Lakshmi Kanth   (ಲಕ್ಷ್ಮೀಕಾಂತ್ ಎಲ್ ವಿ)
10 Followers · 3 Following

ಕವಿ, ಅಂಕಣಕಾರ, ಲೇಖಕ, ಗೀತರಚನೆಕಾರ, ನಿರ್ದೇಶಕ
Joined 5 July 2018


ಕವಿ, ಅಂಕಣಕಾರ, ಲೇಖಕ, ಗೀತರಚನೆಕಾರ, ನಿರ್ದೇಶಕ
Joined 5 July 2018
14 APR 2021 AT 7:39

#ಭೀಮ_ಅಂಬೇಡ್ಕರ್

ನೀರು ಕೊಡದೆ ಆಚೆ ನಿಲ್ಲಿಸಿ
ಜರಿದು ಹೂಡಿದರು
ನಿಂತ ಜಾಗ ಮೈಲಿಗೆ ಎಂದು
ನೀರಿಂದ ತೊಳೆದರು

ರೆಟ್ಟೆ ಸವೆಸಿ ಗಟ್ಟಿ ಮನಸಲಿ
ಕರಿಕೋಟು ತೊಟ್ಟರು
ಬೆಂದ ಬದುಕು ಬರೆದು ಕಟ್ಟಿ
ಕೇರಿ ಹುಡುಗನಾದರು

ಸಂವಿಧಾನ ಕೆತ್ತಿ ಶಿಲ್ಪಿಯಾಗಿ
ಭಾರತ ವಿಧಾತನಾದರು
ಜೀವ ಬಸಿದು ಸ್ವಾತಂತ್ರ್ಯ ಕಟ್ಟಿ
ನಮ್ಮ ಹರಿಕಾರನಾದರು

ಪ್ರೀತಿ ಮಮತೆ ಹಂಚಿಕೊಟ್ಟು
ಬುದ್ಧನಂತೆ ನಕ್ಕುಬಿಟ್ಟರು
ಎಲ್ಲವನ್ನು ನೀಡಿ ಜಾತಿ ಕಳಚಿ
ಭರತ ಭೂಶಿರವಾದರು

ದೇವನ ಅಂತರಂಗ ಶಕ್ತಿ ನೀಡಿ
ಬಸವ ಬುದ್ಧನಾದರು
ಸಿದ್ದಾಂತ ತಿಳಿಸಿ ಸಂವಿಧಾನ ಬರೆದು
ಭೀಮ ಅಂಬೇಡ್ಕರಾದರು

-


15 OCT 2021 AT 8:43

ಸರ್ವರಿಗೂ ವಿಜಯದಶಮಿ ಶುಭಾಶಯಗಳು..
ಬನ್ನಿ ಬಂಗಾರವಾಗಲಿ.. ನಿಮ್ಮೆಲ್ಲ ಕನಸು ನನಸಾಗಲಿ.

-


23 SEP 2021 AT 7:38

ಮಾತಾಡದೆ ಮೌನದಲ್ಲೇ ಎಲ್ಲ ಹೇಳುತ್ತಿದ್ದವಳು ನೀನು,
ಮಾತಾಡಿ ಮನವೊಲಿಸುವ ಹಠವಾದರೂ ಏಕೆ ನಿನಗೆ ?
ನಿನ್ನ ಮೌನದ ಆಳದಲ್ಲಿಳಿದು ನಿನ್ನ ಮನವನರಿಯಲು ಹೋಗಿ
ಮಾತುಗಳೇ ಮರೆತು ಹೋದವು ನನಗೆ !

-


21 SEP 2021 AT 8:28

ಕಾಣದ ದೇವರು ಇರುವ ಊರಲಿ
ಕಾಣುವ ದೈವವೇ 'ಅಮ್ಮ'

-


2 SEP 2021 AT 9:57

ಹೆಗಲ ಮೇಲೆ ಕೈ ಹಾಕಿದವ ಗೆಳೆಯನಾಗಲ್ಲ
ಸೋತ ಹೆಗಲಿಗೆ ಹೆಗಲಾದವನೇ ನಿಜವಾದ ಗೆಳೆಯ

-


1 SEP 2021 AT 20:21

ನಾನೇ ಎಲ್ಲ ಎಂಬ ಅಹಂ ಸಲ್ಲದು ಕಲ್ಲಿಗಿಂತ ವಜ್ರ ಕಠಿಣ ಎಂಬುದನ್ನು ಮರೆಯಬೇಡ
ಉರಿಯುವ ಸೂರ್ಯ ಸಂಜೆಯಾದರೆ ಕತ್ತಲಿಗೆ ಜಾಗ ಬಿಡಬೇಕೆಂಬುದನ್ನು ಮರೆಯಬೇಡ

-


31 AUG 2021 AT 9:31

ನೆತ್ತರು ಕುಡಿದ ನೆಲಕೆ ಮದವಿಳಿಸುವ ಮಾತೊಂದು ಬೇಕಾಗಿದೆ
ಬೆವರಹನಿ ಮಣ್ಣಾಗುವ ಮುನ್ನ ಸಂತೈಸಲು ಕೈಯೊಂದು ಬೇಕಾಗಿದೆ

-


30 AUG 2021 AT 8:49

ನನ್ನ ಹಣೆಯಲಿ ಬರೆಯದ ನೀನು
ಕನಸಲ್ಲಿ ಕಾಡುವೆ
ಎದುರು ಬಂದು ನಿಲ್ಲದ ನೀನು
ಹೆಸರಿಲ್ಲದೆ ಕಾಡುವೆ

-


25 AUG 2021 AT 8:06

ಗಜ಼ಲ್
-----------

ನೋಡುವ ಕಣ್ಣು ಕುರುಡಾದ ಮೇಲೆ ಅರಿವಿನ ಬೆಳಕು ಕಾಣಿಸಿದರೇನು ಬಂತು
ಕನಸಿಗೂ ತೆರಿಗೆ ಕಟ್ಟಿದ ಮೇಲೆ ನಾಳಿನ ಬಯಕೆ ಮೂಡಿದರೇನು ಬಂತು

ಒಮ್ಮೊಮ್ಮೆ ಸಾವಿಗೂ ಅಂಜಿಕೆಯಾಗಿ ಸತ್ತವರಿಗೆ ಜೀವ ಉಣಿಸಿದ್ದೂ ಇದೆ
ಮರಳ ಗೂಡು ಕೆಡವಿದ ಮೇಲೆ ಕಡಲ ಅಲೆಗಳು ಮೌನವಾದರೇನು ಬಂತು

ಸುಳ್ಳಿನ ಕೋಣೆಯಲ್ಲಿ ಸತ್ಯದ ಬಂಧನವಾದರೇನು ಸೆರಗಿನಲ್ಲಿನ ಕೆಂಡವದು
ಬಣ್ಣದ ಮುಖವಾಡ ಕಳಚಿದ ಮೇಲೆ ತೊಗಲಿಗೆ ಬಣ್ಣ ಬಳಿದರೇನು ಬಂತು

ದೇಹ ತೊರೆದರೂ ಬಿಡದ ಮನಸಿನ ವೇದನೆಗೆ ನೆಮ್ಮದಿ ಹುಡುಕಾಟ ಬೇಕಿದೆ
ಬದುಕಿನ ಕೊನೆ ತಲುಪಿದ ಮೇಲೆ ಹೊಸತು ಪ್ರೀತಿ ಹುಟ್ಟಿದರೇನು ಬಂತು

ಹುಟ್ಟಿಗೂ ಸಾವಿಗೂ ನಡುವೆ ಗೆಲುವಿಲ್ಲದಿರೆ ಬದುಕಿಗೇನು ಅರ್ಥ ‘ಲಕ್ಷ್ಮೀಶ’
ಮುಗಿಲು ಮತ್ತೆ ಮೌನವಾದ ಮೇಲೆ ಬದುಕುವ ಆಸೆ ಚಿಗುರಿದರೇನು ಬಂತು

-


24 AUG 2021 AT 20:57

ಹೃದಯ ಸಲುಗೆ ಬಯಸುತ್ತಿದೆ ಮನಸೆ
ನೀನೊಮ್ಮೆ ಸೋತುಬಿಡು..
ಇನ್ನೊಮ್ಮೆ ಬೆಸುಗೆ ಬೇಕೆನ್ನುತ್ತಿದೆ ಕನಸೆ
ನೀನೊಮ್ಮೆ ಗೆದ್ದುಬಿಡು..

-


Fetching Lakshmi Kanth Quotes