#ಭೀಮ_ಅಂಬೇಡ್ಕರ್
ನೀರು ಕೊಡದೆ ಆಚೆ ನಿಲ್ಲಿಸಿ
ಜರಿದು ಹೂಡಿದರು
ನಿಂತ ಜಾಗ ಮೈಲಿಗೆ ಎಂದು
ನೀರಿಂದ ತೊಳೆದರು
ರೆಟ್ಟೆ ಸವೆಸಿ ಗಟ್ಟಿ ಮನಸಲಿ
ಕರಿಕೋಟು ತೊಟ್ಟರು
ಬೆಂದ ಬದುಕು ಬರೆದು ಕಟ್ಟಿ
ಕೇರಿ ಹುಡುಗನಾದರು
ಸಂವಿಧಾನ ಕೆತ್ತಿ ಶಿಲ್ಪಿಯಾಗಿ
ಭಾರತ ವಿಧಾತನಾದರು
ಜೀವ ಬಸಿದು ಸ್ವಾತಂತ್ರ್ಯ ಕಟ್ಟಿ
ನಮ್ಮ ಹರಿಕಾರನಾದರು
ಪ್ರೀತಿ ಮಮತೆ ಹಂಚಿಕೊಟ್ಟು
ಬುದ್ಧನಂತೆ ನಕ್ಕುಬಿಟ್ಟರು
ಎಲ್ಲವನ್ನು ನೀಡಿ ಜಾತಿ ಕಳಚಿ
ಭರತ ಭೂಶಿರವಾದರು
ದೇವನ ಅಂತರಂಗ ಶಕ್ತಿ ನೀಡಿ
ಬಸವ ಬುದ್ಧನಾದರು
ಸಿದ್ದಾಂತ ತಿಳಿಸಿ ಸಂವಿಧಾನ ಬರೆದು
ಭೀಮ ಅಂಬೇಡ್ಕರಾದರು-
ಸರ್ವರಿಗೂ ವಿಜಯದಶಮಿ ಶುಭಾಶಯಗಳು..
ಬನ್ನಿ ಬಂಗಾರವಾಗಲಿ.. ನಿಮ್ಮೆಲ್ಲ ಕನಸು ನನಸಾಗಲಿ.-
ಮಾತಾಡದೆ ಮೌನದಲ್ಲೇ ಎಲ್ಲ ಹೇಳುತ್ತಿದ್ದವಳು ನೀನು,
ಮಾತಾಡಿ ಮನವೊಲಿಸುವ ಹಠವಾದರೂ ಏಕೆ ನಿನಗೆ ?
ನಿನ್ನ ಮೌನದ ಆಳದಲ್ಲಿಳಿದು ನಿನ್ನ ಮನವನರಿಯಲು ಹೋಗಿ
ಮಾತುಗಳೇ ಮರೆತು ಹೋದವು ನನಗೆ !-
ಹೆಗಲ ಮೇಲೆ ಕೈ ಹಾಕಿದವ ಗೆಳೆಯನಾಗಲ್ಲ
ಸೋತ ಹೆಗಲಿಗೆ ಹೆಗಲಾದವನೇ ನಿಜವಾದ ಗೆಳೆಯ-
ನಾನೇ ಎಲ್ಲ ಎಂಬ ಅಹಂ ಸಲ್ಲದು ಕಲ್ಲಿಗಿಂತ ವಜ್ರ ಕಠಿಣ ಎಂಬುದನ್ನು ಮರೆಯಬೇಡ
ಉರಿಯುವ ಸೂರ್ಯ ಸಂಜೆಯಾದರೆ ಕತ್ತಲಿಗೆ ಜಾಗ ಬಿಡಬೇಕೆಂಬುದನ್ನು ಮರೆಯಬೇಡ-
ನೆತ್ತರು ಕುಡಿದ ನೆಲಕೆ ಮದವಿಳಿಸುವ ಮಾತೊಂದು ಬೇಕಾಗಿದೆ
ಬೆವರಹನಿ ಮಣ್ಣಾಗುವ ಮುನ್ನ ಸಂತೈಸಲು ಕೈಯೊಂದು ಬೇಕಾಗಿದೆ-
ನನ್ನ ಹಣೆಯಲಿ ಬರೆಯದ ನೀನು
ಕನಸಲ್ಲಿ ಕಾಡುವೆ
ಎದುರು ಬಂದು ನಿಲ್ಲದ ನೀನು
ಹೆಸರಿಲ್ಲದೆ ಕಾಡುವೆ-
ಗಜ಼ಲ್
-----------
ನೋಡುವ ಕಣ್ಣು ಕುರುಡಾದ ಮೇಲೆ ಅರಿವಿನ ಬೆಳಕು ಕಾಣಿಸಿದರೇನು ಬಂತು
ಕನಸಿಗೂ ತೆರಿಗೆ ಕಟ್ಟಿದ ಮೇಲೆ ನಾಳಿನ ಬಯಕೆ ಮೂಡಿದರೇನು ಬಂತು
ಒಮ್ಮೊಮ್ಮೆ ಸಾವಿಗೂ ಅಂಜಿಕೆಯಾಗಿ ಸತ್ತವರಿಗೆ ಜೀವ ಉಣಿಸಿದ್ದೂ ಇದೆ
ಮರಳ ಗೂಡು ಕೆಡವಿದ ಮೇಲೆ ಕಡಲ ಅಲೆಗಳು ಮೌನವಾದರೇನು ಬಂತು
ಸುಳ್ಳಿನ ಕೋಣೆಯಲ್ಲಿ ಸತ್ಯದ ಬಂಧನವಾದರೇನು ಸೆರಗಿನಲ್ಲಿನ ಕೆಂಡವದು
ಬಣ್ಣದ ಮುಖವಾಡ ಕಳಚಿದ ಮೇಲೆ ತೊಗಲಿಗೆ ಬಣ್ಣ ಬಳಿದರೇನು ಬಂತು
ದೇಹ ತೊರೆದರೂ ಬಿಡದ ಮನಸಿನ ವೇದನೆಗೆ ನೆಮ್ಮದಿ ಹುಡುಕಾಟ ಬೇಕಿದೆ
ಬದುಕಿನ ಕೊನೆ ತಲುಪಿದ ಮೇಲೆ ಹೊಸತು ಪ್ರೀತಿ ಹುಟ್ಟಿದರೇನು ಬಂತು
ಹುಟ್ಟಿಗೂ ಸಾವಿಗೂ ನಡುವೆ ಗೆಲುವಿಲ್ಲದಿರೆ ಬದುಕಿಗೇನು ಅರ್ಥ ‘ಲಕ್ಷ್ಮೀಶ’
ಮುಗಿಲು ಮತ್ತೆ ಮೌನವಾದ ಮೇಲೆ ಬದುಕುವ ಆಸೆ ಚಿಗುರಿದರೇನು ಬಂತು-
ಹೃದಯ ಸಲುಗೆ ಬಯಸುತ್ತಿದೆ ಮನಸೆ
ನೀನೊಮ್ಮೆ ಸೋತುಬಿಡು..
ಇನ್ನೊಮ್ಮೆ ಬೆಸುಗೆ ಬೇಕೆನ್ನುತ್ತಿದೆ ಕನಸೆ
ನೀನೊಮ್ಮೆ ಗೆದ್ದುಬಿಡು..-