ಗುರುವೇ ನೀನು ಅರುಣ
ಪೊರೆದೆ ಬೀರಿ ಕಿರಣ
ತೋರಿ ನಿನ್ನ ಕರುಣಾ
ತೊಡಿಸಿದೆ ಅರಿವಿನ ಆಭರಣ॥
ಬೆಳಕ ಬೀರುತ ಸರಿಸಿದೆ ಅಜ್ಞಾನವ
ಬೆಳಕಿನಿಂದಲಿ ದೂರೀಕರಿಸಿ ತಮವ
ಕರುಣದಿ ಕಲಿಸಿ ಮೂಡಿಸಿ ಸುಜ್ಞಾನವ
ಹೋಗಲಾಡಿಸಿದೆ ನೀನು ಶೂನ್ಯತನವ॥
ಮಾತೃ-ಪಿತೃ ಪ್ರೀತಿಯದೋರುತ
ಕಲಿಸಿದೆ ಎನಗೆ ನೀನು ನಲಿಸುತ
ವಿದ್ಯೆಯೆಂಬ ಜ್ಞಾನ ಸುಧೆಯ ಸುರಿಸುತ
ಜ್ಞಾನಜ್ಯೋತಿಯೆಂಬ ವೀಣೆ ನುಡಿಸುತ॥
-
ಮನಃಸ್ಮಿತಳಾಗಿ ಒಲಿದು ಬಂದೆಯಾ
ಮಂದಸ್ಮಿತಳಾಗಿ ನಲಿದು ನಿಂತೆಯಾ॥
ನಿನ್ನೀ ನಿಲುವಿಗೆ ಮೂಕವಿಸ್ಮಿತನಾಗಿ
ಸದಾ ಇರುವಂತೆ ಮಾಡಿದೆ ಹಸನ್ಮುಖಿಯಾಗಿ॥
ನೀನೊಂದು ಎನ್ನ ಪಾಲಿಗೆ ಭಾಗ್ಯದೇವತೆಯಾಗಿ
ಸದಾ ಎನಗೆ ಒಲುಮೆಯ ಸಿರಿಯಾಗಿ॥
ಐಶ್ವರ್ಯಗಳವಶ್ಯಕತೆಗಳೆಲ್ಲಿಯದಿನ್ನು
ನಿನ್ನ ಮಂದಸ್ಮಿತದಾಭರಣಗಳೇ ಸಿಂಗರಿಸಲಿನ್ನು॥
-
ನಿನ್ನ ನಾಮ ಸ್ಮರಣೆ ಮಾಳ್ಪ ಭಾಗ್ಯವೆನಗೆ ಕರುಣಿಸಯ್ಯ
ನಿನ್ನ ನಾಮ ಸ್ಮರಣೆಯೊಂದೆ ಉಸಿರದೆನ್ನಲಾಗಲಯ್ಯ॥
ಕರುಣೆದೋರಿ ಕಾಯ್ವ ಮೂರ್ತಿ ನಿನಗೆ ನಾನು ಶರಣಯ್ಯ
ನಿನ್ನ ನಾಮವು ಉಸಿರು ಉಸಿರಲಿ ತುಂಬಿ ನಲಿಯಲಯ್ಯ॥
ಕೈಯ ಪಿಡಿದು ನಡೆಸೋ ಗುರುವು ನೀನೇ ಎನಗೆ ಸ್ಪೂರ್ತಿಯಯ್ಯ
ಮಮಕಾರ ತೋರ್ದು ದಾರಿ ತೋರಿಪ ನೀನೇ ಎನ್ನ ದೈವವಯ್ಯ॥
ನಿನ್ನ ಚರಣ ಸೇವೆ ಮಾಡೋ ಭಾಗ್ಯವೆನ್ನದಾಗಲಯ್ಯ
ನಿನ್ನ ಕರುಣ ಕೃಪಕಟಾಕ್ಷವು ಎನ್ನ ಮೇಲೆ ಬೀರಲಯ್ಯ॥
-
ಆಡುತ್ತಾ ಆಡುತ್ತಾ ಜಗಳ
ಮತ್ತೆ ಮುನಿಸು ತೊರೆದ ಜೀವಿಗಳ
ಸವಿಯುವುದೇ ಹಿತ
ಸಂತಸದಿ ಆಡುತ್ತಾ ಆಡುತ್ತಾ ಆಟಗಳ॥
ನಿತ್ಯದಲಿ ಜಗಳವಿಲ್ಲದೆ ದಿನ ಸಾಗದು
ಮತ್ತೆ ಮುನಿಸು ಕ್ಷಣ ಮಾತ್ರದಿ ದೂರವಾಗುತ
ಜೊತೆ ಬೆರೆತು ನಲಿವ ಕುಣಿವ ಜೀವಗಳು
ಸಂತಸದಿ ಒಡಮೂಡಿದ ಬಾಂಧವ್ಯಗಳು॥
ಅಣ್ಣ ತಂಗಿಯರಿಗೆ ಮೀಸಲಿರಿಸಿದ ದಿನ
ಶ್ರೀ ರಕ್ಷಾ ಬಂಧನದ ಶುಭಾಶಯಗಳು॥
-
ಒಣಗಿದ ಬದುಕಿನೊಳು
ಚಿಗುರಾಗಿ ಬರುವೆಯೇನೆ
ಮುದುಡಿದ ಬಾಳಿನೊಳು
ಅರಳುತನವಾಗಿ ನಿಲುವೆಯೇನೆ॥
ಕತ್ತಲಾವರಿಸಿಹ ಬಾಳ ಪಥದೊಳು
ಬೆಳಕಾಗಿ ಹೊಳೆಯುವೆಯೇನೇ
ಕಾರ್ಮೋಡಾವರಿಸಿ ಬಾಳ ಪುಟದೊಳು
ತಿಳಿ ಮೇಘವಾಗಿ ಒದಗುವಿಯೇನೇ॥
ಬತ್ತಿ ಹೋದ ನದಿಯೊಳು
ಹನಿಯಾಗಿ ಒದಗಿ ಬರುವಿಯೇನೇ
ಕಮರಿ ಹೋಗಿಹ ಕನಸಿನಂಗಳದೊಳು
ಹೊನಲಾಗಿ ಮೂಡಿವಿಯೇನೇ॥.-
ಮೋಕೆದ ಉಡಲ್ ನಲಿಪುನ ಪೊರ್ಲು
ತೂಕದೆ ಬಲ ಓ ರಾಣಿ
ಜೋಕೆಡೆ ಪಜ್ಜೆ ಪಾಡಿನ ತಿರ್ಲ್
ತೆರಿಕದೆ ಬಲ ಎನ್ನ ರಾಣಿ
ಕಡಲ್ ದ ಭಾಷೆ ತೆರಿಕದೆ ರಾಣಿ
ಅಲೆಕುಲೆ ಸಾಲ್ ಸಾಲ್ ಡ್ ಲ..
ನೊರೆಕುಲೆ ಪೊರ್ಲು ಪೊರ್ಲುದ ಸುಯ್ಲ್
ತೂಕದೆ ಒಟ್ಟುಗು ಕುಲ್ಲುದುಲ...॥
ಬಾನೊದ ನೀಲಿದ ಬಿಮ್ಮೊನುಲಾ
ತೂಯೆರೆ ಕನ್ನಡಿ ಕಡಲ್..ಗೆಲಾ
ಕಡಲ್..ದ ನೀಲಿದ ಪೊರ್ಲುಗುಲಾ
ಆಸರೆಯಾತಿನ ಬಾನೊಗೆಲಾ..
ಪೊಸ ರಾಗೊಗು ಆಸರೆ ನಮ್ಮ ಉಡಲ್
ಪೊಸ ಕವಿತೆದ ಸಾಲ್..ಡ್ ಮೂಡೊಡುಲಾ..
ಹೋ ... ಈ ಕಬಿತೆಗ್ ನಮ ಪದ ಆಕ॥
ಸುಯ್ಲ್..ದ ಗಾಳಿದ ಬೀಜಟೆಗ್
ಕಡಲ್..ದ್ ಅಲೆಕುಲೆ ನರ್ತನಲಾ..
ಉಡಲ್..ದ ಮಿಡಿತದ ಭಾಷೆಗ್..ಲಾ
ಈ ರೂಪ ಕೊರುಕನ ನಮ ಅಪಗ
ಪೊಸ ಜೀವನ ತಾದಿಗ್ ನಮ್ಮುಡಲ್
ಪಜ್ಜೆ ದೀಪಿನ ಪೊರ್ತುಗು ಆ ಮುಗಲ್
ಹೋ...ತಿಳಿಯಾದ್ ನಮಕ್ ಪನಿ ಪಾಡಡ್ ॥-
ನೀ ಮುನಿಸಿನಿಂದ ನೋಡಬೇಡ ಕಿನ್ನರಿ
ಕರುಳನ್ನೇ ಹಿಂಡಿದ ಅನುಭಾವ ಕಿನ್ನರಿ ॥
ಮುನಿಸುಗಳ ಲೋಕದಲ್ಲಿ
ವಿಹರಿಸಬೇಡ ನೀನು ಗೆಳತಿ
ಮುದುಡಿರುವ ಹೂವಿನಂತೆ
ತೋರದಿರು ವದನ ಚೆಲುವೆ॥
ಮಿಡಿಯುತಿರೋ ಹೃದಯದ ತಾಳ
ಕೇಳು ನೀನು ಈಗನೇ ಮೆಲ್ಲ
ಹೊಚ್ಚ ಹೊಸಭಾವಗಳಲ್ಲಿ
ನೀ ಮೂಡಿ ಬಾ ಈಗಲೇ॥
ಮುನಿಸಿಂದ ಎದ್ದು
ಮುನಿಸಿಗೆ ಒದ್ದು
ಹೊಸಭಾವ ಧರಿಸಿ ಬಾ..॥ನೀ ॥
ಬೇಗೆಯಲಿ ಮೀಯುವ ಭಾವ
ಸಾಕಿನ್ನು ನಿನಗೆ ಗೆಳತಿ
ಉರಿತಾಪ ತುಂಬಿದ ಮೊಗವ
ಕಾಣಲಾರೆ ನಾನು ಒಲವೆ॥
ಚಡಪಡಿಸೋ ಹೃದಯದ ಮೇಳ
ಆಲಿಸು ನೀ ಕೋಪ ತರವಲ್ಲ
ನಿತ್ಯ ವಸಂತದ ಚಿಗುರು
ಧರಿಸಿ ಬಾ ಹಚ್ಚ ಹಸಿರು॥
ಬೇಗೆಯ ತಣಿಸಿ
ಸಹನೆಯ ಧರಿಸಿ
ನವಭಾವ ಸ್ಪುರಿಸಿ ಬಾ॥ನೀ॥
-✍ಹರೀಶ್ ಕಜೆ✍.
-
ಕನಸಿನಲ್ಲೂ ಉಸುರುವ ಪೆಸರು
ಅದು ನಿನ್ನದಲ್ಲವೇನೇ!
ಮನಸ್ಸಿನಲ್ಲೂ ಜಪಿಸೋ ಪೆಸರು
ಅದು ನಿನ್ನದಲ್ಲವೇನೇ!
ಇಂತಿದ್ದರೂ ನಿನಗ್ಯಾಕೀ ಮುನಿಸು
ನೀನು ಹೇಳುವುದಿಲ್ಲವೇನೇ!
ನೀನಗ್ಯಾಕೀ ಮೊಗದಿ ಕೆಂಬಣ್ಣದ ಸೊಗಸು
ನೀನು ಅರುಹುವುದಿಲ್ಲವೇನೇ!
ಉಸುರದೆ ತೋರ್ದೆಡೆ ಮುನಿಸು
ಅರಿಯುವೆನೆಂತು ನಾ ಅರಿವಾಗುವುದಿಲ್ಲವೇನೇ!
ಮಾರುತ್ತರಿಸದೆ ಮೌನವ ತಾಳ್ದೊಡೆ
ಅರಿವಾಗುವುದೆಂತೆನಗೆ ತಿಳಿಯದೇನೇ!
-
ಅವಳೆಂದರೆ
ಇಬ್ಬನಿ ತಂಪಾಗಿಸೋ
ಮಾಯಾಂಗನೆ॥
ನಿತ್ಯೋತ್ಸವದಿ
ತಂಪಿಗೂ ತಂಪೆರೆವ
ಮನಮೋಹನೆ॥
ಕಾವ್ಯೋತ್ಸವದಿ
ಪದಗಳಿಗೂ ಚಿಲುಮೆಯಾಗೋ
ಚಿರಯವ್ವನೆ॥
ವೈಯ್ಯಾರದೊಳು
ನವಿಲನ್ನೂ ಮೀರಿಸುವ
ನಾಟ್ಯಾಂಗನೆ॥-
ಕನಸೆಲ್ಲ ಕಾಂತಿಯಾದೆ
ಮನಸೆಲ್ಲ ತುಂಬಿ ಹೋದೆ
ಹಗುರವಾದೆ ನಾ ಮಧುರವಾದೆ ನಾ
ಹ್ಮೂ............॥
ಮೈಮರೆತು ನಾ ಹಾಡು ಹಾಡಿದ
ಕೋಗಿಲೆಯ ಧ್ವನಿಯಾದೆ ನಾ
ಮೈಮರೆತು ನೀ ನಾಟ್ಯವಾಡಿದ
ಮಯೂರನ ನಾಟ್ಯವಾದೆ ನೀ
ಈ ಪ್ರೇಮದ ಗಂಗೆ ನಿತ್ಯ ಹರಿಯುತ...
ಸುಮಗಾನ ಬಿರಿದಂತೆ
ಜೊತೆಯಾದಂತೆ ನೀ ಲತೆಯಾದಂತೆ ನೀ
ಹ್ಮೂ.......॥
ನೀ ಕಾವ್ಯದಲ್ಲಿ ಅಮಲಾಗಿಹೆ
ಒಲವೆಂಬ ಲತೆಗೆ ಸುಮವಾಗಿಹೆ
ಮನ ಬಿಚ್ಚಿ ನುಡಿದೆ ಒಲವಾ ಗಿಣಿ
ಮನ ತುಂಬ ನಲಿದ ಕಾವ್ಯಾಮಣಿ
ಈ ಮನದ ಭಾಷೆಗೆ ಪುಟವಾಗಿ ತೆರೆದೆ
ನವಗಾನ ಮೂಡಿದಂತೆ
ಕತೆಯಾದಂತೆ ನೀ ಕವಿತೆಯಾದಂತೆ ನೀ
ಹ್ಮೂ.....-