆ ಬರೆಯ ಹೊರಟರೆ...
ಓದುವಾಗ ಬರೆದ ಪ್ರತಿ ಸಾಲಿನ ಪ್ರತಿ ಪದದ
ಮುಂದೆಯೂ ನಮಗೇ ಅರಿವಾಗದೆ ಪ್ರಶ್ನಾರ್ಥಕ
ಚಿಹ್ನೆಯೊಂದು ಮೂಡುವುದು...-