ಹೆಜ್ಜೆ ಗೆಜ್ಜೆಗಳ ನಿನಾದದಲಿ......
[READ CAPTION]-
ಮೌನ ಪ್ರಿಯೆ..
ಅವನೆನ್ನ ... read more
ಕೆಂಡದಂತೆ
ಸುಡುತಿದ್ದ
ನೋವುಗಳ
ನಡುವೆ ಸಿಲುಕಿ
ಸತ್ತ ಭಾವನೆಗಳ
ಬೂದಿಯನು
ತೇಲಿ ಬಿಡಲು
ಮನವೀಗಷ್ಟೇ
ಹೊರಟಿದೆ
ನೆನಪಿನ
ದೋಣಿಯಲ್ಲಿ..!!-
ಜೀವನದಲ್ಲಿ ಸೋಲು ಕೂಡ ಒಂದು ಪರೀಕ್ಷೆಯೇ...!!
ನಾವದನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ಅದರ ಫಲಿತಾಂಶವು ನಿಗದಿಯಾಗತ್ತದೆ.-
ಸೋಲು ಹಾಗೂ ನೋವನ್ನು ಎಂದು ನಾವು ನಗುವಿನೊಂದಿಗೆ ಸ್ವೀಕರಿಸುತ್ತೇವೆಯೋ ಅಂದೇ ನಮ್ಮ ಭವಿಷ್ಯದ ಗೆಲುವಿನ ಮುನ್ನುಡಿಯು ಅಚ್ಚಾಗುತ್ತದೆ.
-
ಆಸೆಯೇ ದುಃಖಕ್ಕೆ ಮೂಲವೆನ್ನುತ್ತ ದುರಾಸೆಯನ್ನೇ ಮನದಿ ತುಂಬಿಕೊಂಡು, ಅಸೂಯೆ ಒಳ್ಳೆಯದಲ್ಲವೆನ್ನುತ್ತಲೇ ಇನ್ನೊಬ್ಬನ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಾ, ಇತರರನ್ನು ಎಂದಿಗೂ ನೋಯಿಸಬೇಡವೆನ್ನುತ್ತಲೇ ಮಾನವೀಯತೆಯನ್ನು ಮರೆತವರೆಲ್ಲರೂ ಕೂಡ ಇಲ್ಲಿ ಬುದ್ಧರೇ...!
ಆಧುನಿಕ ಬುದ್ಧರು..!!-
ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಅತಿಯಾಗಿ ಯೋಚಿಸುತ್ತಾ ಕುಳಿತರೆ ಮನಸ್ಸು ಖಿನ್ನತೆಯತ್ತ ಜಾರುತ್ತದೆಯೇ ಹೊರತು ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ.
-
ಮನಸ್ಸು ಕಂಡ ಕನಸನ್ನು ನನಸಾಗಿಸಿ
ತನ್ನ ಜೀವನವ ತಾನೇ
ರೂಪಿಸಿಕೊಳ್ಳಬೇಕೆಂದು ಬಯಸಿದವಳ
ಸಾಧನೆಯ ಹಾದಿಗೆ
ಮದುವೆಯೇ ಮುಳ್ಳಾದಾಗ....
-
ಗುರಿಯೆಡೆಗೆ ಸಾಗುವ ದಾರಿಯಲ್ಲೆದುರಾಗುವ ಸೋಲು,ನೋವುಗಳಿಂದಲಿ ಹರಿವ ಕಣ್ಣೀರನ್ನು ಮನದಿ ನೆಟ್ಟಿರುವ ನಿನ್ನ ಕನಸಿಗೆ ಧಾರೆಯೆರೆದು ಬಿಡು. ಸಾಗುವ ದಾರಿಯಲ್ಲಿ ಗೆಲ್ಲಲೇ ಬೇಕೆನ್ನುವ ಛಲ ಇನ್ನಷ್ಟು ಹೆಚ್ಚಾಗುತ್ತದೆ.
-