ನಮಗೆ ಸರಿ ಅನಿಸದ ವ್ಯಕ್ತಿಯಿಂದ, ಸುಳಿವು ನೀಡದೆ ದೂರ ಸರಿದು ಬಿಡಬೇಕು... ಇನ್ನೊಬ್ಬರು ಬಹಳ ಉತ್ತಮರು ಎಂದೆನಿಸಿದೊಡನೆ ನಾವೇ ಅವರನ್ನು ಹುಡುಕಿಕೊಂಡು ಹೋಗಿ ಅವರ ಸ್ನೇಹ ಬೆಳೆಸಬೇಕು...
ನಮ್ಮ ಯೋಚನೆಗಳು ಬದಲಾದಾಗ ಅದೃಷ್ಟವು ಬದಲಾಗಬಹುದು... ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿ ಉತ್ತಮ ವ್ಯಕ್ತಿಗಳ ಜೊತೆಗಿನ ಒಡನಾಟ ಸಹ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ... ನಾವು ಮಾಡುವ ಕೆಲಸಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಒಳ್ಳೆಯವರ ಆಯ್ಕೆಯನ್ನು ನಾವೇ ಮಾಡಿಕೊಳ್ಳ ಬೇಕಾಗುತ್ತದೆ... ಕನ್ನಡತಿ ಈ ವಸುಮತಿ ✍️
ಕೆಲವರಂತೂ ಅವರದ್ದೇ ಆದ ಮಿತಿಗಳಲ್ಲಿ ಮತಿಹೀನರಂತೆ ಬದುಕುತ್ತಾರೆ.... ಬಹಳ ಬೇಗ ಮತಿಭ್ರಮಣೆಗೂ ಒಳಗಾಗುತ್ತಾರೆ ಮನುಷ್ಯ ತನ್ನದೇ ಆದ ಪರಿಮಿತಿಗಳಲ್ಲಿ ಹಿತ ಮಿತವಾಗಿ ಪಕ್ವವಾದಷ್ಟು ಪರಿಶುದ್ಧನಾಗುತ್ತಾನೆ... ಕನ್ನಡತಿ ಈ ವಸುಮತಿ ✍️
"ನೋವು" ಕಲಿಸಿದ ಪಾಠವನ್ನು ಎಂದಿಗೂ ಮರೆಯಬಾರದು "ನಲಿವು" ಕೊಟ್ಟ ಕ್ಷಣಗಳನ್ನು ಮೆಲುಕು ಹಾಕುತ್ತಾ ಇರಬೇಕು ನಗಿಸಿದವರ ಮತ್ತು ಅಳಿಸಿದವರ ತುಲನೆಯಲ್ಲಿಯೇ ತೇಲಬೇಕಿದೆ ಜೀವನದ ದೋಣಿ..... ಕನ್ನಡತಿ ಈ ವಸುಮತಿ ✍️
ಬಾನಿನಲ್ಲಿ ಕವಿದ ದಟ್ಟ ಮೋಡಗಳನ್ನು ಬೆಟ್ಟಗಳು ತಡೆದು ಮಳೆ ಸುರಿಸುವ ಹಾಗೆ ನಮ್ಮಲ್ಲಿನ ತಪ್ಪುಗಳನ್ನು ತಿದ್ದಲು ಒಳ ಮನವು ಜಾಗೃತವಾಗಿದ್ದು ಒಂದಲ್ಲ ಒಂದು ದಿನ ತಪ್ಪಿನ ಅರಿವಾಗಿ ಕಣ್ಣೀರು ಸುರಿಸುವ ಕಾಲ ಬಂದೆ ಬರುತ್ತದೆ
ಮಣ್ಣು ಮತ್ತು ಹೆಣ್ಣು ಋಣವಿಲ್ಲದೆ ದಕ್ಕದು ಅವನಿಯಲ್ಲಿರುವುದು ಎಲ್ಲರನ್ನು ಹೊರುವ ಕಣ ಅವಳಲ್ಲಿ ಇಹುದು ಎಲ್ಲವನ್ನೂ ಸಹಿಸುವ ಗುಣ ಅವಳೇ ಇಳೆ ಇವಳೇ ಮಹಿಳೆ ಇವಳು ನಕ್ಕರೆ ಇಳೆಗೂ ಕಳೆ ಕನ್ನಡತಿ ಈ ವಸುಮತಿ ✍️