~..
-
ಸೃಷ್ಟಿಕರ್ತನು ತನ್ನ ವಿಶಾಲವಾದ ಭೂಮಿಯನ್ನು ಸೃಷ್ಟಿಗಳಿಗೆ ನೀಡಿ
"ನನ್ನ ಕರುಣೆಯನ್ನು ಪಡೆಯಲು,ಇತರೆ ಸೃಷ್ಟಿಗಳೊಡನೆ ಕರುಣೆಯನ್ನು ದಯಪಾಲಿಸಿ" ಎಂದನು..
ಸ್ವಾರ್ಥಿಗಳಾದ ಸೃಷ್ಟಿಗಳು,ತಮ್ಮ ಒಡ ಹುಟ್ಟಿದವರಿಂದಲೇ ದೂರವಾಗುತ್ತೇವೆಂದು ಬೇಲಿಗಳನ್ನು ನಿರ್ಮಿಸಿದರು...!
ಇದೇ ಸ್ವಾರ್ಥವು ಬೃಹತ್ತಾಕಾರವಾಗಿ ಬೆಳೆದು ಜಾತಿ-ಧರ್ಮ,ವರ್ಣ-ಭೇದಗಳ ನೆಪವನ್ನು ಪಡೆದು ಹಳ್ಳಿ,ಊರು,ರಾಜ್ಯ,ದೇಶ,ಖಂಡಗಳೆಂಬ ಗಡಿಗಳಾಗಿ ಒಬ್ಬರಿಂದೊಬ್ಬರು ಬೇರ್ಪಟ್ಟರು...!
"ನಮ್ಮ ಗಡಿಗೆ ಯಾರು ಬರಬೇಕು..?"
"ಯಾರು ಬರಕೂಡದು..?"
ಎಂದು ನಾವೇ ತೀರ್ಮಾನಿಸುತ್ತೇವೆಂದು ಸೃಷ್ಟಿಗಳೊಡನೆ ಸೃಷ್ಟಿಗಳು ವಾದಿಸತೊಡಗಿದಾಗ,
ಬೇಲಿಯೊಳಗಿರುವ ನಿಮ್ಮ ಮನೆಯೊಳಗೆ ಯಾರು ಪ್ರವೇಶಿಸಬೇಕು..?
ಯಾರು ಪ್ರವೇಶಿಸಕೂಡದು..?
ಎಂದು ನಾನು ತೀರ್ಮಾನಿಸುತ್ತೇನೆ..!
ಎಂಬುದಾಗಿತ್ತು ಜಗದೊಡೆಯನ ಉತ್ತರ...!
-
ಆಝಾದಿಯ ಕೂಗನ್ನು ತನ್ನ ಉಸಿರಿನ ಕೊನೆಯ ಕ್ಷಣದವರೆಗೂ ಮೊಳಗಿಸಿದ ಚಂದ್ರಶೇಖರ್ ಆಝಾದ್ ಇಹಲೋಕ ತ್ಯಜಿಸಿ ಇಂದಿಗೆ 89 ವರ್ಷ
-
ಹಿಂದುಸ್ಥಾನದ ಸಕಲ ಪ್ರಜೆಗಳಿಗೂ ಛತ್ರಪತಿ ಶಿವಾಜಿ ಮಹಾರಾಜರ 390ನೇ ಜನುಮ ದಿನದ ಶುಭಾಶಯಗಳು
-
ಹಸಿವಿನಿಂದ ಬಳಲಿ ಬಡ ಜನರು ಮರಣ ಹೊಂದುತ್ತಿರುವ ಕಾಲಘಟ್ಟದಲ್ಲಿ,
ಜೀವನದಲ್ಲೊಮ್ಮೆ ಸಾದ್ಯವಾದರೆ, ಖತ್ವಾಬನ ಮಗ ಉಮರನ ಬಗ್ಗೆ ತಿಳಿದುಕೊಳ್ಳಿ
ತನ್ನ ಸಾಮ್ರಾಜ್ಯವಾದ ಯೂಫ್ರಟೀಸ್ ತೀರದಲ್ಲಿ,
ಒಂದು ಆಡಿನ ಮರಿಯೆಲ್ಲಾದರೂ ಹಸಿವಿನಿಂದ ಮರಣ ಹೊಂದಿದರೆ, ತನ್ನನ್ನು ಸೃಷ್ಟಿಸಿದವನ ಮುಂದೆ ಉತ್ತರಿಸಬೇಕಾದೀತು ಎಂಬ ಭಯದಿಂದ ಕಣ್ಣೇರಿಟ್ಟಿದ್ದ ಜನನಾಯಕ ಉಮರನನ್ನು ಅರಿಯಿರಿ
ದಿನಸಿ ಇಲ್ಲದ ಕಾರಣ ಹಸಿವಿನಿಂದ ಜೀವನ ಕಳೆಯುತ್ತಿದ್ದವರೊಬ್ಬರ ಮನೆಗೆ,ಸ್ವತಃ ದಿನಸಿ ಹೊತ್ತು ನಡೆದ ಆ ಉಮರನನ್ನು ಅರಿಯಿರಿ
ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಆಗ್ರಹಿಸಿದ್ದ ಆ ಖತ್ವಾಬನ ಪುತ್ರ ಉಮರನ ಆಡಳಿತವನ್ನು ಪ್ರತಿಯೊಬ್ಬ ನಾಯಕನೂ ಅರಿಯಿರಿ
-
ನೀವು ಬಯಸಿದ್ದು ನಿಮಗೆ ವಿಧಿಸಿದ್ದೇ ಆಗಿದ್ದಲ್ಲಿ,
ಅದೆಷ್ಟೇ ದೊಡ್ಡ ಪರ್ವತ ಶಿಖರಗಳ ಮಧ್ಯೆ ಇದ್ದರೂ,
ನಿಮ್ಮಲ್ಲಿಗೆ ತಲುಪಿರುತ್ತದೆ.
ಒಂದು ಪಕ್ಷ,
ನೀವು ಬಯಸಿದ್ದಕ್ಕೆ ನೀವು ಅರ್ಹರಲ್ಲದಿದ್ದರೆ,
ಅದು ನಿಮ್ಮ ತುಟಿಗಳ ಮಧ್ಯೆ ಬಂಧಿತವಾಗಿದ್ದರೂ
ಸಹ ನಿಮಗೆ ಸಿಗುವ ಪ್ರಮೇಯವೇ ಇಲ್ಲ
~ಖಲೀಫ ಉಮರ್(ರ.ಅ)
-
🇮🇳ಚಹಾ ಮತ್ತು ಉಪ್ಪಿನಕಾಯಿ ಮಾರುವವರ ಮನಸ್ಸಿಗೆ ನೋವುಂಟು ಮಾಡುವ ಇಂತಹ ಸಂದೇಶ ಕಂಡಾಗ ಕನಿಷ್ಠ ಪಕ್ಷ ಪಂಚರ್ ಹಾಕುವ ಒಬ್ಬನಾದರೂ ಆ ನೋವಿನ ಪರವಾಗಿ ಎದ್ದು ನಿಲ್ಲಬೇಕು, ಅದು ನಮ್ಮ ಭಾರತೀಯತೆ🇮🇳
ವಾಟ್ಸಾಪ್ ಮುಖಾಂತರ ಚಹಾ ಮತ್ತು ಉಪ್ಪಿನಕಾಯಿ ಮಾರುವವರ ಕೈಯಲ್ಲಿ ದೇಶವನ್ನು ನೀಡಿದರೆ ಎಂಬ ಪೋಸ್ಟ್ ನನ್ನ ಕಣ್ಣಿಗೆ ಬಿತ್ತು.
ಪಂಕ್ಚರ್ ಹಾಕಿದವನ ಪರವಾಗಿ ಧ್ವನಿ ನಾನಂದು ಎತ್ತಿದ್ದು, ಅವರು ನನ್ನ ಅಥವಾ ನಮ್ಮ ಹೋರಾಟದ ಪರವಾದ ಧ್ವನಿ ಎತ್ತಿದ್ದಕ್ಕೂ ಅಲ್ಲ,
ಅದರಲ್ಲಿ ನನ್ನ ಸಮುದಾಯದವರು ಇದ್ದರು ಎಂಬ ಕಾರಣಕ್ಕೂ ಅಲ್ಲ,
ಆ ಕೆಲಸಕ್ಕೆ ಹಾಗೂ ಕೆಲಸಗಾರರಿಗೆ ಮಾಡಿದ ನಿಂದನೆಯ ವಿರೋಧವಾಗಿತ್ತು, ನನ್ನ ವಿರೋಧ.
ಹಾಗೆಯೇ ಇದನ್ನು ಪೋಸ್ಟ್ ಮಾಡಿದವನು ಎಷ್ಟೇ ದೊಡ್ಡ ವಿದ್ವಾಂಸನಾಗಿದ್ದರೂ,ಎಷ್ಟೇ ದೊಡ್ಡ ಅವಿವೇಕಿಯಾಗಿದ್ದರೂ ಸಹ ಅವನಿಗೇ ನೇರವಾಗಿ ತಲುಪಿದರೆ ಮಾತ್ರ ನಾ ಬರೆದದ್ದಕ್ಕೆ ಸಾರ್ಥಕ...
ಹೇ ಮೂರ್ಖ ಸಹೋದರ, ವಾಟ್ಸಾಪ್ ಯುನಿವರ್ಸಿಟಿಯ ಕಿಡಿ ಹಚ್ಚುವವನೇ,
ನಿನ್ನಲ್ಲಿ ನ್ಯಾಯವಿದೆ ಎಂಬ ವಿಶ್ವಾಸ ನಿನಗಿದ್ದರೆ,
ನಿನಗೆ ದ್ವೇಷವಿರುವ ರಾಜಕೀಯ ಪಕ್ಷದ ಅಥವಾ ನಾಯಕರ ವಿರುದ್ಧ ಏನು ಬೇಕಾದರೂ ಮಾತಾಡು,, ಆದರೆ ಯಾವ ಉದ್ಯೋಗವನ್ನು ಮತ್ತು ಉದ್ಯೋಗಸ್ಥರನ್ನು ತಾತ್ಸಾರ ಮಾಡುವಂತಹ ಇಂತಹ ಸಂದೇಶಗಳನ್ನು ರವಾನಿಸಬೇಡ
ಇಂದು ಚಹಾ ಹಾಗೂ ಉಪ್ಪಿನಕಾಯಿ ಮಾರಿಕೊಂಡೇ ಅದೆಷ್ಟೋ ಪ್ರಾಮಾಣಿಕವಾಗಿ ಸಮಾಜ ಸೇವೆಗಳನ್ನು ಮಾಡುತ್ತಿರುವ ಜನರು ಮುಂದೊಂದು ದಿನ ನಾಡಿನ ನಾಯಕನಾಗುವ ಸಾಧ್ಯತೆಗಳಿರುವಾಗ ಅವರಿಂದ ಏನೂ ಸಾಧ್ಯವಿಲ್ಲ ಎಂಬರ್ಥ ಬರುವ ನಿನ್ನ ಈ ಪೋಸ್ಟ್ಗೆ ನನ್ನ ಧಿಕ್ಕಾರವಿದೆ..
-
ನಾಡಿನ ಮತ್ತು ಜನರ ಅಭಿವೃದ್ಧಿಯನ್ನೇ
ತನ್ನ ಜೀವನದ ಧ್ಯೇಯವಾಗಿಸಿದ,
ಧೀಮಂತ ನಾಯಕನಿಗೆ
ತುಂಬು ಹೃದಯದಿಂದ
56ನೇ ವರ್ಷದ ಜನುಮ
ದಿನದ ಶುಭಾಶಯಗಳು
-