ಯಾವ ಕಷ್ಟ ಬರಲಿ ಬಳಿಗೆ
ಸ್ವಾಗತಿಸಿ ಮನೆಯ ಕಡೆಗೆ
ವಿಶ್ವಾಸದಿ ಮುನ್ನುಗ್ಗಿದೊಡನೆ
ಇಷ್ಟ ಪಟ್ಟು ಶ್ರಮಿಸಿದೊಡನೆ
ಕಷ್ಟ ತೊರೆದು ಸುಖದೊಡನೆ
ಕತ್ತಲಿನಿಂದ ಬೆಳಕಿನೊಡನೆ
ಗೆಲುವು ನಮ್ಮ ಅಂಗೈಕಡೆಗೆ
ಯಶಸ್ಸು ನಮ್ಮ ಬಾಗಿಲಕಡೆಗೆ
-
*ನಿಸರ್ಗದ ಜೀವಿಗಳು ನಾವು*
ನಿಸರ್ಗದಲ್ಲಿ ಜನನ ತಾಳಿ
ಮತ್ತದೆ ಮಣ್ಣಿಗೆ ಮರಳಿ
ಋಣದ ಬದುಕಲಿ ಬಾಳಿ
ಮತ್ತೆ ಹುಟ್ಟಬೇಕೆನ್ನುವೆ ಹೊಳ್ಳಿ
ಅನ್ನವ ಕೊಟ್ಟ ಅನ್ನಧಾತೆಗಿಂದು
ನೀರು ಕೊಟ್ಟ ಜಲಮಾತೆಗಿಂದು
ಗಾಳಿ ಕೊಟ್ಟ ಪ್ರಕೃತಿ ದೇವತೆಗಿಂದು
ಶಿರವ ಭಾಗಿ ನಮಿಸುವೆಯಿಂದು
ಹುಲ್ಲನು ತಿನ್ನುವ ಹುಳುಗಳು
ಹುಳುಗಳ ನುಂಗಿ ಬದುಕುವ ಕಪ್ಪೆ
ಕಪ್ಪೆ ನುಂಗಿ ಬದುಕುವ ಹಾವು
ಹಾವು ನುಂಗಿ ಬದುಕುವ ಹದ್ದು
ಕಾಲಚಕ್ರದೀ ಉರುಳುವ ಜೀವಕೆ
ಋಣದ ಬದುಕಿಗೆ ದುರಾಸೆಯೇಕೆ
ನಾ ಎಂಬುವ ಸ್ವಾರ್ಥದ ಹಂಬಲವೇಕೆ
ನಿಸರ್ಗದಲ್ಲಿ ಪಡೆದ ಫಲವ ಹಂಚಲಿಲ್ಲವೇಕೆ
-
ನಾನು ನಿನಾದಾಗ
ಮನಸು ಮೌನವಾದಾಗಾ
ಮೌನ ಮತ್ತೆ ಮಾತಾದಾಗ
ಹೃದಯ ಬಡಿತ ಹೆಚ್ಚಾದಾಗ
ಮನದಿ ರಾಗ ಹೊಮ್ಮುವುದಾಗ
ನಿನ್ನ ಪ್ರೀತಿಯ ಬಲೆಯ ಒಳಗೆ
ಸಿಲುಕಿ ಮತ್ತೆ ನೀ ಮರೆಯಾದಾಗ
ಕಣ್ಣಂಚಲ್ಲಿ ನೀರು ಬರುವುದಾಗ
ಮಾತು ಮೌನವಾಗುವುದಾಗ
ನೀ ನನ್ನೊಡನೆ ಬೆರೆತು ಹೋದಾಗ
ನನ್ನ ಹೃದಯ ನಿನಗೆ ಒಪ್ಪಿಸಿದಾಗ
ನನ್ ಮಾತು ನಿನದೆ ಆದಾಗ
ನನ ಜನುಮ ಸಾರ್ಥಕವಾಗ
ಜೊತೆಗಾರನಾಗಿ ಕೈ ಹಿಡಿದಾಗ
ಸ್ವರ್ಗವೇ ನನ್ನ ಕೈಯಲ್ಲಾಗ
ಮತ್ತೇನು ಬೇಕು ಈ ಬದುಕಿನ್ಯಾಗ
ಸುಖದಿ ಬಾಳುವೆ ಸಾಯುವವರೆಗ
-
ನಿದ್ರೆಯಲಿ ಅನುಭವಿಸಿ
ಕಲ್ಪನೆಯಲಿ ಕಂಗೋಳಿಸಿ
ಕಣ್ಣ ತೆರೆದಾಗ ಭ್ರಮೆಯೆನಿಸಿ
ಮತ್ತೆ ಜೀವನ ಅದೇಯೆನಿಸಿ
ಬದುಕು ಸಾಗಿಸಬೇಕಿದೆ
ಕನಸ ಹೊತ್ತು ಪಯಣಿಸಬೇಕಿದೆ
ಘಳಿಗೆಗೊಮ್ಮೆ ವಿಶ್ವಾಸವಿಟ್ಟು ದೋಣಿ ನಡೆಸಬೇಕಿದೆ
ಎಲ್ಲಿ ಮುಳುಗುವುದೋ,ಎಲ್ಲಿ ನಿಲ್ಲುವುದೆನ್ನದೆ
ಬಿರುಗಾಳಿ ಎದುರಿಸಿ ಮುಂದೆ ಸಾಗಬೇಕಿದೆ
ದಡ ತಲುಪ ಬೇಕಿದೆ
ಮನದಲ್ಲೊಂದು ಗುಡಿಯಮಾಡಿ
ಹೃದಯದಲ್ಲೊಂದು ಶಿಖರವನಿರಿಸಿ
ಕನಸಿಗೊಮ್ಮೆ ಬಣ್ಣಹಚ್ಚಿ ರೆಕ್ಕೆಯೊಡನೆ ಹಾರಾಡಬೇಕಿದೆ
ಶಿಖರವನ್ನು ಏರಿ ಗುರಿ ತಲುಪಬೇಕಿದೆ
ಆಕಾಶದೆತ್ತರ ನೋಡುವಂತೆ ಮಾಡಬೇಕಿದೆ
-
ಚೈತ್ರ ಮಾಸದ ಶುಕ್ಲ ಪಕ್ಷದ
ವರ್ಷದ ಮೊದಲನೆ ಹಬ್ಬವು
ಬ್ರಹ್ಮಾಂಡದ ಸೃಷ್ಟಿಯ ಮೊದಲ ದಿನವು
ವಸಂತ ಋತುವಿನ ಚೆಲುವು ನವ ವರುಷಕೆ ಆಶಾಕಿರಣವು
ಅದುವೇ ನಮ್ಮಯ ಯುಗಾದಿಯು
ಹೊಸ ಬರವಸೆ ಹೊತ್ತು ಬಯಕೆ ಈಡೇರಿಸುವ ದಿನ
ಹೊಸ ಆಶಯ ಇಟ್ಟು ಗುರಿ ತಲುಪಿಸುವ ಸುದಿನ
ಜೀವನದ ಕಹಿಯನ್ನು ಒಪ್ಪಿ, ಬದುಕಲ್ಲಿ ಕಷ್ಟ ಮರೆತು ಸದಾ ನಸುನಗುತ್ತಾ ಬೇವು-ಬೆಲ್ಲವ ಹಂಚುವ ದಿನ
ಕತ್ತಲು-ಬೆಳಕಂತೆ ಜೀವನವನ್ನು ಸಮನ್ವಯ ಗೊಳಿಸುವ ಅರ್ಥ ಪೂರ್ಣವಾದ ದಿನ
ಪ್ರಕೃತಿ ತನ್ನ ಹಳೆತನ ಮರೆತು ಹೊಸತನ ತುಂಬಿಕೊಳ್ಳುವ ಶುಭದಿನ
ಹೊಂಬಣ್ಣದ ಚಿಗುರೆಲೆಯನ್ನು ಹೊದ್ದು ಚಿನ್ನಾಟವಾಡುವ ಸುಸಮಯದ ದಿನ
ರೈತರೆಲ್ಲರು ಎತ್ತುಗಳನ್ನು ಶೃಂಗರಿಸಿ ಉಳುಮೆಗೆ ಚಾಲನೆ ನೀಡುವ ಪ್ರಥಮ ದಿನ
ಭವಿಷ್ಯದ ಕನಸನ್ನು ನನಸಾಗಿಸಲು ಶ್ರಮಿಸುವ ಚಂದ್ರಮಾನದ ಸುದಿನ
-
ಅಕ್ಷರದವ್ವ
ಭಾರತದ ಮೊದಲ ಮಹಿಳಾ ಶಿಕ್ಷಕಿ ಇವರು
ಉದಯೋನ್ಮುಕ ಸಾಮಾಜಿಕ ಸಂಚಾಲಕಿ ಇವರು
ಹುಟ್ಟಿನಿಂದ ದಣಿವರಿಯದ ಸತ್ಯಶೋದಕಿ ಇವರು
ಸ್ತ್ರೀ ಶಿಕ್ಷಣವನ್ನು ತೆರೆದ ಮಹಾತಾಯಿ ಇವರು
ಸರಳತೆಯ ಬದುಕು ಸಾಗಿಸಿದ ಮಹನೀಯರು
ಸಮಾಜದೆದುರು ಹೋರಾಡಿದ ವೀರವನಿತೆ ಇವರು
ಅವಮಾನವನ್ನೆ ಪ್ರೇರಣೆಯಾಗಿಸಿ ಕಾರ್ಯನಿರ್ವಹಿಸಿದವರು
ಸಮಾಜದಿ ಎಲ್ಲ ಕ್ಷೇತ್ರದಿ ಸಮಾನತೆಗೆ ಕಾರಣೀಭೂತರು
ಅನಾಥ ಮಕ್ಕಳ ಬಾಳು ಬೆಳಗಿದ ಆದರ್ಶ ದಂಪತಿ ಇವರು
-
ಹೊಸ ವರುಷ
ಹೊಸ ವರುಷವಂತೆ ಏಕೆ ಸಡಗರ..?
ಪಂಚಾಂಗ ಬದಲಾದರೆ ಜೀವನ ಬದಲಾದೀತೆ..
ಸಡಗರ ಪಟ್ಟರೆ ಬದಲಾದೀತೆ ಬದುಕಿನ ಪಯಣ
ಪ್ರತಿದಿನವೂ ಹೊಸ ವರುಷವಲ್ಲವೆ..?
ಪ್ರತಿ ಗಳಿಗೆಯೂ ಅಮೂಲ್ಯವಲ್ಲವೆ
ಮತ್ತೇಕೆ ಹೊಸ ವರುಷದ ಹರುಷ
ಕ್ಷಣದ ಬೆಲೆ ಅರಿತು ಸಾಗಬೇಕಿದೆ ಈ ಬದುಕು
ಹೊಸ ಭರವಸೆಯ ಹೊತ್ತು ಕನಸ ಕಾಣಬೇಕಿದೆ
ಆತ್ಮ ವಿಶ್ವಾಸದಿ ಮುಂದೆ ಹೆಜ್ಜೆ ಇಡಬೇಕಿದೆ
ಇರುವ ಮೂರು ದಿನದಿ ನಗುತ ಸಾಗಬೇಕಿದೆ
ಎಲ್ಲರೊಡನೆ ದ್ವೇಷ ಮರೆತು ಪ್ರೀತಿ ಹಂಚಿ ಹೊರಡಬೇಕಿದೆ
ಅದೇ ಬದುಕಿನ ಸ್ವಾರ್ಥಕತೆ ಅಲ್ಲವೇ..?
-
ಮನಸು ಹೇಳಿತು.... ನಲ್ಲ.... ನೀನು ಇಲ್ಲದೆ.... ಇ.... ಜಗವು ಇಲ್ಲ......... ಸಂಗೀತ ಹೇಳಿತು...... ನೀ ಇದರೆ...... ಇ.. ಜಗವು ಸುಂದರ... ಸುಂದರ.... ಸುಂದರ....
ಚೇತನಾ ಘಂಟಿ
-
ಹಕ್ಕಿಗೆ ಗೂಡು ಆಸರೆ.... ಭಾವನೆಗಳಿಗೆ.. ಭರವಸೆ ಆಸರೆ... ಆದರೆ... ನನ್ನ ಪ್ರತಿ.. ಉಸಿರಲಿ... ನನ್ನ ಇನಿಯನೇ..ಆಸರೆ......
ಚೇತನಾ ಘಂಟಿ
-
ಎಣ್ಣೆ, ಬತ್ತಿ, ಬೆಂಕಿಯಿಂದ ಮಾತ್ರವೇ ದ್ವೀಪ ಕತ್ತಲನ್ನು ಹೊಡೆದೋಡಿಸಿ ಸೊಗಸಾಗಿ ಪ್ರಜ್ವಲಿಸುವಂತೆ
ನಮ್ಮಲ್ಲಿರುವ ನಿಷ್ಕಲ್ಮಶ ಪ್ರೀತಿ, ಒಳ್ಳೆಯ ನಡೆ ನುಡಿ, ಹಾಗೂ ನಾವು ಮಾಡುವ ನಿಷ್ಠೆಯ ಕರ್ಮಗಳಿಂದ ಮಾತ್ರ ನಮ್ಮ ಬದುಕಿನ ಅಂಧಕಾರ ಅಳಿದು ಬೆಳಕು ಪ್ರಜ್ವಲಿಸಬಲ್ಲದು
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
-