ನಾನು ಒಂದು ಕುರಿಯನ್ನ 8000 ಸಾವಿರ ಕೊಟ್ಟು ಖರೀದಿಸಿದೆ.
ಅದನ್ನ 10000 ಸಾವಿರಕ್ಕೆ ಮಾರಾಟ ಮಾಡಿದೆ.
ಮತ್ತೆ ಅದೇ ಕುರಿಯನ್ನ 11000 ಸಾವಿರಕ್ಕೆ ಖರೀದಿಸಿದೆ.
ನಂತರ 13000 ಸಾವಿರಕ್ಕೆ ಮಾರಾಟ ಮಾಡಿದೆ.
ಆಗಿದ್ರೆ ಈ ವ್ಯಾಪಾರದಲ್ಲಿ ನನಗೆ ಬಂದ ಲಾಭ ಎಷ್ಟು..!?-
ನಿಮಗಂತಲೇ ಸಮಯ
ಕೊಡುವವರನ್ನ ಗೌರವಿಸಿ.
ಏಕೆಂದ್ರೆ ಅವರು
ಅಂಚಿಕೊಳ್ಳುವುದು ಕೇವಲ ಸಮಯವಲ್ಲ,
ಅವರ ಜೀವನದ ಒಂದು ಭಾಗವನ್ನ..!!
ಮಂಜುನಾಥ್ ಹೊಸಹಳ್ಳಿ-
ಸುಳ್ಳು
ಅತಿಬೇಗ ಮಾರಾಟ
ವಾಗಿಬಿಡುತ್ತದೆ.
ಯಾಕಂದ್ರೆ
ಸತ್ಯವನ್ನು
ಖರೀದಿಸುವ
ಯೋಗ್ಯತೆ ಎಲ್ಲರಿಗೂ ಇರುವುದಿಲ್ಲ..!!-
ಜನ ಹಿಂದೆಯಿಂದ
ನಿಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿಕೊಳ್ತಾರೆ
ಎಂದರೆ,
ಅವರು ನಿಮಗಿಂತ
ತುಂಬಾ ಹಿಂದೆ ಇದ್ದಾರೆ
ಎಂದರ್ಥ..!!-
ವ್ಯಕ್ತಿ ನಮ್ಮವನೆಂದುಕೊಂಡರೆ
ಆತ ಬೈದರೂ ಬುದ್ದಿವಾದಂತೆ ಕಾಣುತ್ತದೆ.
ನಮ್ಮವನಲ್ಲ ಎಂದುಕೊಂಡರೆ
ಬುದ್ದಿವಾದವೂ ಬೈದಂತೆ ಕಾಣುತ್ತದೆ..!!-
ಪುಸ್ತಕದ ನಡುವಲ್ಲಿ ಮಡಿಚಿಟ್ಟ
ನವಿಲುಗರಿಯ ಜೊತೆಗೆ
ನಿನ್ನ ನೂರು ನೆನಪು ಇನ್ನೂ ಜೀವಂತ-
ಸತ್ಯ
ತುಂಬಾ ಚೂಪಾಗಿರುತ್ತದೆ.
ಅದಕ್ಕೆ
ಎಲ್ಲರಿಗೂ ಬೇಗ ಚುಚ್ಚುತ್ತೆ..!!-
ಕೆಲವರು ನಮ್ಮನ್ನು
ಬಳಸಿಕೊಳ್ಳಲೆಂದೆ,
ಅವರ ಲಿಸ್ಟ್ ನಲ್ಲಿ
ನಮ್ಮನ್ನು ಇಟ್ಟುಕೊಂಡಿರುತ್ತಾರೆ.🕷-
ತಿಳಿಯಲಿಲ್ಲ,
ಅಂದು ತಿರುಗಿ ತಿರುಗಿ ನೋಡಿದ್ದು
ನೀ ಯಾಕೆಂದು.
ಆ ಕಾರಣ ಹಾಗೆಯೇ
ಉಳಿದು ಬಿಟ್ಟಿದೆ,
ಉತ್ತರವೇ ಸಿಗದೆ ಪರಿತಪಿಸುತ್ತಿದೆ
ಇಂದು.. ಎಂದೆಂದು..!!-