KIRAN SAGAR V.B.   (✍️ ಕಿರಣ್ ಸಾಗರ್ ವಿ.ಬಿ.)
456 Followers · 162 Following

read more
Joined 26 October 2019


read more
Joined 26 October 2019
15 MAY AT 9:36

ಕಂಗಳಲ್ಲಿ ಕರುಣೆಯ ಹೊತ್ತ ಕರುಣಾಳು
ಸಂಕಷ್ಟಗಳ ಅಳಿಸಿ ಸನ್ಮಾರ್ಗ ತೋರುವ ಸದ್ಗುರು,
ಜ್ಞಾನಾರ್ಜನೆಯೇ ಶ್ರೇಷ್ಠ ಸಾಧನೆಯೆಂದ ಜ್ಞಾನೇಂದ್ರ
ಮನುಕುಲಕ್ಕೆ ದೊರೆತ ಮಹಾನ್ ಶಕ್ತಿ ಶ್ರೀ ಗುರು ರಾಘವೇಂದ್ರ.

-


8 MAY AT 0:06

ಮನಕೆ ನೆಮ್ಮದಿ ಕರುಣಿಸುವ ಗುರುಗಳಿವರು
ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುವವರಿವರು,
ನೆನೆದೊಡನೆ ಬಂದು ಕೈಹಿಡಿವ ಕರುಣಾಮಯಿಗಳಿವರು
ಭಕ್ತರ ಪಾಲಿನ ಕಲಿಯುಗದ ಆಪತ್ಭಾಂದವರಿವರು.

-


7 MAY AT 13:55

ದುಷ್ಟರ ಸಂಹಾರಕ್ಕೆ ನವದುರ್ಗೆಯರ ಅವತಾರ
ರಾಕ್ಷಸರ ನಿರ್ನಾಮಕ್ಕೆ ವಿಷ್ಣುವಿನಿಂದ ದಶಾವತಾರ,
ಭಯೋತ್ಪಾದಕರ ಅಂತ್ಯ ಕಾಣಿಸಲು ಆಪರೇಶನ್ ಸಿಂಧೂರ.

-


23 APR AT 21:03

ಕಾಲಚಕ್ರ ಉರುಳಿದಂತೆ ಎಲ್ಲರ ಸಮಯ ಬರಲಿದೆ
ಅವರವರ ಕರ್ಮದ ಫಲ ಅವರವರಿಗೆ ಸಿಗಲಿದೆ,
ವಿಧಿಯಾಟದ ಮುಂದೆ ನರನ ಆಟ ನಡೆಯದು
ಸೂತ್ರಧಾರಿಯ ಕೈಯಲ್ಲಿ ಪಾತ್ರಧಾರಿಯ ಬದುಕು.

-


23 APR AT 20:57

ಕನ್ನಡ ನಾಡಿನ ಶ್ರೇಷ್ಠ 'ಮುತ್ತು'
ಕನ್ನಡಿಗರ ಹೃದಯ ಸಿಂಹಾಸನದ 'ರಾಜ'
ನಟನೆಯಲ್ಲಿ ಸಾಧನೆ ಗೈದ 'ಬಬ್ರುವಾಹನ'
ಯೋಗದಿಂದ ಸೆಳೆದರು ಜನರ ಗಮನ,
ಕನ್ನಡಕ್ಕೆ ಸಿರಿತನ ತಂದ 'ಕನ್ನಡದ ಕಣ್ಮಣಿ'
ಗಾಯನದಲ್ಲಿ ಮೋಡಿ ಮಾಡಿದ 'ಗಾನಗಂಧರ್ವ'
ವಿನಯತೆ, ಸರಳತೆಗೆ ಹೆಸರಾದ 'ಬಂಗಾರದ ಮನುಷ್ಯ'
ಅಭಿಮಾನಿ ದೇವರುಗಳ ಹೃದಯದಲ್ಲಿ ಅಜರಾಮರ.

-


23 APR AT 20:47

ರಾಯರೆಂದರೆ ಶಕ್ತಿ
ರಾಯರೆಂದರೆ ಭಕ್ತಿ
ರಾಯರೆಂದರೆ ನಂಬಿಕೆ
ರಾಯರೆಂದರೆ ರಾಗ ಮಾಲಿಕೆ,
ರಾಯರೆಂದರೆ ಉಸಿರು
ರಾಯರೆಂದರೆ ಜಗದ್ಗುರು
ರಾಯರಿಂದಲೇ ಎಲ್ಲ
ರಾಯರಿಲ್ಲದೆ ಏನು ಇಲ್ಲ.

-


17 APR AT 5:55

ನಂಬಿದರೆ ಕೈಹಿಡಿದು ನಡೆಸುವ ದೇವ
ನೆನೆದೊಡನೆ ನಮ್ಮೆಡೆಗೆ ಓಡಿ ಬರುವ
ಸದಾ ಮೂಲ ರಾಮನ ಧ್ಯಾನದಲ್ಲಿ ಮಗ್ನ ,
ಒಡಲಲ್ಲಿ ಕರುಣೆಯ ಹೊತ್ತ ಗುರುವರ್ಯ
ನಮ್ಮ ಪೂಜ್ಯ ಶ್ರೀ ಗುರು ರಾಘವೇಂದ್ರ ತೀರ್ಥರು.

-


10 APR AT 7:38

ಕರ್ಣಗಳಿಗೆ ಇಂಪು ಗುರುರಾಯರ ನಾಮಸ್ಮರಣೆ
ಗುರುರಾಯರು ನೀಗಿಸುವರು ಭಕ್ತರ ಬವಣೆ,
ಭಗವದ್ಭಕ್ತರಿಗೆ ಬೇಕು ಗುರುರಾಯರ ಕರುಣೆ
ಎಲ್ಲೆಡೆ ನಡೆದಿದೆ ರಾಯರಿಗೆ ಸೇವೆಯೆಂಬ ಆಚರಣೆ.

-


6 APR AT 7:14

ವಿಷ್ಣುವಿನ ಅವತಾರ ಶ್ರೀರಾಮ
ಧರ್ಮಕ್ಕೆ ಜಯ ತಂದ ಶ್ರೀರಾಮ
ಆಂಜನೇಯನ ಪ್ರಾಣ ಶ್ರೀರಾಮ
ಮರ್ಯಾದಾ ಪುರುಷೋತ್ತಮ ಶ್ರೀರಾಮ
ಜಾನಕಿಯ ವಲ್ಲಭ ಶ್ರೀರಾಮ
ಅಯೋಧ್ಯೆಯ ಪ್ರಜೆಗಳ ರಾಜ ಶ್ರೀರಾಮ
ಭಕ್ತರ ಕ್ಲೇಶವನ್ನು ದೂರ ಮಾಡುವನು ಶ್ರೀರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ.

-


3 APR AT 11:54

ತುಳಸಿ ಮಾಲೆಯ
ಧರಿಸಿದ ಯತಿವರ್ಯ,
ತುಳಸಿ ದಳವ ಇಷ್ಟ
ಪಡುವ ಗುರುವರ್ಯ,
ವೆಂಕಟರಮಣನ ವರದಿಂದ
ಜನಿಸಿದ ಗುರುಗಳಿವರು,
ಅವರೇ ನಮ್ಮ ಮಂಚಾಲೆಯ ನಿವಾಸಿ
ಶ್ರೀ ಗುರು ರಾಘವೇಂದ್ರ ತೀರ್ಥರು.

-


Fetching KIRAN SAGAR V.B. Quotes