ಕಲ್ಪನೆಯಲ್ಲಿ ನಿನ್ನ ಕಂಡೊಡನೆ
ಸಾವಿರ ಭಾವನೆಗಳ ಮಳೆಗೈಯುವೆ
ಕಣ್ಣ ಮುಂದೆ ಕಂಡೊಡನೆ
ಮಾತ್ತೆಲ್ಲ ಹೆಪ್ಪುಗಟ್ಟಿ ಮೌನವಾಗುವೆ ಅದೇಕೋ …!
ಹೇಳೋನೆಂದರೆ ಪದಗಳೇ ಸಾಲುತ್ತೀಲ್ಲ
ಸುಮ್ನಿರೋನಾ ಅಂದ್ರೆ ಮನಸ್ಸು ಕೇಳ್ತಿಲ್ಲ….!
-
ನನ್ನ ನೆಮ್ಮದಿ
ಅದಕ್ಕಿಲ್ಲ ಪರಿಧಿ
ಸಿಗದು ಅಂತ್ಯ ಆದಿ
ಬೇಕಿಲ್ಲ ಮೆಚ್ಚುಗೆ ಇತ್ಯಾದಿ
ನೀನು ………
ನೀನಾಗಿಯೇ ಇರು ಅದೇ “ಅಧ್ಬುತ”
ಬೇಕಿಲ್ಲ ಬೇರೆ ಅವಿರತ …….
ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿ ಅನನ್ಯ
ಅನುಕರಣೆ ಮಾಡಿ ಆಗಬೇಡ ನಗಣ್ಯ-
“ಸಂಬಂಧೀಕರ”……
ಬಾಯಿಚಪಲಕ್ಕೆ ಇನ್ನೊಬ್ಬರ ಜೀವನವೇ ಪಳಾರ
ದೇವರು ಕೊಟ್ಟಿಲ್ಲ ನಿಮಗೆ ಅಷ್ಟೊಂದು ಅಧಿಕಾರ
ಕೆಲವು ಸಂಬಧಗಳಿಗೆ ನೀನೇ ಬೆಂಕಿಇಡು
ನಿನ್ನ ನೆಮ್ಮದಿಯ ದೀಪ ಬೆಳಗಲಿ ಬಿಡು
ಕೇಸರ ಜೊತೆ ಇದ್ದಷ್ಟು ದೇಹ ಮನಸ್ಸು ಮಲೀನ
ಮುಕ್ತನಾದಮೇಲೆ ಆಗಬಹುದು ಶಿವನಲ್ಲಿ ಲೀನ
_Megha pujeri
-
“ಗುರಿ ಇಲ್ಲದೆ ಬದುಕು ಅದೇಕೋ ಬಹುಭಾರ
ಅರಗಿಸಿಕೊಳ್ಳಲಾಗುತ್ತಿಲ್ಲ ಬಹುದೂರ
ಶಿವ ಹೇಳಿಬಿಡೋ ಹಣೆಯಲಿ ಬರೆದ ದಾರಿ
ಅದರಂತೆ ಬದುಕುವೆ ಕನಸುಗಳ ಮಾರಿ”
-
ಅವನೆಂದರೆ ಹಾಗೇಯೇ….
ಮೈ ಕೊರೆವ ಚಳಿಯಲಿ
ಹಿಮವೇ ಕರಗಿ
ನಾಚುವಂತೆ
ಬಾಹು ಬಂಧನದಲ್ಲೇ ರಮಿಸುವವ!
-
ಭಾವನೆಗಳ ತೋಟದಲಿ ಎಂದೂ ಬಾಡದ ಹೂವು ಒಲವು
ಮನುಜ ಜೀವನದ ನಿಜವಾದ ಬಲವು
ಒಂದಿಷ್ಟು ಜನರಿಗೆ ಹೂವು ,
ಮತ್ತಷ್ಟು ಜನರಿಗೆ ಬುಡದ ಮುಳ್ಳು-
ಧರೆಗೆ ಮೊದಲ ಮಳೆಯ ಹನಿ
ಪ್ರತಿ ಹಾನಿಯಲಿ ನಿನ್ನದೇ ಧ್ವನಿ
ಆ ತಂಗಾಳಿಲಿ ಮಣ್ಣಿನ ಕಂಪು
ನೀನೆ ಬಳಸಿ ತಬ್ಬಿದಂತಂತೆ ತಂಪು-