ನನ್ನ ಕೋಪಕ್ಕೆ ನಾನು ಭಯಪಡುತ್ತೇನೆ.
ಅದಕ್ಕಾಗಿ ನಾನು ಶಾಂತವಾಗಿದ್ದೇನೆ.-
ಯಾರು ನಿಮ್ಮ ಬುದ್ದಿಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲವೋ ಅವರನ್ನು
ಅವರಷ್ಟಕ್ಕೆ ಬಿಟ್ಟುಬಿಡಿ.
ಮುಂದೊಂದು ದಿನ ಅವರ ತಪ್ಪಿನ ಅರಿವಾಗಿ ನಿಮ್ಮ ಬಳಿಯೇ ಬರುವರು.
ಆಗಲೂ ನೀವು ಅವರನ್ನು ಕ್ಷಮಿಸಬೇಡಿ.
ಯಾಕಂದ್ರೆ ಅದು ಅವರಿಗೆ ಪದೆ ಪದೆ ಅಭ್ಯಾಸವಾಗಿಬಿಡುತ್ತೆ.-
ನಮ್ಮ ಜೀವನದಲ್ಲಿ
ಕೆಟ್ಟೋರು ಕೂಡ ನಮಗೆ ಒಂದು ಪಾಠವನ್ನು ಕಲಿಸಿಹೋಗಿರುತ್ತಾರೆ,
ಮುಂದೆ ಅವರಂತವರ ಸ್ನೇಹ ಮಾಡದಿರಿ ಎಂದು..-
ಹಲವರಾಗಲಿ ಕೆಲವರಾಗಲಿ ನಾವು, ನಮ್ಮ ಎಲ್ಲಾ ನಡವಳಿಕೆಯನ್ನು ಹಿಂದಿನಿಂದ ದೂರುತ್ತಾರೆ.
ಆಗ ನಮ್ಮ ಮನಸ್ಸಿನಲ್ಲಿ ಮುಂದೆಸಾಗುವೆ ಎಂದು ದ್ರಡನಿರ್ಧಾರ ಬಂದಾಗ ಅವರೇ ನಮ್ಮ ಕಾಲ ಬುಡದಲ್ಲಿರ್ತಾರೆ👍-
ನಾವು ಬದುಕಿರುವಾಗಲೇ ಸ್ಮಶಾನಕ್ಕೆ ಒಮ್ಮೆ ನಮಸ್ಕರಿಸಿ ಬರಬೇಕು. ಸತ್ತಾಗ ನಮಸ್ಕರಿಸಲು ನಾವೇ ಇರುವುದಿಲ್ಲ.
-
ಈ ಅನುಮಾನ ಅಂಬ್ದ್ ಉರಿತಿಪ್ಪದ್ ಬೆಂಕಿಕಡ್ಡಿ ಇದ್ದಂಗೆ. ಜಾಸ್ತಿಹೊತ್ತ್ ಇಟ್ಕಂಡ್ರೆ ನಮ್ಗೇ ನೋವು ಅಪುದ್
-
ಇದೆ ಎಂದು ಮೆರೆಯಬೇಡ,
ಇಲ್ಲವೆಂದು ಕೊರಗಬೇಡ,
ಇದ್ದವನು ಇಲ್ಲದವನು
ಹೋಗುವುದು ಖಾಲಿ ಕೈಯಲ್ಲಿ
ಇದನ್ನು ಮರೆಯಬೇಡ...-
ನಮ್ಮ ಜೀವನದಲ್ಲಿ ಮೂರು ತರದ ವ್ಯಕ್ತಿಗಳು ಬರುತ್ತಾರೆ.
ನೆನಪಾದಾಗ ಮಾತಾಡುವವರು,
ನೆನಪು ಮಾಡಿಕೊಂಡು ಮಾತನಾಡಿಸುವವರು ಹಾಗೂ
ಅವಶ್ಯಕತೆ ಇದ್ದಾಗ ಮಾತ್ರ ಮಾತನಾಡಿಸುವವರು...-