ಮಂಜುಳಾದೇವಿ ಎಂ.ರೇಣುಕೇಶ್   (ಮಂಜುಳಾದೇವಿ ಎಂ ರೇಣುಕೇಶ್)
852 Followers · 405 Following

Joined 9 April 2019


Joined 9 April 2019

ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣ ಇವುಗಳ ಪ್ರಭಾವದಿಂದ ಒಂದು ದೇಶದ ಆರ್ಥಿಕ ವ್ಯವಸ್ಥೆ
ಬಲಿಷ್ಠ ವಾಗಿದ್ದೇನೋ ಹೌದು, ಆದರೆ ಅದಕ್ಕಿಂತ ಹೆಚ್ಚಾಗಿ ಆ ದೇಶದ ಸ್ಥಳೀಯತೆ ಮತ್ತು ಸಂಸ್ಕೃತಿ ದುರ್ಬಲವಾಗಿದ್ದು, ನಾಶದತ್ತ ನಾಗಾಲೋಟದಿಂದ ಮುನ್ನಡೆಯುತ್ತಿರುವುದು ಮಾತ್ರ ನಿಜಕ್ಕೂ ವಿಷಾದನೀಯ.

-



ಅಹಂಕಾರದ ಪರದೆ
ಹರಿಯದ ಹೊರತು,
ಅಂಧಕಾರ ಅಳಿಯದು.

-



ಭಂಡತನ ಬದುಕು ನೀಡಿರಬಹುದು,
ಆದರೆ, ಭಂಡತನವೇ ಬದುಕಾಗಬಾರದು.

-



ಲಾಭ, ನಷ್ಟದ ಆಧಾರದ ಮೇಲೆ
ಸಂಬಂಧಿಕರನ್ನು ಕೂಡುವುದು,
ಕಳೆಯುವುದು.

-



ಯಾವುದೂ ಶಾಶ್ವತವಲ್ಲ ಎನ್ನುವ
ಸತ್ಯ ಅರಿತ ಮಾನವ,
ಶಾಶ್ವತವಲ್ಲದ ಸಮಸ್ಯೆಗಳಿಗೆ,
ಶಾಶ್ವತ ಪರಿಹಾರವನ್ನು ಹುಡುಕಲು
ಹೊರಡುವುದು ಮೂರ್ಖತನವಲ್ಲದೆ
ಜಾಣತನವೇ?

-



ಮಗಳನ್ನು ಯುವರಾಣಿಯಂತೆ ಕಾಣುವ ಅಪ್ಪ,
ಹೆಂಡತಿಯನ್ನು ದಾಸಿಯಂತೆ ಕಾಣುವುದು ವಿಪರ್ಯಾಸವಲ್ಲವೇ?

-



ಓ ಗೆಳತಿ...
ನಮ್ಮಿಬ್ಬರ ರುಚಿ ಅಭಿರುಚಿಯಲ್ಲಿ ಭಿನ್ನತೆಯಿರಲಿ,
ನಮ್ಮಿಬ್ಬರ ಅಧಿಕಾರ ಅಂತಸ್ತಿನಲ್ಲಿ ವ್ಯತ್ಯಾಸವಿರಲಿ,
ನಮ್ಮಿಬ್ಬರ ನಡೆನುಡಿಯಲ್ಲಿ ವೈವಿಧ್ಯತೆಯಿರಲಿ,
ಆದರೆ ಸಂಬಂಧಗಳೆಂದು ಬಂದಾಗ ನಮ್ಮಿಬ್ಬರಲ್ಲೂ ಮಿಡಿಯುವ ಅಂತಃಕರಣದಲ್ಲಿ ಏಕತಾನತೆಯಿರಲಿ.

-



'ಬಿಸಿಲಿನ ಝಳ'
'ನಳ'ದಲ್ಲಿ ಬಾರದ 'ಜಲ'
ಇವುಗಳ ಬಗ್ಗೆ
'ಕಾಡುಹರಟೆ'
ಹೊಡೆಯುತ್ತಾ
ಕಾಲಕಳೆಯುತ್ತಿರುವ
ಓ 'ನರಮಾನವ';
ಇದರ 'ಮೂಲ'ವನ್ನು
ಕುರಿತು ಚಿಂತಿಸದಾದೆ ಏಕೆ!

-



ವಸ್ತುಗಳ ಬಗ್ಗೆ ವ್ಯಾಮೋಹವನ್ನು ತೊರೆಯದೆ,
ವಿಚಾರಗಳ ಬಗ್ಗ ವಿಶೇಷ
ಆಸಕ್ತಿಯನ್ನು ಬೆಳೆಸಿಕೊಳ್ಳದೆ,
ವ್ಯಕ್ತಿತ್ವದ ವಿಕಾಸವಾಗಲಿ,
ಸಮಾಜದ ಅಭಿವೃದ್ಧಿ ಯಾಗಲಿ,
ದೇಶದ ಏಳಿಗೆಯಾಗಲಿ ಸಾಧ್ಯವಿಲ್ಲ.

-



ಸಂಬಂಧಗಳಲ್ಲಿ ಸವಿಯು
ಹಾಗೆಯೇ ಉಳಿಯಬೇಕಾದರೆ,
ಅಂತರವನ್ನು ಉಳಿಸಿಕೊಳ್ಳುವುದು
ಸಹ ಅನಿವಾರ್ಯ.

-


Fetching ಮಂಜುಳಾದೇವಿ ಎಂ.ರೇಣುಕೇಶ್ Quotes