ವಂದೇ ಮಾತರಂ
-
ಸೃಷ್ಟಿಯ ಸಕಲ ಜೀವರಾಶಿಗಳಲ್ಲೂ,
ನೀರು ನೆಲ, ಬಂಡೆ ಗುಡ್ಡಗಳಲ್ಲೂ,
ದೇವರನ್ನು ಕಾಣುತ್ತಿದ್ದಾಗ ಸ್ವರ್ಗದಂತಿತ್ತು.
ಪ್ರತಿಯೊಂದರಲ್ಲೂ ದುಡ್ಡು ನೋಡಲು
ಶುರುವಾದಾಗ ಮನಸ್ಸು ವಿಷವಾಗಿ
ಈ ಭೂಮಿ ನರಕವಾಯಿತು.
-
ರಾಜಕೀಯ ಒಂದು ರೀತಿ ಕ್ರಿಕೆಟ್ ಇದ್ದಹಾಗೆ
ತಂಡ,ಪಾರ್ಟಿಅದೇ ಇರುತ್ತದೆ, ಆಟಗಾರ,
ಜನನಾಯಕರು ಬದಲಾಗುತ್ತಿರುತ್ತಾರೆ.
ಗೆದ್ದರೂ, ಸೋತರೂ ಅವರಿಗೆ ಲಾಭ ಗ್ಯಾರಂಟಿ
ಜನ ದುಡ್ಡು ಕೊಟ್ಟು ಮ್ಯಾಚ್ ನೋಡ್ತಾರೆ,ಇಲ್ಲಿ
ಟ್ಯಾಕ್ಸ್ ಕಟ್ಟಿ ಅವರಾಡೋ ಆಟಗಳನ್ನ ನೋಡಿ
ಸಂಭ್ರಮ ಪಡುತ್ತಾನೆ,
-
ಎಲೆ ಮಾನವ ,ಏನಾದರೂ ಆಗು
ಮೊದಲು ಪಶುಪಕ್ಷಿ ಪ್ರಾಣಿಯಾಗು.
ನಾವು ಅಕ್ಷರ ಕಲಿತಿಲ್ಲ, ಆದರೂ
ಬದುಕಿನ ಪಾಠವ ಮರೆತಿಲ್ಲ.
ಕೃಷಿ ಮಾಡಲಿಲ್ಲ ಆದರೂ
ನಾವ್ಯಾರೂ ಉಪವಾಸ ಸತ್ತಿಲ್ಲ.
ಸಂಪತ್ತಿನ ಆಸೆಗೆ ಭುವಿಗೆ ವಿಷವುಣಿಸಿ
ಪ್ರಕೃತಿ ನಾಶ ಮಾಡಲಿಲ್ಲ ಆದರೂ
ನಾವ್ಯಾರೂ ದರಿದ್ರರಾಗಲಿಲ್ಲ. ನೀನೂ
ಏನಾದರೂ ಆಗು ಮೊದಲು ಪ್ರಕೃತಿಯ
ಕೂಸಾಗು, ಪಶುಪಕ್ಷಿ ಪ್ರಾಣಿಯಾಗು.
ಈ ದೌರ್ಜನ್ಯವ ನಿಲ್ಲಿಸು
-
ಭಾನುವಾರದ ಬ್ಲಾಸ್ಟ್,
ಸೋಮವಾರದ ಶಾಕ್,
ಮಂಗಳವಾರದ ಅಮಂಗಳ,
ಭುದವಾರದ ಭೂತ,
ಗುರುವಾರದ ಗುಮ್ಮ,
ಶುಕ್ರವಾರದ ಶೇಕ್,
ಶನಿವಾರದ ಕಾಟ-
ಸೇತುವೆ
ಒಂದು ಬದಿಗೆ
ಆಡಳಿತ ಪಕ್ಷದ,
ಇನ್ನೊಂದು ಬದಿಗೆ
ವಿರೋಧ ಪಕ್ಷದ ನಾಯಕರ
ಹೆಸರಿಟ್ಟರೆ ವಿವಾದವೇ ಇರಲ್ಲ
-
ಕಾರ್ಖಾನೆ,ವ್ಯಾಪಾರ
ಇತರೆ ಉದ್ಯಮಗಳಿಗಿಂತ,
ಬಂದ್,ಪ್ರತಿಭಟನೆ,ಮುತ್ತಿಗೆ,
ಜಾತಾಗಳಿಲ್ಲದೇ ಕೆಲಸ
ಕಳೆದುಕೊಂಡಿರುವವರೇ ಜಾಸ್ತಿ.-