ನಮ್ಮ ಕಾರ್ಯ ವೈಖರಿ ಅಗ್ನಿಯಷ್ಟು ಪ್ರಕಾಶಮಾನವಾಗಿರಬೇಕು, ಹಾಗೂ ಸೂರ್ಯನಂತೆ ಮಿಂಚಬೇಕೆಂದು ಬಯಸುವುದಾದರೆ ಮೊದಲು ನಾವು ಸೂರ್ಯನಂತೆ ಪರಿಶುದ್ಧವಾಗಿ ಉರಿಯಬೇಕು.
ಶುಭೋದಯಗಳು-
ನಿಸ್ವಾರ್ಥ ಸೇವೆ ಮತ್ತು ಪ್ರಾಮಾಣಿಕ ಪರಿಶ್ರಮಕ್ಕೆ ಪ್ರತಿಫಲವಾಗಿ ದೊರೆಯುವ ಸಾಮಾಜಿಕ ಮನ್ನಣೆಗಳು..
-
ನೀ ಎಷ್ಟೇ ಸಂಪತ್ತು ಗಳಿಸಿದರೂ ನಿನ್ನ ಜೊತೆ ಬರಲಾರದು. ಆದರೆ ಸಂಪತ್ತು ಗಳಿಸುವಲ್ಲಿ ಮಾಡಿದ ಪಾಪಗಳಿದ್ದರೆ ಸಾಯುವವರೆಗೂ ನಿನ್ನ ಬೆನ್ನು ಬಿಡವು..
-
ಪೂರ್ವಾಗ್ರಹಪೀಡಿತ ಮೌಢ್ಯಗಳ ಹಿಡಿತದಿಂದ ಹೊರಬಂದು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಪ್ರತಿ ಪ್ರಶ್ನೆಗಳನ್ನೂ ವಿಚಾರ ಮತ್ತು ತರ್ಕದಿಂದ ಪರಿಶೀಲಿಸು. ಸತ್ಯ ಅಥವಾ ಸತ್ಯಕ್ಕೆ ಸಮೀಪವಿದ್ದವುಗಳನ್ನು ಪ್ರತ್ಯೇಕಿಸಿ ತಾರ್ಕಿಕ ಅಂತ್ಯ ಕಂಡುಕೋ. ಅರ್ಥವಿಲ್ಲದ ಅನರ್ಥ ಪ್ರಶ್ನೆಗಳಿಗೆ ವ್ಯರ್ಥ ಕಾಲ ಹರಣ ಮಾಡದೆ ಸರಳ ಸೂತ್ರ ಸರಳ ಪರಿಹಾರ ಹುಡುಕಿಕೋ. ಕಬ್ಬಿಣದ ಕಡಲೆಯಂತೆ ಕಠಿಣವೆನಿಸಿದಾಗ ಬಲ್ಲವರ ನೆರವು ಪಡೆದುಕೋ ಬಲ್ಲಂಗ ಖುಷಿ ಪಡೆದುಕೋ..
-
ಪ್ರೀತಿಯಲ್ಲಿ ಜಾರದಿರು
ಜಾರಿ ಮನದಿ ಮರುಗದಿರು
ಮರುಗಿ ಮರುಗಿ ಕೊರಗದಿರು
ನಂಬಿ ಮೋಸ ಹೋಗದಿರು
ನಂಬಿದವರಿಗೆ ಮೋಸವೆಸಗದಿರು
ಯೋಚಿಸದೆ ಮಾತು ಕೊಡಬೇಡ
ಕೊಟ್ಟ ಮಾತು ಮರೆಯಬೇಡ
ಕೋಪದಲ್ಲಿ ದುಡಕಬೇಡ ದುಡುಕಿ ಕೆಡುಕಿಡಾಗಬೇಡ
-
ಅವಮಾನದ ಗಾಡಿಯನ್ನೇರೇ ಸನ್ಮಾನದೂರಿಗೆ ಸಾಗಬೇಕು
ದಾರಿಯುದ್ದಕ್ಕೂ ಅವಮಾನಗಳ ಸುರಿಮಳೆ ಅವಮಾನಗಳಿಗಂಜಿ ದೃತಿಗೆಟ್ಟರೆ ಸನ್ಮಾನದೂರು ಸಿಗುವುದೇ ಇಲ್ಲ
ಅವಮಾನಗಳನ್ನೆಲ್ಲ ಸವಾಲಾಗಿ ಸ್ವೀಕರಿಸಿ ಸಂಯಮದಿ ಸಾಧಿಸಿ ಗುರಿ ಮುಟ್ಟಬೇಕು
ಆಗ ಅವಮಾನಿಸಿದವರೇ ಸನ್ಮಾನ ಮಾಡವರು ಆ ಆನಂದ ಮನಸಾರೆ ಆಶ್ವಾಧಿಸಬೇಕು ಅವಮಾನಿಸಿದವರನ್ನು ಗೌರವಿಸಬೇಕು-
ನಿನ್ನೊಲವಿನ ಸವಿನೆನಪುಗಳು
ನೀನಿಲ್ಲದೆ ಸಾಗರದ ದೈತ್ಯ
ಅಲೆಗಳಂತೆ ರಭಸವಾಗಿ ಅಪ್ಪಳಿಸುತ್ತಿವೆ
ಆ ಅಪ್ಪಳಿಸುವ ಸಪ್ಪಳಕೆ
ಹೃದಯಬಡಿತ ಏರಿ ರಕ್ತದ
ವೇಗ ಹೆಚ್ಚಾಗಿ ಮೈ ಬೆವರೇರಿ
ಹೆಜ್ಜೆಗಳು ತಪ್ಪುತ್ತಿವೆ
ಸಾಗುವ ದಾರಿಯೇ ಕಾಣದಾಗಿ ಕುಸಿದು ಬೀಳುವ ಮುನ್ನ ಕೈ ಹಿಡಿದು ಮೇಲೇಳಿಸಲಾದರು ಬಂದು ಸೇರು ನನ್ನೊಲವೆ-
ಪ್ರತಿಕ್ಷಣವೂ
ಮರಳಿ
ಸಿಗಲಾರಧ
ಅಮೂಲ್ಯ
ಮುತ್ತು
ಕ್ಷಣವರ್ತಿಯನ್ನೂ
ಜಾಗೃತಿಯಿಂದ
ಬಳಸಿಕೊಂಡರದು
ನಿನ್ನ
ಸ್ವತ್ತು-
ಹಾಲು ಜೇನಿನ ಮಾಧುರ್ಯದಂತೆ
ರಾಜ ಮಹಾರಾಜರು, ಸಂತ ಮಹಾಂತರು, ಅತಿರಥ ಮಹಾರಥರಿಗೆಲ್ಲ ಜನ್ಮ ನೀಡುವ ತಾಯಿ ಜಗತ್ತಿನಲ್ಲಿಯೇ ಸರ್ವಶ್ರೇಷ್ಠಳು. ಅಂತಹ ತಾಯಿ ಮಕ್ಕಳ ಪವೀತ್ರ ಬಾಂಧವ್ಯ ಜನ್ಮ ಜನ್ಮಾಂತರಕ್ಕೂ ಶ್ರೇಷ್ಠವಾದುದು.-
ಸದಾ ಜೊತೆಗಿರುವ ಶ್ರೇಷ್ಠ ಮಾರ್ಗದರ್ಶಕ
ಸಾಧನೆಯ ಹಾದಿಯಲ್ಲಿ ಸರಿಯಾದ ಪಥ ತೋರಿಸುವ ದಿಗ್ದರ್ಶಕ
ಗೆದ್ದಾಗ ಉತ್ಸಾಹದ ಮಂದಹಾಸ ಭೀರಿ
ಸೋತಾಗ ಧೈರ್ಯ ತುಂಬುವ ಆಪ್ತಮಿತ್ರ
ಜೀವಯಾನದಲ್ಲಿ ಪ್ರತಿ ಹೆಜ್ಜೆಗೂ ನಿರ್ದೇಶನ ನೀಡುವ ನಿರ್ದೇಶಕ
ಅಂತರಂಗವೆಂಬ ಆಪ್ತಮಿತ್ರನ ಮರೆತು ನಡೆದರೆ ಗೊತ್ತು ಗುರಿಯಿಲ್ಲದ ನೀನೊಬ್ಬ ನಿಷ್ಪ್ರಯೋಜಕ-