ಎಂ.ಆರ್.ದೇವರಾಜ್ ನಿಸರ್ಗತನಯ   (ದೇವರಾಜ್ ನಿಸರ್ಗತನಯ)
43 Followers · 92 Following

ಶಿಕ್ಷಕರು, ಹವ್ಯಾಸಿ ಬರಹಗಾರರು
Joined 21 May 2018


ಶಿಕ್ಷಕರು, ಹವ್ಯಾಸಿ ಬರಹಗಾರರು
Joined 21 May 2018

ದೇವಮಂದಿರ

ಎಂಥ ಸುಂದರ ನೋಡಬನ್ನಿರಿ
ಶಾಲೆಯೆಂಬ ದೇಗುಲ
ಹಚ್ಚ ಹಸುರಿಸ ಸೊಬಗಿನೈಸಿರಿ
ತೆರೆದು ನೋಡಿರಿ ಕಂಗಳ

ಜೀವವಿರುವ ದೇವರಿರುವ
ಇದುವೆ ದೇವ ಮಂದಿರ
ಮಕ್ಕಳೆಮಗೆ ದೇವರಂತೆ
ಮುಗ್ಧ ಮನಸಿನ ಚಂದಿರ

ಆಟ ಪಾಠವೆ ನಮ್ಮ ಮಕ್ಕಳ
ನಿತ್ಯ ದೈವಾರಾಧನೆ
ಹಾಡು ಕುಣಿತ ನೀತಿ ಕಥೆಗಳ
ಕೇಳಿ ಕಲಿವರು ಭೋದನೆ

ಆಡಿ ನಲಿಯುತ ಹಾಡಿ ಕುಣಿಯುತ
ಜ್ಞಾನವನ್ನು ಪಡೆದರು
ನೋಡಿ ಕಲಿಯುತ ಮಾಡಿ ತಿಳಿಯುತ
ವಿಜ್ಞಾನವನ್ನು ಅರಿತರು

ಮಕ್ಕಳಿಗೆ ಸರಿ ದಾರಿ ತೋರುವ
ಗುರುವೆ ದೇವರಾದರು
ತಿದ್ದಿ ತೀಡುತ ಬುದ್ಧಿ ಹೇಳುತ
ಮಗುವೆ ದೇವರೆಂದರು

ಕಲಿತ ಋಣವ ಕಲಿಸಿ ಕಳೆಯಿರಿ
ನಮಗೆ ದೊರೆತ ಪುಣ್ಯವು
ನೋಡಿ ಸಾಧನೆ ಹೆಮ್ಮೆ ಪಡುವಿರಿ
ಸಾರ್ಥಕವೀ ಜನ್ಮವು.

-



ಉತ್ತರದ ಕಾಶಿಯಲಿ ಕತ್ತೆ ಮಿಂದೈ ತರಲು
ದಕ್ಷಿಣದ ದೇಶಕದು ಕುದುರೆಯಹುದೆ ?
ತಾಯಿತ್ತ ಮೊಲೆಹಾಲೆ ನಿಮ್ಮ ಮೈಗಾಗದಿರೆ ?
ಹೊತ್ತ ಹೊರೆ ಬಲಕಾರಿ ನೆತ್ತರಹುದೆ ?.

- ಶ್ರೀ ಕುವೆಂಪು

-



ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಹೊಲ್ದಾಕಿದ್ರೂನುವೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನ್ಸನ್ ನೀ ಕಾಣೆ
-ಜಿ.ಪಿ.ರಾಜರತ್ನಂ.

-



ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಗೌರಿ ತನಯ ವಿನಾಯಕ
ಗಣಗಳಿಗೆಲ್ಲ ಅಧಿನಾಯಕ
ಕಷ್ಟಕೋಟಲೆಯ ವಿನಾಶಕ
ಪ್ರಥಮ ವಂದ್ಯನೆ ಗಣನಾಯಕ

ವಕ್ರತುಂಡನೆ ಏಕದಂತನೆ
ಮೂಷಿಕ ವಾಹನ ಮೋದಕ ಪ್ರಿಯನೆ
ಮನದಿ ಭಜಿಸಲು ಭಕುತಿಗೊಲಿವನೆ
ಗರಿಕೆ ಅರ್ಪಿಸಲು ನಲಿವ ಗಣಪನೆ

ಗಜಮುಖ ಗಣಪನೆ ಬಾರಯ್ಯಾ
ಬಡವರ ಕಷ್ಟವ ನೋಡಯ್ಯಾ
ಕೊರೋನ ರೋಗವ ತಡೆಯಯ್ಯಾ
ಬದುಕಿಗೆ ನೆಮ್ಮದಿ ತಾರಯ್ಯಾ

ಗಣಪತಿಬಪ್ಪ ಮೋರೆಯಾ
ನಮ್ಮಯ ಮೊರೆಯಾ ಕೇಳಯ್ಯಾ
ನಿನ್ನಯ ಅಡಿಗೆ ಶರಣಯ್ಯಾ
ವರವನು ನೀಡಿ ಹರಸಯ್ಯಾ

-



ಮನೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನರು ಧನ್ಯರು..!

ನನ್ನನ್ನು ತಿದ್ದಿ ತೀಡಿ
ಪ್ರೀತಿಯಿಂದ ನೋಡಿ
ಅಕ್ಕರೆಯಿಂದ ಮಾತಾಡಿ
ಸರಿದಾರಿಯ ತೋರಿ
ಹರಸಿ ಹಾರೈಸಿದ
ಗುರುವೃಂದಕೆ ಕೋಟಿ ಶರಣು!

-



ಜೀವನವೊಂದು ಸುಂದರ ಹೂದೋಟ!
ತಪ್ಪದು ಹುಳು ಹುಪ್ಪಟೆ ಕ್ರಿಮಿಕೀಟಗಳ ಕಾಟ!!
ಎದುರಿಸಬೇಕು ಕೆಲವೊಮ್ಮೆ ವಿಧಿಲೀಲೆಯ ಆಟ!
ಧೃತಿಗೆಡದೆ ಸಾಧಿಸು ಬಿಡದೆ ನಿನ್ನ ಹಠ!!

-



ನೆನ್ನೆಯೆಂಬುದು ''ಮಣ್ಣು''
ನಾಳೆಯೆಂಬುದು ''ಹುಣ್ಣು''
ಇಂದು ಸಿಗುವ ''ಹಣ್ಣು''
ತಿಂದು ಅನುಭವಿಸೋ ''ಜಾಣ''
ಅದೇ ಸ್ವರ್ಗ ''ಕಾಣ''!...

-



ಅಣ್ಣ ತಮ್ಮಂದಿರಿಗೆ ಕಟ್ಟುವರು
ಹೆಣ್ಣು ಮಕ್ಕಳು ರಾಕಿ !
ರಾಕಿ ಕಟ್ಟಲು ಕೊಡಬೇಕಂತೆ
ಐನೂರು ರೂ ಬಾಕಿ !
ಕೈಯಲ್ಲಿ ರಾಕಿ ಹಿಡಿದು
ಹೊಡೆಯುತ್ತಿದ್ದರು ಗಿರಕಿ !
ಅದರಿಂದಲೇ ಕಾಲ್ಕಿತ್ತ
ನೋಡಿ ಈ ಗಿರಾಕಿ !!

-



ಮದುವೆ ಆಗೋವರೆಗೂ
ಗಂಡು ಭೀಮರಾಯ !
ಮದುವೆ ನಂತರ
ಆಗುತ್ತಾನೆ ಧರ್ಮರಾಯ!!

-



ಬದುಕು ಬಂಗಾರ..!

ಬದುಕು ಭಾರವೆನಿಸದು
ಇತಿಮಿತಿಗಳ ಪರಿಮಿತಿಯಲಿ
ಅತಿಯಾಸೆಯಿಂ ಪರಿತಪಿಸದೆ
ಪಾಲಿಗೆ ಬಂದದ್ದು ಪಂಚಾಮೃತವೆಂದಡೆ !

ಬದುಕು ಬೇಸರವೆನಿಸದು
ಬರುವುದೆಲ್ಲವೂ ಬರಲೆಂದು
ಬಂದುದೆಲ್ಲವಾ ಧೈರ್ಯದಿಂ ಎದುರಿಸಿ
ಮನವನು ಸಮಚಿತ್ತದಿಂದಿಟ್ಟೊಡೆ !

ಬದುಕು ಸಾಕೆನಿಸದು
ಸಭ್ಯ ಸ್ನೇಹಿತರೊಡನಾಟ
ಸರಿ ತಪ್ಪುಗಳ ತಿದ್ದಿ ತೀಡುವ
ಶ್ರೇಯೋಭಿಲಾಷಿಗಳು ಜೊತೆಯಿದ್ದೊಡೆ !

ಬದುಕು ಬಂಗಾರವಹುದು
ಬಾಳ ನೌಕೆಯ ದಿಕ್ಕು
ಪ್ರತಿದಿನವೂ ಬೆಳಕ ಹೊಕ್ಕು
ಹುಣ್ಣಿಮೆ ಬೆಳದಿಂಗಳಂತಾದೊಡೆ !

-


Fetching ಎಂ.ಆರ್.ದೇವರಾಜ್ ನಿಸರ್ಗತನಯ Quotes