ಇದು ನಮ್ಮ ನೆಲ
ಇದು ನಮ್ಮ ಜಲ
ಇದು ನಮ್ಮ ದೇಶ.
ಇಲ್ಲಿಹುದು ನಮ್ಮ ಹಕ್ಕು
ಇರಲು ನಿಮಗಧಿಕಾರವಿಲ್ಲ
ನಿಮ್ಮಿಂದ ಸ್ವಾತಂತ್ರ್ಯ ಬೇಕು.
ಮುಗಿಯಲಿ ನಿಮ್ಮ ದಬ್ಬಾಳಿಕೆ
ಅಳಿಯಲಿ ಜನರ ಕೂಗಾಟ
ನೆಲೆಸಲಿ ಶಾಂತಿ.
ಕೊನೆ ಉಸಿರವರೆಗೂ
ಹೋರಾಡಿದ ಛಲದಂಕಮಲ್ಲ
ತಂದುಕೊಟ್ಟೆ ಸ್ವಾತಂತ್ರ್ಯ.
ನಿಷ್ಕರುಣಿ ಕೈಯ್ಯೊಂದು
ಗುರಿಯಿಟ್ಟ ಗುಂಡಿನೇಟು
ನೀ ಜಪಿಸಿದೆ ಹೇ ರಾಮ್!!
ದಾಸ್ಯದಿಂದ ಮುಕ್ತಗೊಳಿಸಿದ
ಮಹಾತ್ಮನೆಂದೆನಿಸಿಕೊಂಡವನಿಗೆ
ಈ ಜನ ಕೊಟ್ಟ ಬೆಲೆ😢
2-10-2019. 2.28pm
ಸಂಗೀತಾ ಕಲ್ಮನೆ
- 🌸ಸಂಗೀತಾ ಕಲ್ಮನೆ🌸