ಅಜ್ಞಾನವೆಂಬ ಅಂಧಕಾರ ಕಳೆಯುವ ಗುರು
ಲೋಕಕಲ್ಯಾಣಕ್ಕಾಗಿ ಅವತರಿಸಿದ ಮಹಾನ್ ಗುರು,
ಸತ್ಯದ ಪಥದಲ್ಲಿ ಕೈಹಿಡಿದು ನಡೆಸುವ ದೇವ
ಭಕ್ತರ ಸಂಕಷ್ಟ ಬಗೆಹರಿಸಿ ನೀಡುವರು ಮರುಜೀವ.-
ಬೆಂಗಳೂರಿನಲ್ಲಿ ಜೀವನ... ಮನಸ್ಸಿಗೆ ತೋಚಿದ್ದನ್ನು
ಬರೆಯುವ ಹವ್ಯಾಸವಿದೆ... ತರ್ಲೆಗೆ ಹೆಸರುವಾಸಿ... read more
ಗುರುರಾಯರ ನಾಮಸ್ಮರಣೆ ಮಾಡದವರಿಲ್ಲ
ಗುರುರಾಯರ ಮಠವಿಲ್ಲದ ಊರಿಲ್ಲ,
ಗುರುರಾಯರ ಅನುಗ್ರಹ ಬೇಕು ಭಕ್ತರಿಗೆ
ಗುರುರಾಯರೆ ಪರಿಹಾರ ಭಕ್ತರ ಸಂಕಷ್ಟಗಳಿಗೆ.-
ಗುರುಗಳ ಮುಂದೆ ಸರಿ ಸಮ ಯಾರಿಲ್ಲ
ಗುರುಗಳ ಪಾದಕ್ಕೆ ಶರಣಾಗದವರಿಲ್ಲ,
ಗುರುರಾಯರನ್ನು ನಂಬಿ ನಡೆದರೆಲ್ಲ
ಮನಕೆ ನೆಮ್ಮದಿ ಸಿಕ್ಕಿ, ಹಸನಾಗುವುದು ಬದುಕೆಲ್ಲ.-
ನಾಲಿಗೆ ಹತೋಟಿಯಲ್ಲಿದ್ದರೆ ಉತ್ತಮ,
ನಾಲಿಗೆಯ ಹುಚ್ಚಾಟ ಹೆಚ್ಚಾದರೆ ಬದುಕೇ ನಿರ್ನಾಮ.-
ಕುಸುಮಗಳಿಂದ
ಕಂಗೊಳಿಸುತ್ತಿದೆ ಬೃಂದಾವನ
ಭಗವದ್ಭಕ್ತರ ಕಂಗಳಿಗೆ
ನೀಡಿದೆ ಭಕ್ತಿಯ ಸಿರಿತನ ,
ಗುರುರಾಯರ ರಕ್ಷಣೆಯೇ
ಭಕ್ತರ ಬದುಕಿಗೆ ಚೇತನ
ಗುರುಗಳ ನೆನೆದೊಡನೆ
ಶಾಂತಿಯಿಂದಿರಲಿದೆ ಮನ.-
ಗುರುರಾಯರ ದರುಶನ
ಕಂಗಳಿಗೆ ವರದಾನ,
ಕಾಮಧೇನುವಿನ ಆಶೀರ್ವಾದ
ಬದುಕಲ್ಲಿ ಮೂಡಲಿದೆ ಆನಂದ,
ಕಲ್ಪವೃಕ್ಷದ ಸ್ಪರ್ಶ
ಮನದಲ್ಲಿ ನೆಲೆಸಲಿದೆ ಹರ್ಷ.-
ಕಂಗಳಲ್ಲಿ ಕರುಣೆಯ ಹೊತ್ತ ಕರುಣಾಳು
ಸಂಕಷ್ಟಗಳ ಅಳಿಸಿ ಸನ್ಮಾರ್ಗ ತೋರುವ ಸದ್ಗುರು,
ಜ್ಞಾನಾರ್ಜನೆಯೇ ಶ್ರೇಷ್ಠ ಸಾಧನೆಯೆಂದ ಜ್ಞಾನೇಂದ್ರ
ಮನುಕುಲಕ್ಕೆ ದೊರೆತ ಮಹಾನ್ ಶಕ್ತಿ ಶ್ರೀ ಗುರು ರಾಘವೇಂದ್ರ.-
ಮನಕೆ ನೆಮ್ಮದಿ ಕರುಣಿಸುವ ಗುರುಗಳಿವರು
ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುವವರಿವರು,
ನೆನೆದೊಡನೆ ಬಂದು ಕೈಹಿಡಿವ ಕರುಣಾಮಯಿಗಳಿವರು
ಭಕ್ತರ ಪಾಲಿನ ಕಲಿಯುಗದ ಆಪತ್ಭಾಂದವರಿವರು.-
ದುಷ್ಟರ ಸಂಹಾರಕ್ಕೆ ನವದುರ್ಗೆಯರ ಅವತಾರ
ರಾಕ್ಷಸರ ನಿರ್ನಾಮಕ್ಕೆ ವಿಷ್ಣುವಿನಿಂದ ದಶಾವತಾರ,
ಭಯೋತ್ಪಾದಕರ ಅಂತ್ಯ ಕಾಣಿಸಲು ಆಪರೇಶನ್ ಸಿಂಧೂರ.-