ಚಾರುವದನೆಗೆ ಮುಕುರ ಚಂದ,
ಸರೋವರದ ತಾವರೆಯಂತೆ ನಯನ ಮನೋಹರ,
ತರುಣಿಯ ಉದ್ದನೆ ಕೃಷ್ಣವೇಣಿ ಒಯ್ಯಾರ,
ಸವ್ಯಹಸ್ತ ಕೇಯೂರ ಭೂಷಣ,
ಅಂಘ್ರಿಯ ಗಗ್ಗರಿ-ಘುಂಘುರ ನಾದ,
ನಾರಿಯ ಸೀರೆಯ ಅಂಚಲ ದ ಮಯೂರಿನ ಶಿಖಿಪಿಂಛದಂತೆ ಶೃಂಗಾರ.
ನಾ... ಗೌಡ.-
ಹಡಗು ದಡದಲ್ಲಿ ಯಾವಾಗಲೂ ಸುರಕ್ಷಿತವಾಗಿಯೇ ಇರುತ್ತದೆ. ಆದರೆ, ಅದನ್ನು ನಿರ್ಮಿಸಿದ ಉದ್ದೇಶ ಅದಾಗಿರುವುದಿಲ್ಲ.
-
ಎಳ್ಳು ಬೆಲ್ಲ ಕಬ್ಬನು ಸರ್ವರೊಡನೆ ಹಂಚಿ ಸವಿಯೋಣ,
ಎಳೆಯರ ಮನಸ್ಸನು ಹೊಂದಿ ನಾವೆಲ್ಲರೂ ಬಾಳೋಣ,
ನಮ್ಮೊಳಗಿನ ಅರಿವಿನ ಬೆಳಕನು ಬೆಳಗಿಸೋಣ,
ಒಳ್ಳೆಯ ಮಾತು ಹರಸುತ ಜೀವನ ಸಾಗಿಸೋಣ.-
ಸಿಂಬಕ ನಾಗಬೇಡ ಸಿಂಹಾಸನ ಹೇರುವ ಮನುಜಕೇಸರಿ ಆಗು,
ಸಿಂಹಾವಲೋಕನ ಆಗಲಿ ನಿನ್ನ ದಾರಿ,
ನಿನ್ನ ಎದುರಾಳಿಗೆ ಸಿಂಹಸ್ವಪ್ನ ಕಾಡು,
ಸಮಯ ಸಾಧಕನಾಗುವ ಬದಲು
ಸ್ತಂಭಸಂಭವನಾಗು.-
ಕಾರೋನಾ
( ಕರ ಪ್ರಾಸ)
ಕರೋನಾ ನಿನಗೆ ಕನಿಕರ ಇಲ್ಲ
ಕರುಳು ಬಳ್ಳಿಯ ಅಕ್ಕರೆ ಇಲ್ಲ
ಕರುಷಕ ನ ಬೆಳೆಯ ದರ ಕರುಣಾಜನಕ
ಅಮೃತಕರ ನ ಭೀಕರ ರೂಪ ನಿನ್ನದು
ನರ ನ ಮಕರಂದ ಹೀರಿ ಮರಣ ಮೃದಂಗ
ಬಾರಿಸುವ ನಪುಂಸಕರ ಗುಂಪು ನಿನ್ನದು
ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವೆ ನೀನು.
.....-
ನನ್ನ ಜೀವನದ ಪುಸ್ತಕ ಲೋಕ
ನೀನು ಒಂದು ಅಧ್ಬುತ ಲೋಕ
ಮಾನವನ ಬದುಕಿನ ನೀನೇ ನಾವಿಕ
ಜೋತೆಯಲಿ ನೀನಿರೆ ಸಿಕ್ಕಂತೆಯೆ ನಾಕ
ನೀ ಇಲ್ಲದಿರೆ ಬದುಕು ನರಕ
ಮಸ್ತಕ ತಗ್ಗಸಿ ಪುಸ್ತಕ ನಾ ನೋಡುತಿರೆ
ಮಾಡುವೆ ನೀ ಶಿರಯೆತ್ತಿ ನೋಡುವಂತೆ ಈ ಧರೆ
ನೀನೋಬ್ಬ ಉತ್ತಮ ಸಂಗಾತಿ
ನೀನಿರೆ ಜೋತೆಯಲಿ ಬಾರದು ಚಿಂತಿ
ಮಾತ್ತಿಲ್ಲದ, ನೋವಿಲ್ಲದ, ನಗುವಿಲ್ಲದ
ಮೌನಿ ನೀನು ನಿನ್ನ ಜ್ಞಾನ
ದೀವಿಗೆಯ ಹಂಬಲಸುವ ನರ ನಾನು.
ನಾ....ಗೌಡ. ಹೊಳಗುಂದಿ
-
ಇತರರು ತನ್ನತ್ತ ಎಸದ ಹರಿತವಾದ ಮಾತುಗಳಿಂದ ತನ್ನ ಬದುಕಿಗೆ ದೃಢವಾದ ಅಡಿಪಾಯವನ್ನು ಹಾಕಿಕೊಳ್ಳುವವನೇ ನಿಜವಾದ ಯಶಸ್ವಿ ವ್ಯಕ್ತಿ.
-
ನಾವು ಸಂತೋಷವಾಗಿ ಇರಲು
ಕಾರಣರಾದವರಿಗೆ ಕೃತಜ್ಞರಾಗಿ ಇರೋಣ.
ನಮ್ಮ ಆತ್ಮಗಳನ್ನು ಯಾರು ಅರಳಿಸುತ್ತಾರೋ ಅವರು ಕುಶಲ ತೋಟಗಾರರಿದ್ದಂತೆ.-
"ಮಳೆ ಬಂದಾಗ ಪಕ್ಷಿಗಳು ತಮ್ಮ ಗೂಡಿನ ಆಶ್ರಯ ಅರಸಿದರೆ, ಹದ್ದು ಮಾತ್ರ ಮೋಡಗಳಾಚೆ ಹಾರಿಹೋಗಿ
ಮಳೆಯಿಂದ ತಪ್ಪಿಸಿಕೊಳ್ಳುತ್ತದೆ. ಸಮಸ್ಯೆ ಬರುವುದು ಸಹಜ. ಆದರೆ
ಅವುಗಳನ್ನು ಎದುರಿಸಲು ನಮ್ಮ ಶಕ್ತಿಯ ಆತ್ಮ ವಿಶ್ವಾಸ ಮೇಲೆ ಅವಲಂಬಿಸಿರುತ್ತದೆ".
......-
ನಾವು ಆಡುವ ಸುಡುನುಡಿ ಇನ್ನೊಬ್ಬರ ಮನಸ್ಸಿಗೆ "ಚುಚ್ಚು"ವಂತ್ತಿರಬಾರದು
ನಾವು ಉದ್ಗಾರಿಸುವ ಸವಿನುಡಿ "ಸುಮ" ಮಧುರವಾಗಿರಬೇಕು.
....-