ಗೆಳೆತನ ಅನುದಿನ
ಸ್ನೇಹವೆಂಬ ಸುಮ ಬೀರುವುದು ಸುಗಂಧ
ಜೀವಕ್ಕೆ ಜೀವವು ಈ ಗೆಳೆತನದ ಸಂಬಂಧ
ಸ್ನೇಹದ ಬರಹ ಮುಗಿಸಲಾಗದ ಪ್ರಬಂಧ
ಎಂದೆಂದಿಗೂ ಬಿಡಿಸಲಾಗದ ಅನುಬಂಧ
ಗೆಳೆತನದ ಬೆಸುಗೆ ಇದು ಜೇನಿನ ಮಾಧುರ್ಯ
ನಿಷ್ಕಲ್ಮಶ ಹೃದಯಗಳ ಒಲವಿನ ಅಂತರ್ಯ
ಮಾತೆಯ ಮನದಂತೆ ಮಮತೆಯ ಔದಾರ್ಯ
ವಸುಧೆಯ ಹಸಿರಂತೆ ಸ್ನೇಹದ ಸೌಂದರ್ಯ
ಸ್ನೇಹದ ಕಡಲಿದು ನಂಬಿಕೆಯ ಆಗರ
ವಿಶ್ವಾಸದ ಬಂಧವಿದು ಸಂತಸದ ಸಾಗರ
ಸುಂದರ ಕಥನವಿದು ನೆನಪುಗಳ ಚಿತ್ತಾರ
ಸ್ನೇಹದ ಬುತ್ತಿಯಿದು ಜೀವನದ ಸಾಕಾರ
ಸ್ನೇಹದ ಜ್ಯೋತಿಗೆ ಬೆಳಕಿನ ಗಮನ
ಸ್ಫೂರ್ತಿಯ ಚಿಲುಮೆಗೆ ಗೆಳೆತನ ಪಾವನ
ದಿನವೂ ತುಂಬಲಿ ಸ್ನೇಹದಲಿ ಹೊಸತನ
ಗೆಳೆತನದ ಬೆಸುಗೆಗೆ ಇದೋ ನನ್ನ ನಮನ.
✍️ ಪೃಥ್ವಿ ನಾಯಕ
-
ಜೂನ್ 11 🎂
click on #ಸಗಡಗೇರಿ
Click on #ಅಂಕೋಲಾ
Click in #ಕರಾವಳಿಯಜೀವಾಳಯಕ್... read more
ಸಿರಿಗನ್ನಡ
ಕಸ್ತೂರಿ ಕಂಪನು ಚೆಲ್ಲುವ ಹೃದಯದ ಮಾತಿದು
ಮನಕೆ ಮುದ ನೀಡುವ ಅಂದದ ಸಿರಿಯಿದು
ದ್ರಾವಿಡ ಭಾಷೆಗೆ ಮೆರಗನು ತಂದಿಹುದು
ಕೋಟಿ ಕನ್ನಡಿಗರ ಮನದಾಳದ ನುಡಿಯಿದು.
ಜ್ಞಾನಪೀಠವ ಮುಕುಟದಲ್ಲಿ ಧರಿಸಿಹುದು
ತ್ರಿಪದಿ ಛಂದಸ್ಸಿನ ಮಹಾಕೂಟವಿದು
ಪಂಪ ರನ್ನ ಜನ್ನ ಪೊನ್ನ ಕವಿಗಳ ನಾಡಿದು
ಮನ ಮನಗಳ ಬೆಸೆಯುವ ಸ್ನೇಹ ಸೇತುವೆಯಿದು.
ಹಳೆಗನ್ನಡ ಹೊಸಗನ್ನಡದ ಕಾವ್ಯ ಕಣಜವಿದು
ತಾಯಿಯ ಒಡಲಂದದಿ ಬೆಚ್ಚನೆಯ ಭಾವವಿದು
ಮನಸಿನ ಪುಟಗಳ ತೆರೆದು ಕಾಣುವ ಕನಸಿದು
ಅದುವೇ ನಮ್ಮ ತಾಯ್ನುಡಿ ಸಿರಿಗನ್ನಡವು ನೋಡಾ.
-
ಸಂಪತ್ತನ್ನು ಮುಂದಿಟ್ಟು ಯಾರನ್ನು
ಅಳೆಯಬೇಡ ಪ್ರೀತಿ, ಮಮತೆ,
ನಂಬಿಕೆಯೆಂಬ ಸಂಪತ್ತಿನ ಮುಂದೆ
ಆಸ್ತಿಯೆಂಬುದು ಗೌಣ-
ಬಿಂಕು ಬಿನ್ನಾಣದ ಕನ್ನಿಕೆ
ಶ್ವೇತ ವರ್ಣದ ಸೀರೆಯ ನೀರೆ
ಕೆಂದುಟಿಯ ಗುಲಾಬಿ ಸುಂದರಿ
ಮಲ್ಲಿಗೆಯ ಕಂಪಿನ ಕಿನ್ನರಿ..
ಕಾಡಿಗೆ ಕಂಗಳ ಶ್ವೇತಕುಮಾರಿ
ನೀಳ ಸಂಪಿಗೆ ನಾಸಿಕದ ವಯ್ಯಾರಿ
ಕುಡಿ ಹುಬ್ಬುಗಳ ಕನಕಾಂಗಿ
ಜೋಡಿ ಜುಮುಕಿಗಳ ಚೆಂದದ ಸಿರಿಗೌರಿ..
-
ಯಶೋಧೆ ನಂದನ ನಂದನಕಂದ
ಗೋಪಿಕೆಯರ ಮನ ಕದ್ದ ಚೋರ
ಬೆಣ್ಣೆಯ ಕಳ್ಳ ನೀ ಪುಟ್ಟ ಗೋಪಾಲ
ದೇವಕಿನಂದನ ವಸುದೇವ ತನಯ
ರಾಧೆಯ ಹೃದಯ ಸಾಮ್ರಾಜ್ಯದ ಅರಸ
ಮೊದಲ ಪರಿಶುದ್ಧ ಪ್ರೇಮದ ರೂವಾರಿ
ಹೆಂಗಳೆಯರ ಪ್ರೀತಿಯ ಚೆಂದದ ಗೊಲ್ಲ
ಕೊಳಲ ಮಾಧುರ್ಯದ ಸವಿಗನಸಿನ ನಲ್ಲ-
ತಿಳಿನೀಲಿ ಬಾನಲ್ಲಿ ತಾರೆಗಳ ಬೆಳಕಿನಾಟವನು
ನೋಡುತ್ತಾ ನಿಂತಿದ್ದೆ, ಚುಕ್ಕಿಗಳು ನಗುತ್ತಾ
ನನ್ನೆಡೆಗೆ ಕೊಂಕು ನಗು ಬೀರಿದವು ನಿನ್ನ
ಚಂದಿರನಿಲ್ಲದ (ಇನಿಯ) ಆಗಸ ನೀನಗೇಕೆ ಎಂದು..-
ಕನ್ನಡಿಯಲ್ಲಿ ನನ್ನ ಬಿಂಬವ ಕಾಣಲು
ನಿಂತರೆ ಅಲ್ಲಿ ನೀನೇ ಕಾಣುವೆ ಇನಿಯ..
ಹಣೆಯಲ್ಲಿ ಅಚ್ಚೊತ್ತಿರುವ ಕುಂಕುಮ
ಹೇಳುತಿದೆ ನಿನ್ನದೇ ಹೆಸರಿನ ಪ್ರತಿಧ್ವನಿ..
ಕೈಯಲ್ಲಿನ ಬಳೆಗಳ ಗಲ್ ಗಲ್ ನಾದದಲಿ
ನಿನ್ನ ಒಲವಿನ ಬಣ್ಣ ತುಂಬಿದೆ ಗೆಳೆಯ..
ಮಿನುಗುವ ಮೂಗುತಿಯ ಮಿಂಚು
ಸಾರುತಿದೆ ನಿನ್ನ ನೆನಪಿನ ಅಲೆಗಳ ಸಿಂಚನ..
ಕಾಲ್ಗೆಜ್ಜೆಯ ಸದ್ದಿನಲಿ ಅಡಗಿದೆ
ನಮ್ಮಿಬ್ಬರ ಪ್ರೇಮದ ಪರಿಯ ಸೊಬಗು..-