ಪ್ರೀತಿಯ ಹುಟ್ಟೇ ಹಾಗೆ! ನಿರ್ಲಿಪ್ತ ಭಾವಗಳ ಸುತ್ತಲೂ ಗಿರಕಿಹೊಡೆಯುತ್ತಲೇ ಹೃದಯಕ್ಕೆ ಹತ್ತಿರಾದವರಲ್ಲಿ ವಿಲಕ್ಷಣ ಭಾವವೊಂದು ಚಿಗುರುವ ಪ್ರಕ್ರಿಯೆಯದು..
-
ನನ್ನೂರು ಶಿವಮೊಗ್ಗ, (ರಸಋಷಿಯ ನೆಲ)
ನನ್ನ ಬಗ್ಗೆ ಹೇಳೋಕೆ ಹೆಚ್ಚೇನೂ ಇಲ್ಲ.
ಬರೆಯೋದು ಸ್ವಲ್ಪ ಹೆ... read more
ಬೇರೊಬ್ಬರ ಬಲವಂತಕ್ಕೆ ಕಟ್ಟುಬಿದ್ದು ತಪ್ಪು ತಪ್ಪು ಮಾರ್ಗದ ನಡೆದರೆ, ಮುಂದೊಂದು ದಿನ ಚುಚ್ಚಬಹುದಾದ ಕಲ್ಲು ಮುಳ್ಳುಗಳ ನೋವ ಸಹಿಸಬೇಕಾದದ್ದು ನಾವೇ! ಬಲವಂತವನ್ನು ವಿನಯದಿಂದ ತಿರಸ್ಕರಿಸಿ ಹೊರನಡೆವ ಧೈರ್ಯ ತೋರಲೇಬೇಕು..
-
ಬೆಳದಿಂಗಳಂಗಳದಿ ಸುಳಿದು ಬರುವ ತಂಗಾಳಿಯು ತನುವ ಸೋಕುವಾಗೆಲ್ಲ ನಿನ್ನದೇ ನೆನಪು! ನಟ್ಟ ನಡುರಾತ್ರಿಯ ನೀನಿರದ ನೀರವದೆ ಏಕಾ ಏಕಿ ಎದೆತಾಕಿ ಆವರಿಸುವೇಕಾಂತದ ಜೊಂಪು!
-
ಮನದ ಗಡಿಯೋ, ಮನೆಯ ಗಡಿಯೋ!
ಊರು, ಕೇರಿ, ಜಿಲ್ಲೆ, ರಾಜ್ಯ, ದೇಶದ ಗಡಿಯೋ! ಅಕ್ರಮ, ಅತಿಕ್ರಮ ಗಳನ್ನೆಲ್ಲ ಸಹಸಿ ಕ್ರಮಕೈಗೊಳ್ಳದೇ ಕೈ ಕೈ ಹಿಸುಕಿ ಕೊಳ್ಳುತ್ತ.. ಕಾದು.. ಕ್ರಮೇಣ ಪಶ್ಚಾತ್ತಾಪ ಪಡುವ ಬದಲು ಕಾದಾಡಿ ಕೆಟ್ಟವರಾದರೂ ಚಿಂತೆಯಿಲ್ಲ.-
ಮೌನತಾಳುವ ಸಂವೇದನೆಯ ಸೃಜಿಸಿದ ಮಾತುಗಳು ನೀರವತೆಗೆ ಮನಸೋತಿವೆ! ಮೌನದಾಳ ಮಾತನ್ನೂ ಮೀರಿದರಿವಸೃಜಿಸಿದೆ..
-
ಶಾರದೆಯು ಶಾಂತ ಹಾಗೂ ನಿಷ್ಕಪಟ ಹೃನ್ಮನಗಳಲ್ಲಿ ನೆಲೆನಿಂತಷ್ಟು ಗಟ್ಟಿಯಾಗಿ, ಗರ್ವಿಗಳಲ್ಲಿ ನೆಲೆನಿಲ್ಲಳು. ಅವಳನ್ನು ಒಲಿಸಿಕೊಳ್ಳುವ ಪೂಜಾನುಷ್ಠಾನಗಳೆಂದರೆ ವಿನಯಪೂರ್ವಕ-ಪ್ರೀತಿ ಹಾಗೂ ಗೌರವಾದರಗಳು!
ನೆನಪಿಡಬೇಕಿರುವುದಿಷ್ಟೇ, ಬದುಕಿನುದ್ದಕ್ಕೂ ಕಲಿಕೆಯಿದೆ!
'' ವಿದ್ಯೆಯಲ್ಲಿ ದರ್ಪ ಮತ್ತು ಅಹಂಕಾರಗಳೆಂಬ ಪಠ್ಯವೇ ಇಲ್ಲ.''-
ಕಿವಿಮಾತು:
* ಯೋಗ-ಯೋಗ್ಯತೆಗಳ ತುಲನೆಯಲ್ಲಿ ಯೋಗ್ಯತೆಗೇ ಮೊದಲ ಪ್ರಾಶಸ್ತ್ಯ! ವಿದ್ಯೆ - ವಿನಯಗಳಲ್ಲಿ ವಿನಯಕ್ಕೆ! ಹಣವೋ ಗುಣವೋ ಎಂಬ ಪ್ರಶ್ನೆ ಬಂದಾಗ ಗುಣವೇ ಮೊದಲು!
* ಅಲ್ಪವಿದ್ಯಾ ಮಹಾಗರ್ವಿ ಎಂಬ ಧ್ಯೇಯವಾಕ್ಯ ಸರ್ವಕಾಲಕ್ಕೂ ಪ್ರಸ್ತುತ! ಗರ್ವದಿಂದ ದುರ್ಗತಿಯೇ ಹೊರತು ಸದ್ಗತಿ ದೊರಕದು..
* ತುಂಬಿದ ಕೊಡ ಎಂದೂ ತುಳುಕದು. ಎಂಬ
ಮಾತಿನಂತೆ ಬದುಕೋಣ...
* ಅಹಮಿಕೆಯ ದೂರವಿರಿಸಿದಷ್ಟೂ ಅಧೋಗತಿಯ ದಾರಿ
ದೂರ! ಎಂಬುದನೆಂದೂ ಮರೆಯದಿರೋಣ.-