ಮಾಡಲಾರದ ತಪ್ಪಿಗೆ ಕ್ಷಮೆ ಕೇಳುವ ಮುನ್ನ ನೆನಪಿರಲಿ, ಭಾವಗಳು ಮೆಲ್ಲಗೆ ಸುಟ್ಟು ಕಪ್ಪು ಮಸಿಯಾಗಿ ಕೈ ತೊಳದರು ಹೋಗಲಾರದಂತೆ ಮನದ ಗೋಡೆ ಮೇಲೆ ಅಂಟಿಕೊಂಡು ಉಸಿರಾಡದಂತೆ ಮಾಡಿ ಬಿಡುತ್ತವೆ ಎನ್ನುವುದನ್ನ..
ಸರಿಯಾದ ದಾರಿಯಲ್ಲಿ ಇದ್ದೇನೆ ಎಂದು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವೇನಲ್ಲ ಇಲ್ಲಿ, ವಿಜೃಂಭಣೆಯ ಕುಣಿತ, ಹಾಗೂ ಸುಖದ ಸುಪ್ಪತ್ತಿಗೆಯಲ್ಲು ಸಹ ಭಾವನೆಗಳು ಜವಾಬ್ದಾರಿಯನ್ನ ನೆನಪಿಸುತ್ತಿದ್ದರೆ ಅದೊಂದು ಖುಷಿಯ ಮಾರ್ಗ..!!
ಮನಸಿಗೆ ಹಾಗೂ ಮೈಗೆ ಅಂಟಿಕೊಂಡಿರುವ ಸುಖದ ಸಂಕೋಲೆಗಳನ್ನ ಬಿಡಿಸಿಕೊಂಡು ನಿನ್ನನ್ನ ನೀನು ಪುಸ್ತಕದಂತೆ ಓದಿಕೊಂಡು, ಬೆವರಲ್ಲಿ ಬೆಂದಿದ್ದೆ ಆದರೆ ಸಾಧನೆಗೆ ನೀನು ತುಂಬಾ ಹತ್ತಿರವಾಗಿದ್ದಿಯಾ ಅಂತ ತಿಳಿದುಕೋ..
ವಿಶ್ವವೇ ಒಂದು ಕುಟುಂಬ ಎಂದು ಸಾರಿದ ಕುವೆಂಪು ಅವರು ಹುಟ್ಟಿದ ದಿನ ಇವತ್ತು.. ಹೇಳಲೇಬೇಕು ಮನಸಿನ ಮಾತು ಬಿಚ್ಚಿ ಇಂದು ನಾನು.. ಇಂದಿಗೂ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ನೌಕರಿ/ಜಾಬ್ ನನಗೆ ಬೇಡ.. ನನ್ನ ಸಾಮಾರ್ಥ್ಯವನ್ನು ಇಟ್ಟುಕೊಂಡು ನನಗೆ ನೌಕರಿ ಕೊಡಲಿ, ಈ ಸಂವಿಧಾನದಲ್ಲಿ ಹುಟ್ಟು ಸಾಯುವ ಯಾವುದೇ ಸರ್ಕಾರವನ್ನ ಆಗ ಒಪ್ಪುವೇ ನಿಜವಾದ ಜಾತ್ಯಾತೀತ ಪ್ರಜಾಸತ್ತಾತ್ಮಕ ವ್ಯವಸ್ಥೆ ಎಂದು.. ಅಲ್ಲಿವರೆಗೂ ನನ್ನ ಸಾಮರ್ಥ್ಯ ಶೂನ್ಯ..!!..