Manjunath HJ   (©Manjunath H J)
11 Followers · 2 Following

read more
Joined 29 October 2020


read more
Joined 29 October 2020
20 DEC 2022 AT 12:16

ನಮ್ಮ ಕನ್ನಡದಲ್ಲಿ ಕನ್ನಡಿಗನ ಸಾಧನೆಯ ಹಾದಿಯ ಕಥೆಯೆ ವಿಜಯಾನಂದ.
ಕನ್ನಡ ದಿಂದ ಈ ಕಥೆ ದೇಶದಾದ್ಯಂತ ಹೇಳಿದ್ದು ನನಗೆ ತುಂಬಾ ಖುಷಿ ಕೊಟ್ಟಿತು‌, ಸಿನೆಮಾದಲ್ಲಿ ಕಲಿಯೋದು ತುಂಬಾ ಹೇಳಿದ್ದಾರೆ ಒಂದು ಜೀವನಾಧಾರಿತ ಕಥೆಯನ್ನ ತಾಂತ್ರಿಕವಾಗಿ ತುಂಬಾ ಚೆನ್ನಾಗಿ ಬೆಳ್ಳಿತೆರೆಯ ಮೇಲೆ ತೋರಿಸಿದ್ದಾರೆ. ರಿಶಿಕಾ ಶರ್ಮಾ ಅವರು ಇದನ್ನ ತೋರಿಸಿರೋ ರೀತಿ ತುಂಬಾ ಅದ್ಭುತ. ತಾಂತ್ರಿಕವಾಗಿ ಸೌಂಡ್ ಡಿಸೈನ್ ತುಂಬಾ ಚೆನ್ನಾಗಿ ಮಾಡಿದ್ದಾರೆ ಒಂದು ಜೀವನಾಧಾರಿತ ಕಥೆಯನ್ನ ಬರೆದ ಮೇಲೆ ಅದನ್ನ ಚಿತ್ರವಾಗಿ ತೋರಿಸೋದು ತುಂಬಾ ಕಷ್ಟ. ಆಯಾ ಪಾತ್ರಗಳು ಅವರಂತೆ ತೋರಿಸೋದು ಯಾರಿಗೂ ಧಕ್ಕೆಯುಂಟು ಮಾಡದೆ ಆಗಿರುವ ಕಥೆಯನ್ನು ಆಗಿರುವ ತರಹನೇ ತೊರಿಸಬೇಕು ಅದರಲ್ಲಿ ನಿರ್ದೇಶಕಿ ರಿಶಿಕಾ ಶರ್ಮ ವಿಜೇತರಾಗಿದ್ದಾರೆ ಮತ್ತೆ ಮತ್ತೆ ಆ ತಂದೆ ಮಕ್ಕಳ ಬಾಂಧವ್ಯನ ನೋಡ್ಬೇಕು ಅನ್ನೋ ತರ ಆ ಭಾವನೆಗಳನ್ನ ಕಟ್ಟಿ ಕೊಟ್ಟಿದ್ದೀರಿ. ಇದು ಕನ್ನಡಿಗನ ಕಥೆ ಕನ್ನಡಿಗರು ನೋಡಲೇ ಬೇಕಾದ ಕಥೆ.


ಸಂತೋಷ್ ಕುಮಾರ್ ಕೆ

-


2 DEC 2022 AT 21:28

ಪ್ರೀತಿ ಆಕಾಶದ ಎತ್ತರ ಅದಕ್ಕಾಗಿಯೇ
ಪ್ರೀತಿ ಸಿಗದಂತಹ ಉತ್ತರ..!!

-


1 NOV 2022 AT 1:21

ಕನ್ನಡ..!

ಅನುಬಂಧ ಬೆಸೆವ ಅಮೃತದಂತಹ ಭಾಷೆ,
ಜ್ಞಾನ ಪೀಠವೆಂಬ ಹಿರಿಮೆಯ ಗರಿಯ ಮುಡಿಗೇರಿಸಿಕೊಂಡ ಭಾಷೆ,
ದಾಸ ಸಾಹಿತ್ಯದ ಸೆಲೆಯಿದು,
ಜಾನಪದರ ಜ್ಞಾನ ನಾಡಿಯಿದು,
ಜೋಗಿ ಜಂಗಮರ ದೈವವಾಣಿಯಿದು,
ಕವಿ ಸಾಹಿತಿಗಳ, ಕಲೆ ಕಲಾವಿದರ ಜೀವಂತಿಕೆಯಿದು,
ನೆಲ-ಜಲವೂ ನುಡಿವುದು
ಖಗ-ಮೃಗವೂ ಅರಿವುದು
ಕಣ-ಕಣದೀ ಹರಿವುದು
ಏನ ಹೇಳಲಿ ನಾ ಕನ್ನಡವೆಂದರೆ
ಎನ್ನ ಬಾಳಿಗೊಂದು ಕೀರ್ತಿಯಿದು..!!
ಎನ್ನ ಬಾಳಿಗೊಂದು ಕೀರ್ತಿಯಿದು..!!

-


29 OCT 2022 AT 20:44


ನಿತ್ಯಹರಿದ್ವರ್ಣ ಮಳೆಗಾಡುಗಳ ತುಂತುರು ಸಿಂಚನ,
ಗಿರಿ ನವಿಲುಗಳ ಝರಿ ನದಿಗಳ ನಲ್ಮೆಯ ನರ್ತನ,
ಸಾಗಿದರು ಮೇಘಗಳು ಮರೆಮಾಚುತ ಸೂರ್ಯ ಚಂದ್ರನ,
ಗಂಧದಗುಡಿಯದು ಕಂಡು ನಾಚಿತು ನಗುವಿನ ರಾಯಭಾರಿಯಾದ ನಮ್ಮ ರಾಜಕುಮಾರನ..!!
ಅನಂತ ಅಮರವದು ಅಪ್ಪುವಿನ ಜೀವನದ ಹಾದಿಯ ಪಯಣ..!!

-


24 OCT 2022 AT 13:24

💛ಕಿತ್ತೂರು ಉತ್ಸವ❤

ಗಂಡು ಮೆಟ್ಟಿದ ನಾಡಿಗೆ ಗರ್ವದ ದಿನ,
ಗಿರಿ ನವಿಲಿನಂತೆ ಕನ್ನಡಿಗನ ಹೃದಯವದು
ಗರಿ ಬಿಚ್ಚಿ ಕುಣಿಯುವ ದಿನ,
ವೀರತ್ವದ ವಿಜಯಕ್ಕೆ ಭಾಷ್ಯ ಬರೆದ ದಿನ,
ಮಣ್ಣಿನ ಕಣ ಕಣವೂ ಕನ್ನಡವೆಂದ ಕನ್ನಡಿಗರ ದಿನ,
ಕಿತ್ತೂರು ಮಹಾಸಂಸ್ಥಾನದ ಹೆಮ್ಮೆಯ ದಿನ,
ಮೊಳಗಲಿ ವಿಜಯ ಕಹಳೆಗಳು,
ಮೆರುಗನ್ನು ಕಟ್ಟಿ ಮೆರೆಯಲಿ ಕರುನಾಡ ಮೂಲೆ ಮೂಲೆಗಳು,
ಕನ್ನಡವೆಂಬ ಅಮೃತದಂತಹ ಭಾಷಾ ಸಾಗರದ ಹರಿವಿಗೆ
ತಿರುಗಿ ನೋಡಲಿ ದೇಶ ದೇಶಗಳು..!!
ಕನ್ನಡಿಗರ ವಿಜಯೋತ್ಸವ,
ಅದುವೇ ಕಿತ್ತೂರು ಉತ್ಸವ..!!

-


23 OCT 2022 AT 19:25

ಚರಿತ್ರೆ

ಬರೆವ ಎಲ್ಲ ಬರಹಗಳಲ್ಲಿಯೂ ಚರಿತ್ರೆಯನ್ನು
ಬಣ್ಣಿಸುವುದು ಅಸಾಧ್ಯ,
ಬರವಣಿಗೆಗಳು ಓದುಗನ ಮನದಲ್ಲಿ ಮಾಸದಂತೆ
ಅಚ್ಚಾಗಿ ಉಳಿದರೆ ಮಾತ್ರ
ಆತ ಒಂದು ಚರಿತ್ರೆಯಾಗಲು ಸಾಧ್ಯ..!!

ಬದುಕೊಂದು ಅಕ್ಷಯ ಪಾತ್ರೆ,
ಬದುಕಿದ ನಂತರ ಅದಾಗಬೇಕು
ಒಂದು ಚರಿತ್ರೆ..!!

-


20 OCT 2022 AT 19:37

ಓ ಮನವೇ..!!

ಬರೆಯುತಿರು ಓ ಮನವೆ ಬದುಕಿನ
ಸಂಚಿಕೆಗಳನ್ನು,
ಸಾಲು ಸಾಲಿನಲೂ ಅರಿಯಿತಿರು ಸೂತ್ರಧಾರನ ಸೋಜಿಗವನ್ನು,
ಭರವಸೆಯಿರಲಿ ನಿರಂತರ,
ಭಾವನೆಗಳ ಭೂಮಿಕೆಯದು ಬದುಕಿನಲಿ
ಅಮರ...!!

-


11 OCT 2022 AT 19:14

ಕರ್ಮ..!!

ಹಳೆಯ ಮನೆಯ ಮಾಡಿನಡಿಯಲಿ ಮೋಡ ಕಾಣುವಾಗ
ಸೂರು ಸಿಕ್ಕಿತೆ..?!
ಹರಿವ ನೀರು ಹೊಸತೊ ಹಳತೊ ಬೊಗಸೆ ಹಿಡಿದು ನೋಡಿದರೆ
ಉತ್ತರ ಸಿಕ್ಕಿತೆ..?!
ಬೆಳಗೊ ಉದಯ ಉದಯಿಸಿದಾಗ ಇರುಳಿಡೀ ಉರಿದ ಹಣತೆಯ
ಸುಳಿವು ಸಿಕ್ಕಿತೆ..?!
ಭಗವಂತನೇ ಭುವಿಗಿಳಿದು ಸ್ನೇಹ ಮಾಡಿದರೆ
ಅವನಿಗೆ ಬೆಲೆ ಸಿಕ್ಕಿತೆ..?!
ಹಳೆ ಮನೆಯಾದರೇನು ಗರಿ ಹೊದಿಸಿ ಕಾಣು.!
ನೀರಾವುದಾದರೇನು ಆಯಾಸ ತೀರದೇನು?
ಬೆಳಕು ಹರಿದರೇನು ಇರುಳು ಮರಳದೇ ಇರುವುದೇನು?
ಭಗವಂತನಾದರೇನು ಸ್ನೇಹ ಅರ್ಹರೊಂದಿಗೆ ಮಾಡಿದರಾಯ್ತಲ್ಲವೇನು..!?

"ಸಮಯಕ್ಕೆ ತಕ್ಕಂತೆ ಪರಿ ಪರಿಯಾಗಿ ವರ್ತಿಸುವುದು ಜನರ ನಿಯಮ,
ಪರಿವರ್ತನೆಯ ರೂಪದಲ್ಲಿ ಕಾಲದ ಪುನರಾವರ್ತನೆಯೆ ಕರ್ಮ..!!"

-


8 OCT 2022 AT 16:31

ಕವಿ ಮನಸ್ಸು

ಮೆಲ್ಲಧನಿಯಲಿ ಕಿಡಿಯಂತಿಹ ಕುಡಿ ನೋಟದಲಿ,
ಕೂಗಿ‌ ಕರೆವಳು ನದಿಯ ತೀರದಲಿ ಆಕೆ,
ಹೋಗಿ ಕಾಣಲು ಅವಳನು ಅಂಜಿಕೆಯು ಈ ಹಾಳು ಹೃದಯಕೆ,
ಎಷ್ಟು ಸುಂದರವಲ್ಲವೆ ಈ ಕಥಾ ಹಂದರ..?!
ಬರೆದದಷ್ಟೂ ಬರವಣಿಗಳು ಅನಂತ..ಅನಂತ,
ಎಂದೆಂದಿಗೂ ಅನಂತ, ಭಾವಗಳ ಸೆಲೆಯೊಳಗೆ ಸದಾ ಜೀವಂತ..!
ಹುಚ್ಚು ಆ ಕವಿ ಮನಸ್ಸು,
ಕಂಡದ್ದೆಲ್ಲ ವಿಭಿನ್ನ-ವಿನೂತನ ಕನಸು..!!

-


5 OCT 2022 AT 12:19

ನಮ್ಮ ನಾಡ ಹಬ್ಬ

ಕೆಟ್ಟದಿನಗಳನ್ನು ಹೋಗಲಾಡಿಸಿ ಒಳ್ಳೆಯ ದಿನಗಳ ಆಹ್ವಾನಿಸೋಣ,
ಸಜ್ಜನರ ಸಾಂಗತ್ಯ ಸಾಗರದ ಎಲ್ಲೆಯಷ್ಟಾಗಲಿ,
ದುರ್ಜನರ ಸುಳಿವು ಕೂಡ ನಮ್ಮ ಸ್ಮೃತಿ ಸೇರದಿರಲಿ,
ಆಗಲಿ ಅಂಧಕಾರದ ಮಂಥನ,
ಬೆಳಗಲಿ ಜಗವ ಬೆಳಗೊ ಜ್ಯೋತಿಯು ಚಿರಂತನ..!!

ಬನ್ನಿ ನಾಡಹಬ್ಬವನ್ನು ಆಚರಿಸೋಣ..!!

-


Fetching Manjunath HJ Quotes