ಮಣ್ಣು ಕೆಸರಿನಿಂದ ಕೂಡಿರಬಹುದು..., ಆದರೆ
ಅದರಲ್ಲಿ ಹುಟ್ಟುವುದು ಸುಗಂಧದ ಹೂವೆ..!
ಹಾಗೆಯೇ ಕೆಲವೊಮ್ಮೆ ವ್ಯಕ್ತಿಯ
ಪ್ರಾಮಾಣಿಕ ಕೆಲಸಕ್ಕೆ, ಬೆಲೆ ಕೊಡದಿರಬಹುದು..,
ಆದರೆ ಖಂಡಿತವಾಗಿಯೂ ಆ ವ್ಯಕ್ತಿಯ ಕೆಲಸದ
ಮಹತ್ವ, ಅನುಪಸ್ಥಿತಿ ಕಾಡುತ್ತದೆ.....-
"ಯುವ ಮನಸ್ಥಿತಿ" ಪುಸ್ತಕದ ಲೇಖಕರು... read more
ಪ್ರತಿಯೊಬ್ಬರ ಬದುಕು ವಿಭಿನ್ನ ಕಥೆಗಳಿಂದ
ಕೂಡಿರುತ್ತದೆ.,
ಕೆಲವು ಕೆಲಸಗಳು ಕೆಲವರಿಗೆ ಸಣ್ಣದೆನಿಸಿದರೂ,
ಆ ಸಣ್ಣ ಕೆಲಸಗಳೇ ಕೆಲವರಿಗೆ ಜೀವನದ
ಕನಸಾಗಿರುತ್ತವೆ..
ಇಲ್ಲಿ ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳದೆ,
ಬಂದಿದ್ದನ್ನು ಸ್ವೀಕರಿಸಿ ಸಂತೋಷದಿಂದಿರಬೇಕು...-
ಬದುಕಿನಲ್ಲಿ ಕೆಲವೊಮ್ಮೆ,
ಕೆಲವು ವಿಷಯಗಳಲ್ಲಿ
ಇನ್ನೊಬ್ಬರಿಗೆ ನಾವು ಬಳಕೆಯಾಗುತ್ತಿರುವೆವೋ
ಅಥವಾ ಬೆಳವಣಿಗೆ ಹೊಂದುತ್ತಿರುವೆವೋ
ಎಂಬುದು ತಿಳಿಯುವುದೇ ಇಲ್ಲ..!-
ಸಾಧನೆಯಷ್ಟೇ ಜೀವನವಲ್ಲ,
ಬದುಕಿನಲ್ಲಿ ಸಂತೋಷದಿಂದ ಇರುವುದು ಕೂಡ
ಸಾಧನೆಯೇ........... ಆದರೆ,
ಸಂತೋಷವು ನಾವು ಮಾಡುವ ಕೆಲಸದಿಂದ(ವೃತ್ತಿ)
ಬರುವುದೋ?
ಸಾಕಷ್ಟು ಹಣ ಸಂಪಾದಿಸಿದಾಗ ಬರುವುದೋ?
ಸಮಾಜದಲ್ಲಿ ಗೌರವ, ಸ್ಥಾನಮಾನಗಳು ಸಿಕ್ಕಾಗ
ಬರುವುದೋ? ಗೊತ್ತಿಲ್ಲ...-
ಒಬ್ಬ ವ್ಯಕ್ತಿಯ ಅನುಪಸ್ಥಿತಿಯಲ್ಲಿ ಅವನನ್ನು
ಹೊಗಳಲು, ಅಥವಾ ಬಯ್ಯಲು ಹೋಗದಿರಿ
ಏಕೆಂದರೆ ಅವನ ಮುಂದೆ ಹೊಗಳಿದಾಗ ಅವನು
ಬದುಕಿನಲ್ಲಿ ಮತ್ತಷ್ಟು ಉತ್ಸಾಹಿತನಾಗಿ ಕೆಲಸ
ಮಾಡುತ್ತಾನೆ.. ಬೈದರೆ ಅವನು ತನ್ನ
ತಪ್ಪುಗಳನ್ನು ತಿದ್ದಿಕೊಳ್ಳುತ್ತಾನೆ..
ಇಲ್ಲಿ ಗಮನಿಸುವ ಅಂಶವೆಂದರೆ “ಅವನ ಎದುರಿಗೆ
ನೀವು ಬೈದರೆ ನಿಮ್ಮ ಧೈರ್ಯವು ಎಷ್ಟಿದೆ
ಎಂಬುದು ತಿಳಿಯುತ್ತದೆ”.-
ಕೆಲವೊಮ್ಮೆ ಕೆಲವರಲ್ಲಿ ಭಾವನೆಗಳಿರುವುದಿಲ್ಲ,
ಮಾತುಗಳಿರುತ್ತವೆ...
ಕಿಂಚಿತ್ತೂ ಕೃತಜ್ಞತೆಯಿರುವುದಿಲ್ಲ, ಕಾರಣ
ಹಣದ ಬಲವಿರುತ್ತದೆ...
ಮಾನವೀಯತೆಯಿರುವುದಿಲ್ಲ, ಆದರೆ
ಮರೆಯುವ ಗುಣವಿರುತ್ತದೆ...
ಪರಿಶ್ರಮಕ್ಕೆ ಬೆಲೆಯಿರುವುದಿಲ್ಲ,
ಪರರ ಮೇಲೆ ನಂಬಿಕೆಯಿರುತ್ತದೆ...-
ಅಪ್ಪ
*********
ಅದೃಷ್ಟ ಕೈ ಬಿಟ್ಟರೂ, ಜನರು ಕೈ ಬಿಟ್ಟರೂ
ಅವಕಾಶಗಳು ಕೈ ಬಿಟ್ಟರೂ, ತಂದೆ ಮಾತ್ರ
ಕೈ ಬಿಡದೆ ದಾರಿಯ ತೋರಿಸುವನು...
ತಾನು ನೋಡದ ಜಗವ
ಮಕ್ಕಳು ನೋಡಲೆಂದು ಬಯಸುವನು,
ತಾನು ಪಡೆಯದ ಖುಷಿಯ
ಬದುಕನ್ನು ಮಕ್ಕಳಿಗೆ ನೀಡುವನು,
ಮಕ್ಕಳ ನಗುವಿನಲ್ಲಿ ತನ್ನ ನೋವ
ಮರೆಯುವನು ನನ್ನಪ್ಪ...!-
ಪುಸ್ತಕಗಳು ಬದುಕುವುದನ್ನು ಕಲಿಸಿದರೆ,
ಅನುಭವಗಳು ಹೇಗೆ ಬದುಕಬೇಕೆಂದು ಕಲಿಸುತ್ತವೆ..
ಇಲ್ಲಿ ಪುಸ್ತಕದ ಪಾಠಗಳನ್ನು ಓದಿ ಕಲಿತವರಿಗಿಂತ,
ಜನರಿಂದ ಕಲಿತ ಪಾಠಗಳೇ ಬದುಕಿಗೆ ಹೆಚ್ಚು
ಸ್ಫೂರ್ತಿದಾಯಕವಾಗುತ್ತವೆ...-
ಒಳ್ಳೆಯ ಕೆಲಸಗಳೆಂದಿಗೂ
ನಮ್ಮ ಸಣ್ಣ ಪುಟ್ಟ ತಪ್ಪುಗಳೊಂದಿಗೆ
ಸೇರಿ ಕಾಣದೇ ಹೋಗಿಬಿಡುತ್ತವೆ.,
ಕೆಲವೊಮ್ಮೆ ಒಳ್ಳೆಯತನವು
ಕೃತಜ್ಞತೆಯಿಲ್ಲದೆ
ಅನಾಥವಾಗಿಬಿಡುತ್ತದೆ...-
ಗೌರವ ಗಳಿಸುವ ವಸ್ತುವಲ್ಲ,
ಅದು ವ್ಯಕ್ತಿತ್ವದ ಸಂಕೇತ..!
ಅನುಭವ ಸಿಗುವ ವಸ್ತುವಲ್ಲ,
ಅದು ಜೀವನಪಾಠದ ಸಂಕೇತ..!
ಅದೃಷ್ಟ ತಾನಾಗೆ ಸಿಗುವ ವಸ್ತುವಲ್ಲ,
ಅದು ಪ್ರಯತ್ನದ ಸಂಕೇತ..!-