ಹರ್ಷಿತ್  
39 Followers · 25 Following

ಕನ್ನಡಿಗ
ಖಡ್ಗವಾಗಲಿ ಕಾವ್ಯ - ಜನರ ನೋವಿಗೆ ಮಿಡಿವ ಪ್ರಾಣಮಿತ್ರ
Che❤️
Joined 16 August 2018


ಕನ್ನಡಿಗ
ಖಡ್ಗವಾಗಲಿ ಕಾವ್ಯ - ಜನರ ನೋವಿಗೆ ಮಿಡಿವ ಪ್ರಾಣಮಿತ್ರ
Che❤️
Joined 16 August 2018
11 MAR 2023 AT 21:58

ಅತಿಯಾದ ನೋವು,
ವಿಪರೀತ ದುಃಖ,
ಸಹಿಸಲಾಗದ ನಿರಾಸೆ
ಗಳೆಲ್ಲವೂ ವಿನೋದವೇ...
ನೋಡಿ ನಗುವ,
ನಕ್ಕು ಸ್ವೀಕರಿಸುವ ಮನಸ್ಸಿದ್ದರೆ!.

-


16 NOV 2021 AT 18:49

ಸಮಾಜದಿಂದ
ನಾವು ಬದಲಾಗುವುದಲ್ಲ,
ನಮ್ಮಿಂದ
ಸಮಾಜ ಬದಲಾಗಬೇಕು!

-


11 NOV 2021 AT 15:29

ಕೊಲೆಯೇ ಅದು!
ಅನ್ನ ಇಲ್ಲದೆ ಬದುಕು ಎಂದರೆ
ಕೊಲೆ ಅಲ್ಲದೆ ಇನ್ನೇನು?.

-


21 DEC 2021 AT 19:33

ಕೊಡವು ತುಂಬಿದೆ,
ಕೋಲು ಸವೆದಿದೆ,
ಕಾಣದ ಕಡಲಿಗೆ
ಕಡೆ ಜೀವ ಕಾದಿದೆ!.

-


23 NOV 2021 AT 10:52

ಹಗಲಿರುಳೆನ್ನದೆ ಇವರು
ದುಡಿದ ರೀತಿ,
ಜೀವನ ಪ್ರೀತಿ ಅಷ್ಟೇ!

-


14 NOV 2021 AT 22:22

ಒಳಗಿನ
ಕಷ್ಮಲಗಳನ್ನು
ಕಳೆದುಕೊಂಡಾಗಲೇ
ವ್ಯಕ್ತಿತ್ವಕ್ಕೆ ಹೊಳಪು
ಮೂಡುವುದು!.

-


14 NOV 2021 AT 12:31

ಬದುಕುವುದನ್ನು
ಮಕ್ಕಳು ಕಲಿಸುವಷ್ಟು
ಸರಳವಾಗಿ, ಯಾವ
ಸಂತನೂ,ತತ್ವಜ್ಞಾನಿಯೂ
ಕಲಿಸಲಾರ!..

-


14 NOV 2021 AT 12:00

ಅವಕಾಶವೊಂದು ಬೇಕಿದೆ
ಮಕ್ಕಳಂತಾಗಲು!
ಅಕಾರಣವಾಗಿ ನಗಲು,
ಅಲ್ಪಕೂ ಅಚ್ಚರಿ ಪಡಲು,
ಅಂಗಳದೊಳು ಕೂಡಿಆಡಲು,
ಅಂತರವಿಲ್ಲದೆ ಪ್ರೀತಿಸಲು...

-


12 NOV 2021 AT 20:32

ಆದರ್ಶಗಳು ಬೇಕು!
ಬದುಕನು
ಮುನ್ನಡೆಸುವ
ಹುಟ್ಟುಗಳಂತೆ,
ಆದರ್ಶಗಳು ಬೇಕು!.

-


31 OCT 2021 AT 11:37

ನಗುವಿನ ಮೊಗವೊಂದು
ಕಾಣದೆ ಮರೆಯಾಗಿ,
ಮಗುವೊಂದು ಅಳುತಿಹುದು.

ನಾಟ್ಯದ ಶಿವನಿಂದು
ಕುಣಿಯದೆ ಶಿಲೆಯಾಗಿ,
ವೇದಿಕೆಯೇ ಕುಸಿದಿಹುದು!.

ನಟಿಸುವ ಯುವರತ್ನ
ಮಣ್ಣಲಿ ಮಣ್ಣಾಗಿ,
ಕತ್ತಲೆಯೇ ಸುತ್ತಿಹುದು!.

ನಮ್ಮಲ್ಲರ ಈ ದೈವ
ಆ ದೈವಕೆ ಪ್ರಿಯವಾಗಿ,
ಹೊತ್ತೊಯ್ದ, ಮನದ ಗುಡಿಹೊಡೆದು!.

-


Fetching ಹರ್ಷಿತ್ Quotes