ದುಡ್ಡು ಇವತ್ತು ಬರುತ್ತೆ ನಾಳೆ ಹೋಗುತ್ತೆ,
ನಮಗೆ ವ್ಯಕ್ತಿ ಮುಖ್ಯ ಅಂತ ಹೇಳ್ತಾರೆ,
ಆದರೆ ಆ ವ್ಯಕ್ತಿ ಹತ್ರ ದುಡ್ಡಿದ್ದಾಗ,
ಅವನ ಅವಶ್ಯಕತೆಯಿದ್ದಾಗ ಮಾತ್ರ
ವ್ಯಕ್ತಿ ತುಂಬಾ ಮುಖ್ಯವಾಗ್ತಾನೆ... ಏಕೆಂದರೆ,
ಇಲ್ಲಿ ಸಂಬಂಧಗಳಿಗಿಂತ ವ್ಯಕ್ತಿಯ ಸಂಪಾದನೆ
ಶ್ರೇಷ್ಠವಾಗಿರುತ್ತದೆ..!
“ಗಳಿಕೆ, ಉಳಿಕೆ, ಬಳಕೆ”-
"ಯುವ ಮನಸ್ಥಿತಿ" ಪುಸ್ತಕದ ಲೇಖಕರು... read more
ಉದ್ಯೋಗವೆಂದರೆ ಕೇವಲ ಸಂಬಳವಲ್ಲ,
ಅದು ನಮ್ಮ ಕನಸುಗಳನ್ನು ಕಟ್ಟುವ ಮೆಟ್ಟಿಲು...
ಇಲ್ಲಿ ಹೊಗಳಿಕೆಗಳು, ತೆಗಳಿಕೆಗಳು ಶಾಶ್ವತವಲ್ಲ,
ಬದಲಾಗಿ ನೆಮ್ಮದಿ, ಗೌರವ, ಮನ್ನಣೆ, ನಂಬಿಕೆಗಳು
ಮಾತ್ರ ಶಾಶ್ವತವಾಗಿ ಉಳಿಯುತ್ತವೆ.
“ಸಮಾನತೆ, ಸ್ವಾತಂತ್ರ್ಯ, ಸ್ವಾಭಿಮಾನ”-
ಬರೋ ದಿನಗಳು ಒಳ್ಳೆಯವಾದರೆ,
ಸಿಗೋ ಜನಗಳು ಒಳ್ಳೆಯವರಾಗಿರಲಿ...
ಏಕೆಂದರೆ,
ಸಂತೋಷ, ನೆಮ್ಮದಿ, ನಂಬಿಕೆ, ಒಳ್ಳೆಯ
ದಿನಗಳಿಂದ ಸಿಗುವುದಿಲ್ಲ..., ಅದು
ಒಳ್ಳೆಯ ಜನರಿಂದ ಮಾತ್ರ ಸಿಗುತ್ತದೆ..
ಯೋಚಿಸಿ, ತಿಳಿಸಿ, ಬದಲಾಯಿಸಿ.... 😎-
ಕೆಲವೊಮ್ಮೆ ಒಳ್ಳೆಯತನ, ಪ್ರಾಮಾಣಿಕತೆಯನ್ನು
ಸಾಬೀತುಪಡಿಸುವ ಅವಶ್ಯಕತೆಯಿರುವುದಿಲ್ಲ..,
ನಮ್ಮ ವ್ಯಕ್ತಿತ್ವ, ನಮ್ಮ ವಿಚಾರಗಳು ಸರಿಯಾಗಿದ್ದರೆ
ಸಮಯವೇ ನಮ್ಮ ಶ್ರೇಷ್ಠತೆಯನ್ನು, ಗೌರವವನ್ನು
ಹೆಚ್ಚಿಸುತ್ತದೆ..
ಜಾಣರಾಗಿರಿ, ಜಾಗೃತರಾಗಿರಿ, ಜನಸ್ನೇಹಿಯಾಗಿರಿ..-
ರಕ್ಷಾ ಬಂಧನದ ಶುಭಾಶಯಗಳು
************************
ಸಹೋದರನ ಸಂತೋಷ, ಯಶಸ್ಸು, ಆರೋಗ್ಯ ಬಯಸುವ,
ಹುಣ್ಣಿಮೆಯ ವಿಶೇಷ ದಿನವೂ,
ಸಹೋದರತೆ ಬೆಸೆಯುವ ಬಾಂಧವ್ಯವೂ,
ರಕ್ಷಿಸುವ ರಕ್ಷಣೆಯ ಬಂಧನವೂ,
ಆತ್ಮೀಯತೆ, ಪ್ರೀತಿ, ನಂಬಿಕೆಯ ಸಂಕೇತವೂ,
ಶಾಶ್ವತವಾಗಿ ಉಳಿಯಲಿ ಈ ಅನುಬಂಧವೂ,
ಈ ದಿನ ಶುಭ ಸೂಚಕವೂ ಶುಭ ಘಳಿಗೆಯೂ.-
ಬೇರೆಯವರ ಮಾತುಗಳಿಂದ
ನೀನು ಗುರುತಿಸಿಕೊಳ್ಳದೆ,
ನಿನ್ನ ಕೆಲಸವೇ ನಿನ್ನ ಗುರುತಾಗಲಿ..... ಏಕೆಂದರೆ,
ಕಾರ್ಯಸ್ಥಳದಲ್ಲಿ ಗೌರವ ಪಡೆಯುವುದು
ನಿನ್ನ ಉತ್ತಮ ಕೆಲಸದ ಪರಿಣಾಮವಾಗಿರುತ್ತದೆ.-
ಸ್ನೇಹಿತರ ದಿನದ ಶುಭಾಶಯಗಳು
************************
ಸ್ನೇಹಿತ ಬದುಕಿಗೆ ಹಿತ,
ಈತ ನಗುವನ್ನು ರಕ್ಷಿಸುವ ರಕ್ಷಕ,
ಏನು ಆಗದಂತೆ ನೋಡಿಕೊಳ್ಳುವ ಆರಕ್ಷಕ,
ನಿತ್ಯದ ತಿಳುವಳಿಕೆಗೆ ಶಿಕ್ಷಕ,
ಉತ್ಸಾಹ ತುಂಬಲು ಅವಶ್ಯಕ...
ಜನರು ಅನುಮಾನಿಸಿದರೂ
ಬಂಧುಗಳು ಅವಮಾನಿಸಿದರೂ, ಸ್ನೇಹಿತ
ಅಭಿಮಾನ ತೋರಿಸಿ ಜೊತೆ ನಿಲ್ಲುವನು..-
ವೃತ್ತಿಯು ಶಾಶ್ವತವಲ್ಲ, ಬದುಕು ಶಾಶ್ವತವಲ್ಲ...
ಆದರೆ ಬದುಕಬೇಕೆಂದರೆ ವೃತ್ತಿಯು ಅವಶ್ಯಕ...
ಜೊತೆಗಿದ್ದವರ ವಿದಾಯವು ಒಂದೊಮ್ಮೆ
ನಮ್ಮನ್ನು ಭಾವುಕರನ್ನಾಗಿಸುತ್ತದೆ.....
ಕೆಲವು ಪರಿಸ್ಥಿತಿಗಳು ಕಲಿಸಿದ ಪಾಠಕ್ಕೆ
ಹೊಂದಿಕೊಂಡು, ಸಹಿಸಿಕೊಂಡು ಮುಂದೆ ಸಾಗಬೇಕು...
ವ್ಯಕ್ತಿ ಬದಲಾಗಬಹುದು ಆದರೆ ವ್ಯಕ್ತಿಯ
ನೆನಪುಗಳು, ಜೊತೆಗೆ ಕಳೆದ ಸಂತೋಷದ ಕ್ಷಣಗಳು
ಎಂದಿಗೂ ಬದಲಾಗದೆ ನೆನಪಿನಲ್ಲಿ ಉಳಿಯುವವು..!
-
ಪ್ರೀತಿ ಕುಡಿಯುವ ನೀರಂತೆ,
ಸ್ವಚ್ಚವಾಗಿದ್ದರೆ ಜೀವ ನೀಡುತ್ತದೆ
ಕಲುಷಿತವಾದರೆ ಅಪಾಯ ತರುತ್ತದೆ..
ಎಂದಿಗೂ ಪ್ರೀತಿಯನ್ನು ಪ್ರೀತಿಸು
ಪರೀಕ್ಷಿಸದಿರು....!-
ಒಳ್ಳೆಯತನ ಸದಾ
ನಿನ್ನನ್ನು ಕಾಪಾಡುತ್ತದೆ,,
ನಿನ್ನ ಸುತ್ತಲೂ
ಒಳ್ಳೆಯವರಿದ್ದಾಗ ಮಾತ್ರ...-