ಸಾಧ್ಯವಾದಷ್ಟು ಖುಷಿ
ಕಂಡುಕೊಂಡು ಕಾಲದ
ಜೊತೆ ಹೆಜ್ಜೆ ಇಡುನ್ರಿ,
ತಪ್ಪು ಒಪ್ಪುಗಳ ವಿಮರ್ಶೆ
ಮನಸಾಕ್ಷಿಯ ಇಚ್ಛೆಗೆ ಬಿಡುನ್ರಿ.-
ಬರ್ಕೋತ ಇರ್ರಿ
ಕಣ್ಣೀರಿನ ಬದ್ಕ್
ಮೊದಲು ಮಾನವನಾಗು
Humanity First
ಗೆದ್ದೇ ಗೆಲ್ಲುವೆ ಒಂದು ದಿ... read more
ಎಲ್ಲರ್ಗೂ ಹತ್ರ ಆಗೋದು❤️
ಆಮೇಲೆ ಒಂದಿನಾ ಕಳ್ಕೊಳೋದು😔
ಅದನ್ನ ನೆನಸ್ಕೊಂಡು ದಿನಾ ನೋವ್ ತಿನ್ನೋದು😥-
ಎಷ್ಟ ಸಾಧ್ಯ ಅಷ್ಟ ಜೋಶ್ಲೇ ಹೊಯ್ಕೋರಿ,
ವರ್ಸ ಪೂರ್ತಿ ಒಬ್ಬರ್ ಮ್ಯಾಲ್
ಒಬ್ಬರ್ ಹೊಯ್ಕೋತಿರತೇರಿ,
ಹೊಲಸೇಲಾಗಿ ಒಮ್ಮೆ
ಇವತ್ ಹೊಯ್ಕೋರೀ,
ಎಲ್ಲರೂ ಇವತ್ತಷ್ಟೇ ಬಣ್ಣ ಆಡಲಿ,
ಬಣ್ಣ ಜೀವನಕ್ಕ ಬೀಳಲಿ,
ನಿಮ್ಮ್ಗಳೆಲ್ಲಾ ಬದ್ಕ್ ಕಾಮನಬಿಲ್ಲಾಗಲಿ,
ಎಂದೆಂದಿಗೂ ನಿಮ್ಮ ಜೀವನ ಬಣ್ಣ ಬಣ್ಣವಾಗಿರಲಿ.-
ಸಂಬಂಧಗಳಿಗೆ ಎಂದಿಗೂ
ಸಹಜ ಸಾವಿಲ್ಲ,
ಅವು ಅಹಂ,
ಮನೋವೃತ್ತಿ,
ಮತ್ತು ನಿರ್ಲಕ್ಷತೆಗಳಿಂದ
ಕೊಲಲ್ಪಡುತ್ತವೆ ಅಷ್ಟೇ.— % &-
ಸಾಮ್ರಾಜ್ಯ ಕಟ್ಟುವ
ಕನಸೇನಿಲ್ಲ ನಂಗಿಲ್ಲಿ,
ಬದುಕು ಕಟ್ಟಿಕೊಂಡು
ಗೆದ್ದರೆ ಸಾಕಾಗಿತ್ತು ನನಗಿಲ್ಲಿ.— % &-
ಕಾರಣವಾಯಿತು ವೀರರ ಬಲಿದಾನ,
ಸಿಕ್ಕಿತ್ತು ಆಗ ಸ್ವಾತಂತ್ರ್ಯದ ಬಹುಮಾನ,
ದೇಶ ಮುನ್ನಡೆಸಲು ಬೇಕು ಸಂವಿಧಾನ,
"ಕಾನೂನಿನ ನುಡಿ ಜಾರಿಗೆ ಬಂದ ಈ ಸುದಿನ".— % &-
ರೈತರ ಆತ್ಮಹತ್ಯೆ ತಡೆಗಟ್ಟದ,
ನಿರುದ್ಯೋಗ ತಾಂಡವವಾಡುವ,
ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ವಿಸುವ,
ಎಳೆ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುವ,
ಶಿಕ್ಷಣ ಎಲ್ಲರಿಗೂ ನೀಡದ,
ಭ್ರಷ್ಟಾಚಾರ ತಾಂಡವವಾಡುವ,
ಧರ್ಮದ ಹೆಸರಿನಲ್ಲಿ ಮನುಷ್ಯತ್ವದ ರಕ್ತಹರಿಸುವ,
ಪ್ರಾಮಾಣಿಕರು ದೌರ್ಜನ್ಯಕ್ಕೊಳಗಾಗುವ,
ಕಳ್ಳರು ಕಾಕರು ರಾಜಕೀಯ ಮಾಡುವ ಈ
ವ್ಯವಸ್ಥೆ ತೊಲಗಬೇಕೆಂದರೆ ನೇತಾಜಿಯವರು
ತುಳಿದ ದಾರಿಯನ್ನೇ ಇಡೀ
ದೇಶದ ಜನತೆ ತುಳಿಯಬೇಕಿದೆ..-