ಪನ್ನೀರಾಗಿ ಬದಲಾಗಬಹುದು
-
ಯಾರ ಮಾತಿಗೂ ಸೊಪ್ಪು ಹಾಕದ ಬೆಡಗಿ.
ನಾ ಬರೆವುದೆಲ್ಲಾ ನನ್ನ ಕಲ್ಪನೆಯ ಸ... read more
*ಭಗವಂತ.. :-*
.. ಹೇ.. ಬಾಲಿಕೇ.. ಮೆಚ್ಚಿದೆ
ನಿನ್ನ ಅದ್ಭುತವಾದ ಗಾಯನಕೆ,
ನಿನಗಾವ ವರ ಬೇಕೋ ಕೋರಿಕೊ.
*ಭಕ್ತೆ..... : -*
ಹೇ ಭಗವಂತ.. ನಾನು ಬಾಲಿಕೆಯೂ
ಅಲ್ಲ ನನಗಾವ ಬಾಲವೊ ಇಲ್ಲ,
ಕೋರುವ ವಯಸಲ್ಲಿ ನನಗೊಪ್ಪುವ ವರನನ್ನು
ಕರಣಿಸದೆ ಇಹದಲ್ಲಿಯೇ ತುಚ್ಛನಾದ
ಹುಚ್ಚನನ್ನು ಕರುಣಿಸಿ ನನ್ನ ಕನಸುಗಳನೆಲ್ಲ
ನುಚ್ಚು ನೂರು ಮಾಡಿದೆ,
*ಹೇ... !! ಮಾಧವಾ...*
ನನ್ನ ಈ ಜೀವನ ನಾಟಕದಲ್ಲಿ
ವಧು-ವರ ಮದುವೆ
ಸಂಸಾರಗಳಂತಹ ಅಂಕಗಳೆಲ್ಲ
ಮುಗಿದು ಹೋಗಿ ಅಂಕದ ಪರದೆ
ಜಾರುವದಷ್ಟೇ ಬಾಕಿ ಇದೆ,
ಅದನ್ನೊಂದು ಸುಂದರವಾಗಿ
ಜಾರಿಸಿಬಿಡು ಕೃತಾರ್ಥಳಾಗುತ್ತೇನೆ🙏-
ಮನ್ನಿಸು ಒಮ್ಮೊಮ್ಮೆ ನಗುವಿಗಾಗಿ, ನಿನಗಾಗಿ ,
ಕೋಪದ ಮೂಟೆಯದು ಕೂಪಕ್ಕೆ ತಳ್ಳದಂತೆ
ಬದುಕಿ ಬಿಡು, ಬದುಕಲು ಬಿಡು. ಇಷ್ಟೇ ತಾನೇ ಬದುಕಿನಾಟ,ಸರ್ವಕಾಲಕೂ ಅವನದೇ ಇದೆ ಮೇಲಾಟ,ನಮ್ಮದು ಬರೀ ಇದ್ದದ್ದೆ ಕೂಗಾಟ-
ಮನವೆಂಬ ಮೊಟ್ಟೆಗೆ
ಸಹನೆಯ ಗುಣವೆಂಬ
ಕಾವು ಕೊಡು ಆ ಮೊಟ್ಟೆಯಿಂದ
ನಲಿವಿನ ಮರಿಗಳು ಹುಟ್ಟಿ
ನಿನ್ನ ಮನೆಯೇ ಸಂತೋಷದ
ಗೂಡಾಗುವುದು ನೊಡಾ-
ಬಸವ ನಾಮ ಸ್ಮರಣೆಯಿಂದ
ಬಸಿದು ಹೋಗುವದು ಪಾಪ
ವಚನಾಮೃತ ಸವಿದು ನಡೆದೊಡೆ
ಕರಗಿ ಹೋಗುವದು ತಾಪ
ಬಸವ ತತ್ವ ಪಾಲಿಸೇ..
ಬೆಳಗುವುದು ಬಾಳ ದೀಪ
ನಮ್ಮ ಶರಣರ ಸಂಗದಿ
ಕಾಣು ನೀ ಕೂಡಲಸಂಗಮ
ದೇವನ ಕರುಣೆಯ ನಿಜ ರೂಪ-
ಯುವರ್ ಕೋಟ್ ನ ಆಡಳಿತ ಮಂಡಲಿಗೆ
ಮಂಡೆ ಸರಿ ಇಲ್ಲ. ಹಣ ಕಟ್ಟಿದ ಪ್ರೈಮ್
ಬಳಕೆ ದಾರರಿಗೆ ಮೋಸ ಮಾಡುತ್ತಿದ್ದಾರೆ.
ಬಳಕೆದಾರರ ಸೇವಾ ವ್ಯವಸ್ಥೆ ಸರಿ ಇದ್ದಿದ್ದರೆ
ಹೀಗಾಗುತ್ತಿರಲಿಲ್ಲ. ಕುಣಿಯಲು ಬರದವಳು
ನೆಲವೇ ಡೊಂಕು ಅಂದಳಂತೆ, ಹಾಗಾಗಿದೆ.
-
ಕರಗುವುದು ಸಕ್ಕರೆ,
ಹಾಲಿಗೆ, ನೀರಿಗೆ,
ಚಹ,ಕಾಫಿ,ಪಾಯಸಕೆ.
ಸಕ್ಕರೆ ಪಾನಕ ಬೇಕು
ಆಯಾಸ ಪರಿಹಾರಕೆ
ಪ್ರತಿ ಬಾರಿಯೂ ನಾ
ಕರಗುವೆ ನಿನದೇ
ಉಪಚಾರಕೆ
ಪ್ರತಿಯಾಗಿ ನನಗೇನು
ಕೊಡುವೆ ನೀ ಕಾಣಿಕೆ-
ಕನ್ನಡದ ಒಂದು ಚಲನಚಿತ್ರ
ನಿರ್ದೇಶನ ...ಸಿಂಗೀತಂ ಶ್ರೀನಿವಾಸರಾವ್
ನಿರ್ಮಾಪಕಿ ... ಪಾರ್ವತಮ್ಮ ರಾಜ್ಕುಮಾರ್
ಪಾತ್ರವರ್ಗ...
ಡಾ.ರಾಜ್ಕುಮಾರ್ ಸರಿತಾ, ಅಂಬಿಕ ಅಶ್ವಥ್,
ಶಿವರಾಂ, ಆದವಾನಿ ಲಕ್ಷ್ಮೀದೇವಿ,
ಮಾ.ಪುನೀತ್. ರಾಜ್ಕುಮಾರ್
ಸಂಗೀತ... ರಾಜನ್-ನಾಗೇಂದ್ರ
ಛಾಯಾಗ್ರಹಣ... ಬಿ .ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು... ೧೯೮೨
ಚಿತ್ರ ನಿರ್ಮಾಣ ಸಂಸ್ಥೆ.. ವೈಷ್ಣವಿ ಮೂವೀಸ್
ಕಾಣದಂತೆ ಮಾಯವಾದ ಡಾ||ಪುನೀತ್ ರಾಜಕುಮಾರ್ ಅಪ್ಪು ಅವರ ಅತ್ಯದ್ಭುತ ಚಿತ್ರ-