..... ಇಂತಿ   (ನನಗೆ ನಾನೆ ಪ್ರಿಯ.....)
97 Followers · 27 Following

read more
Joined 6 July 2019


read more
Joined 6 July 2019
18 MAY AT 22:06

ಅವರಿಗೆ ಬಾರದ ಭಾವನೆ,
ನಿನಗೆ ಬಾರವಾದ ಭಾವನೆ.
ಮುಖ ನೋಡಿ ಅಷ್ಟೇ ಹೇಳಬಹುದು ಅವರು ಅಳುತ್ತಿದ್ದಾರೆ, ನಗುತ್ತಿದ್ದಾರೆ ಇಲ್ಲ ಹಳಸಿಕೊಂಡಿದ್ದಾರೆ ಅಂತ.
ಮನಸ್ಸು ನೋಡು ಅಂದ್ರೆ ಹೇಗೆ ನೋಡೋಕೆ ಆಗುತ್ತೆ ಅವರ ಮನಸ್ಸು ಅವರಿಗೆ ಸರಿಯಾಗಿ ಗೊತ್ತಿರಲ್ಲ..

-


1 JAN AT 8:31

ಹೊಸ ವರ್ಷ ಹೊಸ ಕನಸುಗಳ ಹಾದಿ,
ಮನುಷ್ಯನ ಆಸೆಗಳು ಅಂತ್ಯವಿಲ್ಲ ಆದಿ.
ಪುಸ್ತಕದ ಪುಟ ಅಷ್ಟೆ ತಿರುಗಿಸಿದ್ದೇವೆ,
ಇನ್ನ ಓದಿ ಮುಗಿದಿಲ್ಲ ಬದುಕಿನ ಪುಸ್ತಕ.
ತಪ್ಪು ಸರಿಗಳ ಲೆಕ್ಕಾಚಾರದಲ್ಲೇ ಇದ್ದೇವೆ,
ತಪ್ಪು ತಿದ್ದಿಕೊಳ್ಳಲ್ಲಿ ಮನುಷ್ಯನ ಮಸ್ತಕ.

-


19 DEC 2024 AT 16:26

ಹೃದಯ ಕೆಣಕಿದೆ ನಿನ್ನ ತುಟಿಯ ತುಂಟತನ,
ತಬ್ಬಿಕೊಂಡಿವೆ ತೋಳುಗಳು ಮುರಿದು ಮೌನ.
ನಿನ್ನ ಅಂದ ನನ್ನ ಕಣ್ಣಿಗೆ ಸಿಹಿಯಾಗಿದೆ,
ಕೆಂಪಾದ ತುಟಿ ಅಂಚಲಿ ಜೇನು ಜಾರಿದೆ.

-


5 SEP 2024 AT 10:01

ಜ್ಞಾನ ಎಲ್ಲಾರ ಒಳಗೂ ಇರುತ್ತೆ ಆದ್ರೆ
ಅದ ಆಚೆ ತರೋದು ಒಬ್ಬ ಒಳ್ಳೆ
ಗುರುವಿಂದ ಮಾತ್ರ ಅಷ್ಟೆ ಸಾಧ್ಯ..
ನನ್ನ ಜೀವನದಲ್ಲಿ ಬಂದು ಜ್ಞಾನದ
ಅರಿವು ಮೂಡಿಸಿ ಒಳ್ಳೆ ಮಾರ್ಗದರ್ಶನ
ತೋರಿದ ನನ್ನೆಲ್ಲಾ ಗುರುಗಳಿಗೂ ಧನ್ಯವಾದಗಳು.
ಶಿಕ್ಷಕರ ದಿನಾಚರಣೆ ಶುಭಾಶಯಗಳು..

-


18 NOV 2023 AT 22:30

ಈ ದಾಂಪತ್ಯ ಜೀವನಕ್ಕೆ ತುಂಬಿದೆ ವರ್ಷ ಮೂರು,
ಗೆಳತಿಯಾಗಿ ಜೊತೆ ಇರು ಇನ್ನೂ ವರುಷ ನೂರು.
ಬಾಳ ಕತ್ತಲ ಸರಿಸುತ್ತಾ ಸಾಗುವ ಜೊತೆಯಾಗಿ,
ಕಷ್ಟದಲ್ಲೂ ಸಿಹಿ ಉಂಡು ಜೀವಿಸುವ ಹಿತವಾಗಿ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಶ್ರೀಮತಿ.

-


1 NOV 2023 AT 12:20

ಬಾರಿಸು ಮನ ಮನದಲ್ಲಿ ಕನ್ನಡ ಡಿಂಡಿಮವ,
ಹಾರಿಸು ಮನೆ ಮನೆಯಲ್ಲಿ ಕನ್ನಡ ಬಾವುಟವ.
ಎಲ್ಲಾದರೂ ಇರು ಎಂತಾದರೂ ಇರು ಬಳಸು ಕನ್ನಡವ,
ಮರೆಯದಿರು ಕನ್ನಡ ತಾಯಿಯ ಈ ಋಣವ.
ಕಸ್ತೂರಿ ಕಂಪಿನ ಕನ್ನಡ, ಮರೆಯಬೇಡ ಹೆಮ್ಮೆಯ ಕರುನಾಡ.
ನೆಲ ಕನ್ನಡ, ಜಲ ಕನ್ನಡ, ನುಡಿ ಕನ್ನಡ, ತನು ಕನ್ನಡ, ಮನ ಕನ್ನಡ.

-


23 AUG 2023 AT 22:55

ಚಂದ್ರನ ತಲುಪಿದ ಯಶಸ್ವಿ ಯಾನ,
ಆಚರಣೆ ಮಾಡಿದೆ ಭಾರತದ ಜನ ಮನ.
ಚಂದಿರನ ಮೇಲೆ ನಮ್ಮ ಭಾರತದ ಬಾವುಟ,
ಇಂದು ಭಾರತ ಸೇರಿದೆ ಇತಿಹಾಸದ ಪುಟ.
ಚಂದಿರನ ಅಂಗಳಕ್ಕೆ ನಮ್ಮ ರಣವಿಕ್ರಮ,
ಚಂದಿರನ ದಕ್ಷಿಣ ಧ್ರುವದಲ್ಲಿ ವಿಜಯ ವಿಕ್ರಮ.

-


17 JUL 2023 AT 14:27

ನಿನ್ನ ಕೋಪಕ್ಕೆ ಕಾರಣವೇ ಸಿಕ್ಕಿಲ್ಲ,
ನಿಜ ಪ್ರೀತಿ ಅವಶ್ಯಕತೆಗೆ ಬರೊದಲ್ಲ.
ನಾನು ಅಂದರೇ ತೊಂದರೆ ನಿನಗೆ,
ನೀನು ಅಂದರೇ ನೆಮ್ಮದಿ ನನಗೆ.
ಇನ್ನ ಸುಖವಾಗಿರು ನನ್ನ ಬಿಟ್ಟು,
ನನ್ನ ಮೇಲೆ ನಿನ್ನ ಪ್ರೀತಿ ಜಾಸ್ತಿ ನೂರುಪಟ್ಟು.

-


14 JUN 2023 AT 12:43

ಸಂಸ್ಕೃತ ಸಿರಿ ಗೆ ತುಂಬಿದೆ ವರ್ಷ ಆರು,
ಹೀಗೆ ಪ್ರತಿಭೆಗೆ ಬೆಳಕಾಗಿ ಬೆಳಗಲಿ ವರ್ಷ ನೂರು.
ಬೆಳೆಯುವ ಸಿರಿ ಮೊಳಕೆಯಲ್ಲಿ,
ಕಾಣದ ಪ್ರತಿಭೆಯ ಅನಾವರಣ ಸಂಸ್ಕೃತ ಸಿರಿಯಲ್ಲಿ.
ಶುಭಾಶಯಗಳು ಸಂಸ್ಕೃತ ಸಿರಿ,
ಎಲ್ಲರೂ ಮೆಚ್ಚುವಂತಹ ಕೆಲಸ ವೈಖರಿ.

-


14 JUN 2023 AT 9:52

ಸಮಯ ಕೂಡಿ ಬರಬೇಕು,
ಪುಣ್ಯ ಫಲ ಕೊಡಬೇಕು.
ಕಳೆದುಕೊಂಡ ಆಗಿದೆ,
ಚಿಂತೆಗೆ ಫಲ ಎಲ್ಲಿದೆ.
ಉಸಿರು ಇದ್ದು ಸತ್ತಂತೆ,
ಚಿಂತೆಯ ಚಿತೆ ಏರಿದಂತೆ.
ಮುಗಿಯಿತೇ ಪುಣ್ಯದ ಸರಕು.
ಶುರುವಾಗಿದೆ ಕರ್ಮದ ಬದುಕು.

-


Fetching ..... ಇಂತಿ Quotes