ಆಡಿಗೂ ಕಾಡಿಗೂ ಬಳ್ಳಿಯೊಂದು ಆಸರೆಯಾಗಿತ್ತು
ವೈಜ್ಞಾನಿಕ ದಿಂದ ಆಧುನಿಕ ಬಂದು ಬಳ್ಳಿ ಕಿತ್ತುಕೊಂಡಿತು
ಈಗ ಕಾಡಿನಿಂದ ಆಡಿ ಬೇರೆಯಾಗಿ ಬಿರುಸು ಬೆಳಕು ಕಂಡಿದೆ ನೆಮ್ಮದಿ ನೆರಳು ಮಾತ್ರ ಕಾಣೆಯಾಗಿದೆ..
- ಕೆ.ನಾಗರಾಜ ಉಲವತ್ತಿ-
ಭವಿಷ್ಯವನ್ನು ಹಣದ ಆಸೆಗೆ ಗಿರಿವಿ ಇಟ್ಟಿದ್ದೇವೆ
ವಯಸ್ಸನ್ನು ದುಡಿಯಲು ಬಿಟ್ಟಿದ್ದೇವೆ
ಇನ್ನೆಲ್ಲಿ ಮಾನವ..?
ಕೊಂಬಿನ ಕುದುರೆ
ಸನ್ಮಾರ್ಗ ತಂಬೂರಿ ದಾಟಿ ಓಡುತ್ತಲೇ ಇದೆ
ಕಾಲ್ತುಳಿತಕ್ಕೆ ಸತ್ಯವೇ ಸಮಾಧಿ.
- ಕೆ.ನಾಗರಾಜ ಉಲವತ್ತಿ-
ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಹೇಗೋ ತಪ್ಪಿಸಿ ವಾಹನವನ್ನು ಚಲಿಸಬಹುದು
ಮನಸ್ಸು ಮನಸ್ಸುಗಳ ಮಧ್ಯೆ ಸಹಿಸದವರು ತೋಡಿದ ಕಿಡಿ ಗುಂಡಿಗಳನ್ನು ದಾಟಿ
ಒಮ್ಮತದಲಿ ಬದುಕಿದವರು ಕಡಿಮೆ..!
ಪರರ ಮೋಸದ ಗಾಳ ಸ್ವರ್ಣವಾಗಿ ಕಂಡಾಗ
ಸ್ವಂತ ಸಂಬಂಧದ ಹಾಳದಲಿ ಈಜು ಮರೆತು
ಗಾಳಕೆ ಬಿದ್ದು ಸ್ವಾರ್ಥದ ಬುಟ್ಟಿ ಸೇರಿದವರೇ ಹೆಚ್ಚು..!!
- ಕೆ.ನಾಗರಾಜ ಉಲವತ್ತಿ-
ಎಲ್ಲಾ ಪದಗಳಿಗೂ ನಿಲುಕುವುದಿಲ್ಲ ಅಪ್ಪ
ಮಕ್ಕಳಿಗೆ ಭವಿಷ್ಯದ ಎಲ್ಲಾ ಪದಗಳು ನಿಲುಕುವಂತೆ
ಶ್ರಮಿಸಿದ ಶ್ರಮದ ನೆರಳು ಅಪ್ಪ
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು
- ಕೆ.ನಾಗರಾಜ ಉಲವತ್ತಿ
-
ಕುರಿ ಕುರಿ ಕಿತ್ತಾಡಿ ವ್ಯವಸ್ಥೆಯ ಬೇಲಿ ಮುರಿದ್ವಂತೆ
ತೋಳ ಯಾವ ಅಡಿ ತಡೆಯಿಲ್ಲದೆ
ಕುರಿಗಳನ್ನು ಹೊತ್ತೈಂತಂತೆ
- ಕೆ.ನಾಗರಾಜ ಉಲವತ್ತಿ
-
ತನ್ನ ಅನೈತಿಕ ಮುಚ್ಚಿಡಲು
ತಾನೇ ಹೆತ್ತ ಮಗುವನ್ನು ಸಾಯಿಸಿದಳು
ಮನುಷತ್ವ ಮರೆತ ತಾಯಿ..!
ಮಳೆಯಲ್ಲಿ ನೆನೆದು ಮರ ಬಿದ್ದು ಸತ್ತ ತನ್ನ
ಮರಿಯು ಮತ್ತೆ ಬದುಕಿತೂ ಎಂಬ ಮಾತೃ ಕರುಣೆಯಲಿ ಕಾವಲು ಕಾಯುತ್ತಿದೆ ಕಾಡಲ್ಲಿ ತಾಯಿ ಆನೆಯೊಂದು..!!
ಯಾರಿಲ್ಲಿ ಮೃಗ..? ಯಾರಿಲ್ಲಿ ಮನುಷ್ಯರು..?
ಕಾಡಿನ ಪಾಠ ಕಲಿಯಬೇಕು ಮನುಜ
- ಕೆ.ನಾಗರಾಜ ಉಲವತ್ತಿ-
ನಮ್ಮ ನೆಲವನ್ನು ಬಂದವರಿಗೆ ಬಾಡಿಗೆ ಕೊಟ್ಟಿದ್ದೇವೆ
ಬಂದವರು ಇಲ್ಲೇ ನೆಲೆ ನಿಂತು ಆಗರ್ಭರಾಗಿದ್ದಾರೆ
ನಾವು ಮಾತ್ರ ಇನ್ನೂ ಅವರ ಬಾಡಿಗೆ ನಿರೀಕ್ಷೆಯಲ್ಲೇ
ಬದುಕುತಿದ್ದೇವೆ ಹೊರತು ನಾವೇ ಮಾಲಿಕರಾದರೂ
ಸ್ವಂತ ಸಂಪತ್ತು ಗಳಿಸುವ ಹೆಜ್ಜೆಯಲ್ಲಿ ಹಿಂದೆ ಉಳಿದಿದ್ದೇವೆ.
- ಕೆ.ನಾಗರಾಜ ಉಲವತ್ತಿ-
ತಿಮ್ಮನ ತರ್ಲೆ
ವಾಹನಗಳ ಅತಿಯಾದ ಹೊಗೆ ತಡೆಗಟ್ಟಲು
"ವಾಯು ಮಾಲಿನ್ಯ ತಪಾಸಣಾ ಕೇಂದ್ರ" ಹೇಗಿದಿಯೋ ಹಾಗೆ,
ಮುಂದೆ ಸಮಾಜಕ್ಕೆ ಮಾರಕವಾಗಿ
ಅತಿರೇಕದಲ್ಲಿ ವರ್ತಿಸುವವರನ್ನು ನಿಯಂತ್ರಿಸಲು
"ಅತಿರೇಕ ವ್ಯಸನ ಮುಕ್ತಿ ಕೇಂದ್ರ"
ಸ್ಥಾಪಿಸಬೇಕಾಗುತ್ತದೆ..
- ಕೆ.ನಾಗರಾಜ ಉಲವತ್ತಿ-
ಹಣದಿಂದ ಪ್ರಾರಂಭಕೊಂಡು ಹಣದೊಂದಿಗೆ ಮುಕ್ತಾಯವಾಗುವ IPL ಅನ್ನು ಕ್ರೀಡೆ ಎನ್ನಲು ಸಾಧ್ಯವೇ..?
ಇದೊಂದು ವ್ಯಸನ..!
ಇದರಲ್ಲಿ ಕೆಲ ಜನ ಶ್ರೀಮಂತರಾಗಿದ್ದಾರೆ
ಹಲವರು ಬದುಕನ್ನೇ ಕಳೆದುಕೊಂಡಿದ್ದಾರೆ
ಇನ್ನೂ ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ
ಅಡ್ಡಿ ಇಲ್ಲದ online ಬೆಟ್ಟಿಂಗ್
ನಿಯಂತ್ರಣ ಕಳೆದುಕೊಂಡ ಯುವ ಸಮೂಹದ
ಭವಿಷ್ಯವೇ Break fail..
- ಕೆ.ನಾಗರಾಜ ಉಲವತ್ತಿ-
ತಿಮ್ಮನ ತರ್ಲೆ
ನನಗೆ ಅವಳೇ word ಮತ್ತು world
ನಾನು ಮಾತ್ರ ಅವಳ ಸುತ್ತಾ ಸುತ್ತುವ Bird
- ಕೆ.ನಾಗರಾಜ ಉಲವತ್ತಿ
-