ಮನುಜನ ಸಹಜ ಗುಣ ತಪ್ಪು ಮಾಡುವುದು
ಮಾನವೀಯತೆ ಮೆರೆಯುತಿರೆ ತಪ್ಪುಗಳಾಗದು
ಕ್ಷಮಾಗುಣ ಸಂಸರ್ಗದಿಂದ ಬರುವಂತಹುದು
ಬೆಳೆದ ವಾತಾವರಣದ ಮೇಲೆ ಮನವಿಹುದು
ಕಲಿಯುತ್ತ ಅರಿತು ರೂಢಿಸಿಕೊಳ್ಳಬೇಕಾದುದು
ಕ್ಷಮಾಗುಣ ವಿಶಾಲ್ಯವಾದ ಹೃದಯದಲ್ಲಿಹುದು
-
ಹುಡುಕಿದಷ್ಟು ಅರಿವು
ಬಿಡುವುದೆಲ್ಲ ಮರೆವು
ಅರಿವು ಮರೆವಿನ ನಡುವೆ ಪ್ರಕೃತಿಯು
ಸಿಕ್ಕಷ್ಟು ಬಾಚಿಕೊಳ್ಳಿ
ಮನದಿ ತುಂಬಿಕೊಳ್ಳಿ
ಇಳೆಯ ಕೊಡುವ ಗುಣ ಬೆಳೆಸಿಕೊಳ್ಳಿ
ಪಡೆವ ಮನವಿರಲಿ
ಕೊಡುವ ಜಗದಲಿ
ಪ್ರಕೃತಿ ನಮಗೆ ನೀಡುವ ಗುರುವಲ್ಲವೇ
-
ಬಂಧನವೆಂದರೆ
ಬಂಧಿಸುವುದು ಮನಗಳನ್ನು
ಬೆಸೆಯುವುದು ಸಂಬಂಧಗಳನ್ನು
ಬಸಿಯುವುದು ಭಾವನೆಗಳನ್ನು
-
ಗೆಲುವೆಂದು ಸಂಭ್ರಮಿಸದಿರೈ ಮನಜ ಸೋಲಿನ ರುಚಿಯನುಭವಸೇ ಮಜ
ಎರಡೂ ಸಮನಿಸೇ ಬದುಕು ಸಹಜ
-
ಎಲ್ಲವೂ ಹಾಗೆ
ಮಸಣವೋ ಮನೆಯೋ
ಚಿಂತೆಯೋ ಚಿತೆಯೋ
ಭ್ರಮೆಯೇ ಮತಿಯೋ
ವಿರಾಗಿಯೋ ಪ್ರೀತಿಯೋ
ರಾಗವೋ ಸ್ನೇಹವೋ
ಪರಾಗ ಸ್ಪರ್ಶದಂತೆ
ಇದು ಹೃದಯಕ್ಕೆ ಬಿಟ್ಟು ವಿಷಯ
-
ಹಸುವಿಗೆ ಪರೋಪಕಾರಿ ಗುಣವಿದೆ
ಅಸೂಯೆ ತನ್ನನ್ನೆ ಸುಟ್ಟುಕೊಳ್ಳುತ್ತದೆ
ಹಸಿವಿಗೆ ಎಲ್ಲರ ಹೊಟ್ಟೆ ತಳಮಳವು
ಅಸೂಯೆ ಇರುವ ಹೊಟ್ಟೆ ಧಗಧಗವು
ಹಸಿವು ವ್ಯಕ್ತಿಯನಷ್ಟೇ ಸಾಯಿಸುತ್ತದೆ
ಅಸೂಯೆ ತನ್ನ ಸುತ್ತಲಿನವರ ಸುಡುತ್ತದೆ-
ಸಮಯ ಸದಾ ಓಡುತಿಹುದು
ಸಮಯದ ಜೊತೆ ಓಡಬೇಕು
ಜೀವನ ಸಮಯ ನಿಲ್ಲಲಾರವು
ನಿಂತರೆ ಕಾಲಗರ್ಭಕೆ ಸೇರುವವು
ದೇಹ ಗಡಿಯಾರ ವಸ್ತುಗಳಿವು
ದೇಹವನ್ನು ಉಸಿರು ನಡೆಸಿದರೆ
ಗಡಿಯಾರ ಶಕ್ತಿಯಿಂದ ಓಡುವುದು
ಹಾಗಾಗಿ ಜೀವನವು ಗಡಿಯಾರದಂತೆ-
ಕನಸು ಕಾಣುವುದಕ್ಕೆ ಕಾಸು ಬೇಕಿಲ್ಲ
ಕಾಸಿಗಾಗಿ ಕನಸು ಕಾಣುಬೇಕಿಲ್ಲ
ಮನಸಿನ ಭಾವನೆಗಳೇ ಕನಸು
ಕನಸನ್ನು ನನಸು ಮಾಡಿಕೊಳ್ಳಬೇಕು
ಬದುಕಿನ ಹೋರಾಟ ಕಾಸಿಗಾಗಿ ಬೇಡ
ಗುರಿಯಿಟ್ಟುಕೊಂಡು ಹೋರಾಡಿ
ಹೋರಾಟ ಸದ್ದಿಲ್ಲದಂತೆ ನಡೆಯಲಿ
ಅದು ನಮ್ಮ ಏಳ್ಗೆಯ ಹೋರಾಟ
ಏಳ್ಗೆಯು ಸಮಾಜದ ಬಾಳ್ವೆಗೆ
ಸಮಾಜದ ಏಳ್ಗೆಯಲ್ಲಿ ನಮ್ಮ ಬಾಳ್ವೆ
ಕಾಸನ್ನು ಎಲ್ಲರೂ ಗಳಿಸುತ್ತಾರೆ
ಗಳಿಕೆಯು ನ್ಯಾಯದಿಂದ ಕೂಡಿರಲಿ
ಮನಸು ನಿರ್ಮಲ ಕನಸು ಕಾಣಲಿ
ಹೊಳೆ ನೀರಿಗೆ ದೊಣ್ಣೆ ನಾಯ್ಕನ ಅಪ್ಪಣೆ ಬೇಕಿಲ್ಲ......
-
ಹುಟ್ಟು ಸಾವು
ತಿಳಿಯಲು ನಾವಿರಬೇಕು
ನಾವಿರಲು
ಜನರ ನಡುವೆ ಬದುಕಬೇಕು
ಬದುಕೆಂದರೆ
ನೋವು ನಲಿವು
ಅನುಭವಿಸಿದ ಮನವಿರಬೇಕು
ಮನಸಿದೆಯೆಂದರೆ
ಮನುಷ್ಯತ್ವ ಜೀವಂತವಾಗಿದೆ ಎಂದರ್ಥ
ಜೀವಂತವಾಗಿರಲು
ನಮ್ಮ ಆಚರಣೆಗಳು ಶುದ್ಧವಾಗಿರಬೇಕು
ಶುದ್ಧ ಮನವಿರುವವನು
ಸಾವು ಬದುಕಿನ ಮಧ್ಯೆ ಮೌಲ್ಯಯುತ
ಬದುಕು ನಡೆಸುತ್ತಿದ್ದಾನೆ ಎಂದರ್ಥ........
-
ಪ್ರೀತಿಗೆ ಕಟ್ಟಬೇಕು ಬೆಲೆ
ಬೆಲೆ ಕಟ್ಟುವುದೊಂದು ಕಲೆ
ಅದಕಿರಬೇಕೊಂದು ನೆಲೆ
ಹೃದಯವೆಂಬ ಅಂಗಡಿಯಲೆ
ಪ್ರೀತಿಯು ಬಿಕರಿಗೆ ಸಜ್ಜಲೆ
ಕೊಂಡುಕೊಳ್ಳಿ ಹೃದಯ ಕೊಟ್ಟು
ಪ್ರೀತಿಯೆಂಬ ಮನದ ಸೆಲೆ-