KIRAN SAGAR V.B.   (✍️ ಕಿರಣ್ ಸಾಗರ್ ವಿ.ಬಿ.)
458 Followers · 162 Following

read more
Joined 26 October 2019


read more
Joined 26 October 2019
24 APR AT 10:13

ಕರುನಾಡಿನ ಹೆಮ್ಮೆಯ ಮುತ್ತು
ಅಭಿಮಾನಿ ದೇವರುಗಳ ಸ್ವತ್ತು
ದೇಶವೆ ತಲೆಬಾಗಿತು ಇವರ ವ್ಯಕ್ತಿತ್ವಕ್ಕೆ
ಮನಸೋಲದವರಿಲ್ಲ ಇವರ ಗಾಯನಕ್ಕೆ
ಕಂಗಳಿಲ್ಲದವರಿಗೆ ದೃಷ್ಟಿ ನೀಡಿದ ಮಹಾ ದಾನಿ
ಎಲ್ಲಾ ಪೀಳಿಗೆಗೆ ಸ್ಫೂರ್ತಿ ಇವರ ಬದುಕಿನ ಕಹಾನಿ.

-


21 APR AT 9:54

ಅರಳುತ್ತಿದ್ದ ಕುಸುಮವೊಂದು
ಸ್ವಾರ್ಥವೆಂಬ ಬೆಂಕಿಗೆ ಸಿಲುಕಿ ಮಡಿದಿದೆ,
ಊಹಿಸಲಾಗದಂತ ಬಹುಮಾನ
ದೊರೆಯಿತು ತಾನಿಟ್ಟ ನಂಬಿಕೆಗೆ,
ಕರ್ಮವು ಬೆಂಬಿಡದೆ ಕಾಡಲಿದೆ
ತಪ್ಪಿತಸ್ಥರು ಗೈದ ಪಾಪಗಳಿಗೆ,
ಇನ್ನೆಷ್ಟು ವಿಕೃತ ಮನಸ್ಸುಗಳು
ಬದುಕುತ್ತಿವೆಯೋ ಈ ಜಗದೊಳಗೆ?

-


18 APR AT 10:04

'ನಂಬಿಕೆ' ಎಂಬ ಪದದ
ಅರ್ಥವೆ ರಾಯರು
ಕೈಹಿಡಿದು ಮುನ್ನೆಡೆಸುವ
ನಿಸ್ವಾರ್ಥದ ಗುಣ ಹೊತ್ತ ಗುರು,
ಮನಸ್ಸಿಗೆ ನೆಮ್ಮದಿ ತರುವ
ನಾಮವೆ ರಾಘವೇಂದ್ರ
ಶರಣು ಶರಣು ಶರಣು
ಮಂತ್ರಾಲಯದ ಯತೀಂದ್ರ.

-


17 APR AT 10:39

ರಘು ಕುಲ ತಿಲಕ ಶ್ರೀರಾಮ
ಜಾನಕಿಯ ವಲ್ಲಭ ಶ್ರೀರಾಮ
ಹನುಮನ ಉಸಿರೇ ಶ್ರೀರಾಮ
ಲಕ್ಷ್ಮಣನ ಪ್ರಿಯ ಸಹೋದರ ಶ್ರೀರಾಮ
ಅಯೋಧ್ಯೆಯ ರಾಜ ಶ್ರೀರಾಮ
ಸದ್ಗುಣಗಳ ಒಡೆಯ ಶ್ರೀರಾಮ
ಧರ್ಮದ ದಾರಿ ಶ್ರೇಷ್ಠವೆಂದ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ.

-


8 APR AT 22:32

ಹೊಸ ವರುಷ ತರಲಿ ಹರುಷ
ಹೊಸ ಸಂವತ್ಸರ ಆಗಲಿ ಶುಭಕಾರಕ
ಮನೆಮನಗಳಲ್ಲಿ ನೆಲೆಸಲಿ ಸಂತೋಷ
ವಸಂತ ಮಾಸಕ್ಕೆ ನವಿಲಿನ ನರ್ತನ
ಮಾವಿನ ಮರದ ಮೇಲೆ ಕೋಗಿಲೆಯ ಗಾನ
ಪ್ರಕೃತಿಯಲ್ಲಿನ ಚಂದದ ಬದಲಾವಣೆ
ನೋಡುಗರ ಕಂಗಳಿಗೆ ಆಕರ್ಷಣೆ
ಕಷ್ಟಗಳೆಂಬ ಕಹಿ ಬೇವು ಮರೆಯಾಗಿ
ಸುಖವೆಂಬ ಸಿಹಿ ಬೆಲ್ಲ ಜೊತೆಯಾಗಿ
ನಗುವೆಂಬ ಮಾವಿನ ಎಲೆಗಳು ತೋರಣವಾಗಿ
ದ್ವೇಷಗಳೆಲ್ಲ ಅಳಿದು, ಪ್ರೀತಿ ಚಿಗುರೊಡೆಯಲಿ
ಸಂಭ್ರಮದಿಂದಾಚರಿಸಿ ಈ ಚಾಂದ್ರಮಾನ ಯುಗಾದಿ.

-


25 MAR AT 9:07

ಬಣ್ಣಗಳ ಜೊತೆ ಭಾವಗಳು ಬೆರೆತು
ರಂಗೇರಿದೆ ಬದುಕೆಂಬ ಬಿಳಿ ಹಾಳೆ,
ಬಣ್ಣಗಳ ಅರ್ಥ ತಿಳಿಸಿ ದ್ವೇಷವ ಮರೆತು
ಮೊಳಗಿಸೋಣ ಎಲ್ಲೆಡೆ ಸಂತಸದ ಕಹಳೆ.

-


17 MAR AT 10:24

ಮಾನವೀಯ ಮೌಲ್ಯಗಳ ಸರದಾರ
ನಗುವಿನಲ್ಲೆ ಎಲ್ಲರ ಗಮನ ಸೆಳೆದ ಜಾದುಗಾರ
ಕನ್ನಡಿಗರ ಪ್ರತಿನಿಧಿಯಾದ ಕರ್ನಾಟಕ ರತ್ನ
ಕನ್ನಡ ಚಿತ್ರರಂಗಕ್ಕೆ ದೊರೆತ ಅಪ್ರತಿಮ ಕಲೆಗಾರ
ನಯ ವಿನಯದ ಪ್ರತಿಬಿಂಬವಾಗಿ ನಿಂತ 'ಪುನೀತ'
ಅಭಿಮಾನಿಗಳ ಹೃದಯದಲ್ಲಿ ದೇವರಾದ 'ರಾಜ ಕುಮಾರ'.

-


8 MAR AT 12:34

ಸೃಷ್ಟಿಯ ಮೂಲ ಹೆಣ್ಣು
ಹೆಣ್ಣೆ ಸಂಸಾರದ ಕಣ್ಣು,
ಹೆಣ್ಣು ಒಲಿದರೆ ದೇವತೆ
ಹೆಣ್ಣಿಂದಲೇ ಪ್ರೀತಿಗೆ ಮಾನ್ಯತೆ.

-


8 MAR AT 12:22

ಮೂರು ಲೋಕದ ಒಡೆಯ ಈಶ್ವರ
ಮೂರು ಕಣ್ಣುಳ್ಳ ಪರಮೇಶ್ವರ
ಪಾರ್ವತಿಯ ಕೈಹಿಡಿದ ಹೃದಯೇಶ್ವರ
ಬೇಡನ ಭಕ್ತಿಗೆ ಕಣ್ಣು ಕೊಟ್ಟ ಶಿವಪ್ಪ
ಲೋಕದ ಹಿತಕ್ಕಾಗಿ ವಿಷ ಕುಡಿದ ನೀಲಕಂಠ
ಭಕ್ತಿ, ಸೇವೆಗೆ ಒಲಿಯುವ ಶ್ರೀಕಂಠ
ಮೃತ್ಯುವನ್ನು ಮೆಟ್ಟಿ ನಿಂತ ಮೃತ್ಯುಂಜಯ
ಪಂಚಾಕ್ಷರಿ ಮಂತ್ರದಿಂದ ಕಷ್ಟಗಳು ಮಾಯ
ಜಗದ ಸೃಷ್ಟಿ, ಸ್ಥಿತಿ, ಲಯಕಾರಕ
ಅಜ್ಞಾನ ಅಳಿಸಿ ಸುಜ್ಞಾನದ ದಾರಿ ತೋರುವಾತ
ಸಹಬಾಳ್ವೆಯ ಸಂದೇಶ ತಿಳಿಸಿದ ಅರ್ಧನಾರೀಶ್ವರ
ಶರಣು ಶರಣು ಶರಣು ನಿನಗೆ ಜಗದೀಶ್ವರ.

-


6 MAR AT 11:53

ಒಮ್ಮೊಮ್ಮೆ ಎಲುಬಿಲ್ಲದ
ನಾಲಿಗೆ ಖಡ್ಗಕ್ಕಿಂತ ಹರಿತ,
ಕೆಲವೊಮ್ಮೆ ಅದೇ ನಾಲಿಗೆ
ಮನಸ್ಸಿಗೆ ನೋವು ಮರೆಸುವ ಸಂಜೀವಿನಿ.

-


Fetching KIRAN SAGAR V.B. Quotes