ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣ ಇವುಗಳ ಪ್ರಭಾವದಿಂದ ಒಂದು ದೇಶದ ಆರ್ಥಿಕ ವ್ಯವಸ್ಥೆ ಬಲಿಷ್ಠ ವಾಗಿದ್ದೇನೋ ಹೌದು, ಆದರೆ ಅದಕ್ಕಿಂತ ಹೆಚ್ಚಾಗಿ ಆ ದೇಶದ ಸ್ಥಳೀಯತೆ ಮತ್ತು ಸಂಸ್ಕೃತಿ ದುರ್ಬಲವಾಗಿದ್ದು, ನಾಶದತ್ತ ನಾಗಾಲೋಟದಿಂದ ಮುನ್ನಡೆಯುತ್ತಿರುವುದು ಮಾತ್ರ ನಿಜಕ್ಕೂ ವಿಷಾದನೀಯ.
ಓ ಗೆಳತಿ... ನಮ್ಮಿಬ್ಬರ ರುಚಿ ಅಭಿರುಚಿಯಲ್ಲಿ ಭಿನ್ನತೆಯಿರಲಿ, ನಮ್ಮಿಬ್ಬರ ಅಧಿಕಾರ ಅಂತಸ್ತಿನಲ್ಲಿ ವ್ಯತ್ಯಾಸವಿರಲಿ, ನಮ್ಮಿಬ್ಬರ ನಡೆನುಡಿಯಲ್ಲಿ ವೈವಿಧ್ಯತೆಯಿರಲಿ, ಆದರೆ ಸಂಬಂಧಗಳೆಂದು ಬಂದಾಗ ನಮ್ಮಿಬ್ಬರಲ್ಲೂ ಮಿಡಿಯುವ ಅಂತಃಕರಣದಲ್ಲಿ ಏಕತಾನತೆಯಿರಲಿ.
ವಸ್ತುಗಳ ಬಗ್ಗೆ ವ್ಯಾಮೋಹವನ್ನು ತೊರೆಯದೆ, ವಿಚಾರಗಳ ಬಗ್ಗ ವಿಶೇಷ ಆಸಕ್ತಿಯನ್ನು ಬೆಳೆಸಿಕೊಳ್ಳದೆ, ವ್ಯಕ್ತಿತ್ವದ ವಿಕಾಸವಾಗಲಿ, ಸಮಾಜದ ಅಭಿವೃದ್ಧಿ ಯಾಗಲಿ, ದೇಶದ ಏಳಿಗೆಯಾಗಲಿ ಸಾಧ್ಯವಿಲ್ಲ.