ಅಳಿದ ಮೇಲೂ ಉಳಿದವರು
ಜೀವನ ನಶ್ವರ ಎನ್ನುವ ಸತ್ಯ
ಇತ್ತೀಚಿಗೆ ಕಣ್ಣಿಗೆ ಕಾಣುತಿದೆ ಸತ್ಯ
ನಿನ್ನೆ ಕಂಡವರು ಇಂದುಇಲ್ಲವಾಗುತಿಹರು
ಬಾಳಬೇಕಾದವರು ಬಾಡಿಹೋಗುತಿಹರು
ಆಟ ಮುಗಿಯುವ ಮುನ್ನ ಬದುಕುನಲಿ
ಕೆಲವು ಕೆಲಸಗಳನ್ನು ಮಾಡಲೇಬೇಕು
ಮಾಡಿದ ಕೆಲಸಕ್ಕಾಗಿ ಜನರೆನ್ನ ನೆನೆಯಬೇಕು
ಇವನೊಬ್ಬನಿದ್ದ ಎಂದು ಹೆಸರ ಹೇಳಬೇಕು
-
ಪರಿಸರ
ಪರಿಸರವನು ಶುದ್ಧವಾಗಿ ಇಡಬೇಕು
ಕಾಡಿನಲ್ಲಿ ಹಸಿರನ್ನು ಕಾಪಾಡಬೇಕು
ಉಸಿರಿಗೆ ಮುಖ್ಯವದು ಅರಿಯಬೇಕು
ಮಾನವನೇ ಹೊಣೆಯ ಹೊರಬೇಕು
-
ಸಮಾಜಕ್ಕೆ ಹಿತವಾಗಿರುವ ಮಾತುಗಳು ಬೇಕು
ಪ್ರಜೆಗಳು ಪ್ರಗತಿಗಾಗಿ ಮನವಿ ಪಾಲಿಸಬೇಕು
ಅವರವರ ಇಚ್ಛೆಯಂತೆ ಕಾರ್ಯ ಮಾಡುತ್ತಿದ್ದರೆ
ಗುರಿಯ ಸೇರುವುದೆಂತು ದಿಕ್ಕು ಕಳೆದುಹೋದರೆ
ಮನದ ಭಾವನೆಯ ಕನ್ನಡಿಯು ಕವನ
ಹಿಡಿದಿಡಲು ಆಗಾಗ ಬರೆಯಬೇಕು ಅದನ
ಮಾತು ಮಧುರವಿರೆ ಸ್ನೇಹ ಪ್ರೀತಿ ಗಳಿಸುವೆ
ಕಠೋರ ಮಾತುಗಳು ಶತ್ರುಗಳ ಹುಟ್ಟಿಹಾಕಿಕೊಳ್ಳುವೆ-
ಬೆಳದಿಂಗಳ ಬೆಳಕ ನಾ ನೀಡಲಾರೆ
ಬದುಕಿಗೊಂದು ಪಥವ ನಿರ್ಮಿಸಲಾರೆ
ಬಂಗಾರದ ಕಿರೀಟ ನಾ ತೊಡಿಸಲಾರೆ
ಕಷ್ಟವಿರದ ಬಾಳನು ತೋರಲಾರೆ
ಸಾಂತ್ವನದ ನುಡಿಗಳನ್ನಷ್ಟೆ ನಾ ನುಡಿಯಬಲ್ಲೆ-
ಹಣತೆ
ಎಣ್ಣೆಯಿಲ್ಲದೇ ಉರಿಯದು ಯಾವುದೇ ಹಣತೆ
ಬರವಣಿಗೆಗೆ ಸತ್ವ ಇರಲೇ ಬೇಕೆಂಬುದನು ಅರಿತೆ
ನೆಲದೊಳಗೆ ಜಲಸಂಗ್ರಹವಿಲ್ಲದೆ ಚಿಮ್ಮದು ಒರತೆ
ಆದರ್ಶಗಳ ಬರೆದರೇನು ಶುದ್ಧವಿರಲೆಬೇಕು ನಡತೆ
-
#ಬಾಳ ಬುತ್ತಿ #
ಬುತ್ತಿಯಲ್ಲಿ ಒಮ್ಮೆ ಚಿತ್ರಾನ್ನ ಒಮ್ಮೆ ಮೃಷ್ಟಾನ್ನ
ಮುಂಜಾನೆ ಎಳೆಬಿಸಿಲು ಉರಿಬಿಸಿಲು ಮಧ್ಯಾಹ್ನ
ಬೆಳದಿಂಗಳು ಒಂದು ದಿನ ಕಾರಿರುಳು ಒಂದು ದಿನ
ಎಲ್ಲವನ್ನು ಸ್ವೀಕರಿಸಿ ನಲಿಯಬೇಕು ನಮ್ಮ ಮನ
-
ನಾಯಕತ್ವ
ನಾಯಕತ್ವವು ಸಿಗದು ನಿಯೋಜಿತ ಹುದ್ದೆಯಿಂದ
ಸಿಗುವುದು ನಿನ್ನಿಂದ ದೊರೆವ ಸ್ಫೂರ್ತಿಯಿಂದ
ನಿಲುವು ನಡತೆಯು ತೋರುವ ಪ್ರಭಾವದಿಂದ
ಅದರಿಂದ ಅಂತ್ಯದಲ್ಲಿ ಕಾಣುವ ಪರಿಣಾಮದಿಂದ
-
ನನ್ನ ಹೃದಯಬಡಿತದಲ್ಲಿ ನಿನ್ನದೆ ನೆನಪಿನ ರಾಗ
ನಾನು ಬಯಸುವುದಿಷ್ಟೇ ನಿನ್ನ ಮನದಲ್ಲಿ ಜಾಗ
ಬಂದು ಪ್ರತ್ಯಕ್ಷಳಾಗು ಚೆಲುವೆ ಕಣ್ಣಮುಂದೆ ಬೇಗ
ಕಾಯಲಾರೆ ಬಹಳ ಕಾಲ ಹೆಚ್ಚುತ್ತಿದೆ ಆವೇಗ-
ಭಾವಲಹರಿಗೆ ಪದಗಳ ಮಿತಿಯೇಕೆ
ಪ್ರಾಸಗಳ ಹಂಗಿನಲಿ ಸಿಲುಕಬೇಕೆ
ಹೇಳಲು ಅಂತರಾಳದ ಅನಿಸಿಕೆ
ಬೇಕೇ ಸಾಲುಗಳ ಪರಿಮಿತಿಯ ಬಳಕೆ-