✍ಹರೀಶ್ ಕಜೆ✍  
2.8k Followers · 10.0k Following

read more
Joined 2 March 2019


read more
Joined 2 March 2019

ಪುಸ್ತಕ ದಿನದ ಶುಭಾಶಯಗಳು.
ಪುಸ್ತಕಗಳು ಒಂದೊಳ್ಳೆಯ ಸ್ನೇಹಿತರಂತೆ
ಆಪ್ತವಾಗುವವು ಒಬ್ಬಂಟಿಯಾಗಲು ಬಿಡದಂತೆ
ಒಮ್ಮೆ ನೆಚ್ಚಿಕೊಂಡರೆ ಮತ್ತೆ ದೂರವಾಗದಂತೆ.

-



ಬಿಸಿಲುಸಿರಿನ ತಾಪದೊಳು
ಕಸಿವಿಸಿಗೊಂಡ ತನುವಿನೊಳು
ಹೊಸೆದಿಕ್ಕಿದಂತಾದ ಬೇಸಿಗೆಯೊಳು॥

ವಿರಮಿಸಲೆಂದು ಪೋದೊಡೆ
ಮರದ ನೆರಳಿನ ಕೆಳಗಡೆ
ಭರದಿಂದ ಬೀಸುವ ಬಿಸಿ ಗಾಳಿ ನೋಡೆ॥


-



ಬೆಸುಗೆಯ ಕನಸಿನೊಳು
ನಸುಕಿನ ಬೆಳಕಿನೊಳು
ಕನಸಿನ ರಮ್ಯತೆಯೊಳು
ಮನಸಿನ ದಿವ್ಯತೆಯೊಳು
ಭಾವನೆಗಳ ಬಲೆಯೊಳು
ತೇಲುತಿರುವ ತಂಗಾಳಿಯೊಳು॥

-



ಮೂಕಜ್ಜಿಯ ಕನಸು ಕಾದಂಬರಿ ಜೊತೆಗೆ ಒಂದು ಸುತ್ತಿನ ಪಯಣವನ್ನು ಮುಗಿಸಿದಂತಾಯ್ತು.
ಭೂಮಿಯ ಮೇಲೆ ಪುರಾತನ ಕಾಲದಿಂದಾದ ಸಾಮಾಜಿಕ,ಸಾಂಸ್ಕೃತಿಕ,ಧಾರ್ಮಿಕ, ರೂಢಿ,ನಂಬಿಕೆ, ಪದ್ಧತಿ,ಆರಾಧನೆ,ಆಚಾರ-ವಿಚಾರಗಳ ಸ್ಥಿತ್ಯಂತರಗಳು, ಆ ಸ್ಥಿತ್ಯಂತರಗಳನ್ನು ತಿಳಿಸುವ ಒಂದಷ್ಟು ಚಾರಿತ್ರಿಕ ಆಧಾರಗಳು ಅವುಗಳ ಸಂಶೋಧನೆಯ ಒಂದಷ್ಟು ಮಜಲುಗಳು ಎಳೆ-ಎಳೆಯಾಗಿ ಬಿತ್ತರಿಸಿದೆ ಈ ಕಾದಂಬರಿ. ಚರಿತ್ರೆಯನ್ನು ಓದಿದ ವಿದ್ಯಾರ್ಥಿಯಾಗಿ ಒಂದಷ್ಟು ಚಾರಿತ್ರಿಕ ಶೋಧದತ್ತ ತನ್ನ ಮನವನ್ನು ಹರಿಸಿ, ಆ ನಿಟ್ಟಿನಲ್ಲಿ ದೊರೆತ ಒಂದಷ್ಟು ವಸ್ತು ವಿಷಯಗಳನ್ನು ಅತೀಂದ್ರೀಯ ಶಕ್ತಿಯುಳ್ಳ, ಏಕ ಕಾಲದಿ ಭೂತ,ವರ್ತಮಾನ ಮತ್ತು ಭವಿತವ್ಯದಲ್ಲಿ ಸರಾಗವಾಗಿ ಸಂಚರಿಸಬಲ್ಲ ಮೂಕಜ್ಜಿಯ ಮುಂದಿರಿಸಿ ಆಕೆ ಹೇಳುವ ಗತಕಾಲದಲ್ಲಾದ ಘಟನಾವಳಿಗಳ ಸರಣಿಗಳನ್ನು ತನ್ನ ವಿಚಾರ ತರ್ಕ ಬುದ್ಧಿಗೊತ್ತಿ ಸತ್ಯಾಸತ್ಯತೆಯ ಒಳಹರಿವಿನಲ್ಲಿರಿಸಿ, ಚಾರಿತ್ರಿಕ ಮಹತ್ತರತೆಗೆ ಒಂದಷ್ಟು ಒತ್ತು ಕೊಟ್ಟು, ಒಂದಷ್ಟು ಸಾಮಾಜಿಕ ಆಗು-ಹೋಗುಗಳ ಕಡೆಗೆ ಸತ್ಯತೆಯ ದೀಪ್ತಿಯನ್ನು ಹಚ್ಚಿ ಮೂಕಜ್ಜಿಯ ಕನಸು ಹೊತ್ತಗೆಯು ಒಂದು ತೆರನಾಗಿ ವಿಭಿನ್ನತೆಯನ್ನು ಕಾಯ್ದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

-



ಮೋಹಕದ ನಗುವ ತಾಳ್ದು ವದನದೊಳು
ಬಹು ನಾಟಕ ರೂಪೀ
ಸುದರುಶನಧಾರೀ ನೀಲವರ್ಣದಿಂದ ಕಂಗೊಳಿಪ ವೇಣುನಾದಪ್ರಿಯಾ....॥
ಗೋಪಿಕೆಯರ ಸತಾಯಿಸುತ ಗೊಲ್ಲ ಬಾಲನು ಗೋವರ್ಧನನು
ಬೃಂದಾವನದ ಲತೆ ನಡುವಿನೊಳ್
ತಾನಡಗುತ ಗೋಪಿಕೆಯ ಬೆದರಿಸುತ...॥

ವೇಣು ನಿನಾದದ ಸ್ವರವಂ ಬೀರುತ
ಗೋಪ ಬಾಲೆಯರ ಮನಸೂರೆಗೊಳಿಸುತ
ಲಲನೆಯಿಂದಲಾಗ ಬಾಲೆಯರು
ಸುಸ್ವರವನಾಲಿಸಿ ಮೆಲ್ಲ ಮೆಲ್ಲನೆ ಇರಿಸಿ ಹೆಜ್ಜೆಯಾ....॥
ಸ್ವರವನಾಲಿಸಿ ಮಾನಿನಿಯರು
ನೂಪುರ ಝೇಂಕರಿಸಿ ಗೋಪಿಕೆಯರು
ಹೆಜ್ಜೆ ಮೇಲ್ ಹೆಜ್ಜೆಯನಿರಿಸುತ
ಐತಂದರಾಗ ನಲವಿನಿಂದಲಿ...

-



ರೋಮಾಂಚಿತ ಈ ಸಂಜೆಯು
ಕೆಂಪಾಗಲು ಬಾನಂಗಳ ಈ ರೀತಿಯು
ಸೋತಂತಿದೆ ಈ ಸಂಜೆಯ ರಂಗೋಲಿಯು॥

ಭಾವಾದ್ಭುತ ಈ ದೀಪ್ತಿಯು
ಕರೆದಂತಿದೆ ಬಾನಂಗಳ ಈ ಕಾಂತಿಯು
ಮರೆತಂತಿದೆ ಮನದಂಗಳ ಯಾತ್ರೆಯು॥

ಭಾನಾಸ್ತಮ ಈ ವೇಳೆಯು
ಮೆರೆದಂತಿದೆ ಸಿಂಗಾರದ ಒಡವೆಯು
ತೆರೆದಂತಿದೆ ತಾ ಬಾಗಿಲು ಕೆಂದಾವರೆಯು॥


-



ಅನುಪಮವೇ ನಿನ್ನ ನುಡಿಯೊಡಲು
ನೆನಪಿನಲೇ ಕಳೆದೆನು ಹಗಲಿರುಳು
ತನುಮನವನು ಗೆಲ್ಲುವ ಭರದೊಳು
ಅನುಸರಿಸಿದೆ ಪ್ರೇಮದ ಹೊನಲು॥ಅನುಪಮವೇ॥

ಕನವರಿಕೆಯ ಸಿಹಿ ತಂಗಾಳಿಯೊಳು
ಬೆನ್ನತ್ತಿ ಬಂದಿದೆ ಬಿಸಿ ಗಾಳಿಯ ಘಮಲು
ಹೊನ್ನಂತೆ ಕಂಡ ಬಾಗಿದ ಕಾಮನ ಬಿಲ್ಲು
ಕಣ್ಣ ಮುಚ್ಚಿ ತೆರೆಯಲು ಮಾಯದ ನೆರಳು॥ಅನುಪಮವೇ॥

ಮನ ಮಂಟಪದಿ ತೋರಣ ಸಿಂಗರಿಸಲು
ಬನದ ಹೂ ಮೇಲಣ ದುಂಬಿಯ ತೆರದೊಳು
ಕಾಣದಾಗಿ ಮರೆಯಾಗಿ ಹಾರಿ ಹೋಗಲು
ಎನ್ನಯ ಮನ ಬಂಧಿ ನೆನಪಿನ ಸರಪಳಿಯೊಳು॥ಅನುಪಮವೇ॥


-



ಕಾನನ ಸೊಬಗನು ವೀಕ್ಷಿಸುತಲಿ
ಮನದೊಳು ಮುದವ ತಾಳುತಲಿ
ಘನ ತೆರದಿ ಮನದೋಳ್ ಹಿಗ್ಗುತಲಿ
ವನಸುಮಗಳ ಮುದದಿ ಕೊಯ್ಯುತಲಿ
ತನುವನು ತಂಗಾಳಿಗೆ ಒಡ್ಡುತಲಿ!

-



ಜೀವ ಒಲಿದು ನಲಿದು ಬಂದ
ಭಾವ ನರ್ತನ
ಭಾವ ತುಂಬಿ ಹೊಮ್ಮಿದಂತ
ಆವ ಕಾನನ॥

ಸೊಗಸು ಕಂಡ ಇಳೆಗೆ ಇನಿತು
ಹಸಿರ ತೋರಣ
ಮನಸು ಸೆಳೆದ ಸೊಬಗಿಗಿನಿತು
ಕವಿಯ ನಮನ॥

ರಮಿಸಿತಂದು ರಶ್ಮಿ ಕಿರಣ
ಹಸಿರ ಹೂರಣ
ಗತಿಸಿತಂದು ತಮದ ಭ್ರಮಣ
ಬೆಳಕ ಕಾರಣ॥

-✍ಹರೀಶ್ ಕಜೆ✍

-



ಹೃದಯದ ಮೆರುಗು ಮಿಡಿತಕೆ
ತಂತಿ ನಾದ ಸುಮದ ಹೊದಿಕೆ
ಪ್ರೇಮ ನಾಭಿಯು ಈ ತಾಣದ ಚೆಲುವಿಕೆ
ಅಂಕುರಿಸುವುದು ಸತ್ರ್ಪೇಮ ಈ ಭಾವಕೆ!


-


Fetching ✍ಹರೀಶ್ ಕಜೆ✍ Quotes