ಶಾಯರಿ ಕೇಳಿದಮ್ಯಾಲೆ ಎಲ್ಲಾರು ಅಂತಾರ ಆಹಾ!
ನಾ ನಮ್ಮಾಕಿಗೆ ಅಂದೆ ಮಾಡ ಇನ್ನೊಂದ ಕಪ್ ಚಹಾ!😁-
ನಾ ಬರೆಯುತ್ತೇನೆ ,ನೀವು🙏
'ಅದೇನೇ ಗ್ರಾಮರ್ ಮಿಸ್ಟೇಕ್ ಇದ್ರು ಆಶೀರ್ವದಿಸಿ.✋
पढ़े... read more
ಪರರಿಗೆ ಹೇಳುವಾಗ ನಾವು ಕಲಿಯುತ್ತೇವೆ,
ಹೇಳುವಾಗ ನಮ್ಮ ತಪ್ಪುಗಳು ನಮಗರಿವಾಗುತ್ತವೆ, ಖುಷಿಯ ವಿಚಾರವೆಂದರೆ ತಪ್ಪನ್ನು ತಪ್ಪು ಎಂದು ಗ್ರಹಿಸಿಬಿಟ್ಟೆವು ಅಲ್ವಾ?-
Soul ಮಾತ್ರ ಸೋಲು ಕಾಣೋದು,
ಪರಮ Soul ಎನ್ನಿಸಿಕೊಂಡವನು Soul ನ ಸೋಲಲ್ಲಿ ಜೊತೆಯಾಗುವವನು.-
ಪ್ರೇಯಸಿಯನ್ನ ಪಡೆಯಬೇಕೆಂದೆನಿಸಿದಾಗ ಪ್ರಿಯಕರನಿಗೆ ತನ್ನ ಸ್ಥಾನ,ಕ್ಷಮತೆ ಎಲ್ಲವೂ ಅರಿವಿಗೆ ಬರಲಾರಂಭಿಸುತ್ತದೆ.
-
ನಿನ್ನಿಂದ ಅವರ ಜೀವನ ಕೆಡುತ್ತದೆಂದು ಅನ್ನಿಸಿದರೆ ಅವರಿಂದ ದೂರವಾಗಲು ಆರಂಭಿಸು. ಅವರು ನಿನಗೇನೆಂದರು ಸರಿ.
-
ನಮ್ಮಂತವರು ಬಹಳ ಜನ ಇದ್ದಾರೆ ನಿಜ ಅವರಾರು ಎಂಬುದು ನಮಗರಿವಿಲ್ಲ. ಅವರು ಎಂದಿಗೂ ಅದನ್ನೂ ಹೇಳಿಕೊಳ್ಳುವುದಿಲ್ಲ ಏಕೆಂದರೆ ನಾವು ಕೂಡ ನಾವು ಹೇಗೆ ಅಂತ ಹೇಳಿಕೊಂಡಿಲ್ಲ.
-
ಯಾವುದಕ್ಕಲ್ಲದಿದ್ದರೂ ಮನುಷ್ಯ ನಿತ್ಯ ಕಷ್ಟ ಸುಖಗಳೆಂಬ ನಿಯಮಗಳಿಗೆ ಅಂಟಿಕೊಂಡು ಬಿಟ್ಟಿರುತ್ತಾನೆ.
-
ಏನೋ ಒಂಚೂರು ತಿಳಿದಿದ್ದನ್ನು ಮತ್ತೊಬ್ಬರಿಗೆ ಅರ್ಥ ಮಾಡಿಸಲಿಕ್ಕೆ ಹೋದಾಗ, ಅರ್ಥ ಮಾಡಿಸಲಿಕ್ಕಾಗದೆ ಸೋತವರಿದ್ದಾರೆ,ಅದರಲ್ಲಿ ನಾನೊಬ್ಬ.
-
ನಮ್ಮ ಕೆಲ ದಿನಗಳ ಬಗ್ಗೆ ಯಾರಿಗೂ ಹೇಳಲಾಗುವುದಿಲ್ಲ. ಏಕೆಂದರೆ ಅವುಗಳನ್ನ ಅರ್ಥ ಮಾಡಿಕೊಳ್ಳುವುದಕ್ಕೆ ನಮಗೇ ಸಮಯ ಹಿಡಿಯುತ್ತದೆ.
-