ದಯಾನಂದ ಕೆ ಚಂದ್ರಶೇಖರಯ್ಯ   (👉 ಕೆ ಸಿ ದಯಾನಂದ@ಉದಯಚಂದ್ರ)
313 Followers · 358 Following

read more
Joined 24 November 2018


read more
Joined 24 November 2018

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡ ಕನ್ನಡ ಕನ್ನಡ ಕಲರವ ಮೊಳಗಿದೆ
ಕನ್ನಡನಾಡಿನ ಮನೆಮನೆಯಲಿ ಸಂಭ್ರಮ ಮೂಡಿದೆ
ಕನ್ನಡ ಜನ ಮನಗಳ ಮೈಮನ ಮಿಡಿಯುತಿದೆ
ಕನ್ನಡ ಕನ್ನಡ ಕನ್ನಡ ಧ್ವಜ ರಾರಾಜಿಸಿದೆ
ಕನ್ನಡಮ್ಮನ ಬಾವುಟ ಕನ್ನಡಿಗರಲಿ ಪ್ರತಿಷ್ಠಾಪಿಸಿದೆ
ಎಂದೆಂದಿಗೂ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಈ ಕನ್ನಡ ನಾಡೆ ಚೆಂದ ಈ ಕನ್ನಡ ಸವಿನುಡಿ ಚೆಂದ
ಕನ್ನಡ ನುಡಿಯಲು ಮನಕೆ ಮಹಾದಾನಂದ
ಕನ್ನಡವೇ ಬದುಕಾಗಲಿ ಕನ್ನಡವೇ ಉಸಿರಾಗಲಿ
ಕನ್ನಡಕ್ಕಾಗಿಯೇ ಕಾಯಕ ಕನ್ನಡಕ್ಕಾಗಿಯೇ ಈ ಸೇವಕ

-



ಕಷ್ಟಗಳನ್ನು ನೋವುಗಳನ್ನು ಪ್ರೀತಿಸಿದರೆ ಸುಖದ ಹಾದಿಯು ಸುಗಮ
ಅದೇ ಕಷ್ಟಗಳ ನೋವುಗಳ ಎದುರಿಸಿದೆ ಕಂಗಲಾಗಿ ಕೊರಗುತ್ತ ಕೂತರೆ ಬದುಕ ಹಾದಿ ದುರ್ಗಮ‌
ಕಷ್ಟ ಸುಖಗಳನ್ನು ಸಮಾನವಾಗಿ ಕಾಣಬೇಕು
ಬದುಕಿನಲ್ಲಿ ಏರಿಳಿತಗಳು ಇದ್ದದ್ದೆ ಇದಕ್ಕೆ ನಮ್ಮ ಮನಸ್ಥಿತಿ ಆತ್ಮವಿಶ್ವಾಸ ಮುಖ್ಯ

-



ಕಡಲ ದಂಡೆಯ ಮೇಲೆ
ಕುಳಿತ ನನ್ನ ಕರೆದಿದೆ ತಂಗಾಳಿ ತಾನು
ತಂಗಾಳಿ ಬೀಸಿ ನರ್ತಿಸಿ ಅಲೆಯು
ಒಮ್ಮೊಮ್ಮೆ ಅಪ್ಪಳಿಸಿದೆ ತಾನು
ಎದೆಯಂತರಂಗದಿ ಗುನುಗುತಿದೆ
ಅದೇ ಜೋಗುಳ ಹಾಡು ,,,,,
ಕಡಲು ಕೈ ಬೀಸಿ ಕರೆದಿದೆ ತಾನು
ಕಡಲು ಕಡಲು ಆ ಕಡಲು ಅದರೊಡಲು
ಎಲ್ಲಾ ಅಪ್ಪಿ ತನ್ನೊಳಗೆ ಒಪ್ಪಿಕೊಂಡಿದೆ ತಾನು

-



ಒಲವ ಜೀವದ ಬೆಲೆಯು ಅರಿವುದೆಂತು
ತನ್ನ ಕಳೆದುಕೊಂಡ ಕ್ಷಣ
ಕಣ್ಣ ಹನಿಯು ಬಾರದೆ ಉಳಿದಿದೆ ಇನ್ನೂ ಮನದಿ ಕರಗದೆ
ಮತ್ತೆ ಮತ್ತೆ ನೆನಪು ಕಾಡಿ
ವಿಧಿಯ ಶಪಿಸಿದೆ
ಅಭಿಮಾನಿಗಳ ಅಭಿಮಾನಿಯ ವಿಧಿಯ ಬಲಿಯು
ಅಮರವಾಗಿದೆ ಹೃದಯದಿ ಹೃದಯದಿ


-



ಸ್ವಾಭಿಮಾನ ಉಸಿರಿನಂತೆ
ಸ್ವಾಭಿಮಾನ ಬದುಕಿನಂತೆ
ಸ್ವಾಭಿಮಾನ ನಡೆಯಂತೆ
ಸ್ವಾಭಿಮಾನ ನುಡಿಯಂತೆ
ಸ್ವಾಭಿಮಾನವೆಂಬುದೇ ಮಂತ್ರದಂತೆ
ಉಸಿರಿರದೆ ದೇಹಕ್ಕೆ ಚೇತನವಿಲ್ಲ
ಹಾಗೆಯೇ ಈ ಸ್ವಾಭಿಮಾನ
ಸ್ವಾಭಿಮಾನಕ್ಕೆ ಪೆಟ್ಟಾದರೆ ಬದುಕು ಬರಡಂತೆ

-



ಗುನುಗುತ್ತಿದೆ ಹಾಡು

ಗುನುಗುತ್ತಿದೆ ಹಾಡು ಕಿವಿಯಲ್ಲಿ ನಾಲಿಗೆಯ ತುದಿಯಲ್ಲಿ
ನಿಂತಾಗಲೂ ಕುಂತಾಗಲೂ ಅದೇ ಪಾಡು
ಒಲವ ಅನುರಾಗ ಬಿತ್ತಿ
ಕನಸಿನಲೂ ಹಾಡಿದ ಹಾಡು
ಹೃದಯಗಳ ನವಿರಾದ ಹೊಸತನ ಈ ಸಮ್ಮಿಲನ
ಗುನುಗುತ್ತಿದೆ ಅದೇ ಒಲವ ಹಾಡು
ತಂಗಾಳಿ ಬೀಸಿ ಕರೆಯುತ್ತಿದೆ
ಮುಂಜಾನೆ ಹಕ್ಕಿಗಳ ಕಲರವ
ಬೆಳದಿಂಗಳಲಿ ಇಂಪಾದ ಲಾಲಿ ಹಾಡು
ಗುನುಗುತಿದೆ ಎದೆಯಲ್ಲಿ ಸದಾ ಅದೇ ಹಾಡು
ಕುಂತಾಗ ನಿಂತಾಗ ಕನಸಿನಲೂ ಅದೇ ಹಾಡು

-



ಇದು ಮನದ ಭಾಷೆ ಇದು ಉಸಿರಾದ ಭಾಷೆ
ಇದು ಹಸಿರಾದ ಭಾಷೆ‌ ಇದು ಮಿಡಿವ ಭಾಷೆ
ಇದು ನುಡಿವ ಭಾಷೆ ಇದು ಕಣಕಣದಿ ಬೆರೆತ ಭಾಷೆ
ಇದ ಮನವ ಸೆಳೆವ ಭಾಷೆ ಇದು ಈ ನೆಲದ ಭಾಷೆ
ಇದು ಬದುಕನ್ನು ಕಟ್ಟಿಕೊಟ್ಟ ಭಾಷೆ ಇದು ಸಂಸ್ಕಾರ ಕಲಿಸಿದ ಭಾಷೆ
ಇದು ಮೈ ಸೂರಿನಲಿ ಮೈಗೂಡಿಸಿಕೊಂಡ ಭಾಷೆ
ಎಲ್ಲಿದ್ದರೂ ಹೇಗಿದ್ದರೂ ಸದಾ ನನ್ನುಸಿರಿನಲಿ
ಗೆಲುವಾದ ಭಾಷೆ ಇದು ಬದುಕಾದ ಭಾಷೆ

-



ಬದುಕೆಂಬುದು ಭರವಸೆಯದು
ಕಹಿ ಸಿಹಿ ನೋವು ನಲಿವುಗಳ ಜೊತೆ
ಏಳು ಬೀಳಿನಲೂ ನಾಳೆಗಳ ಭರವಸೆ
ಅರಿತು ಬೆರತು ಕಲಿತು ಸಾಗುತಲಿದೆ
ಹಳೆಯ ಹೊಸದರ ನಡುವೆ ಭರವಸೆ
ಮತ್ತೆ ಮತ್ತೆ ಉಸಿರಿರುವ ತನಕ

-



ರೊಕ್ಕ
ಸಿರಿವಂತರ ದಾಹವನು ತೀರಿಸದೀ ರೊಕ್ಕ
ಬಡವನ ಹಸಿವ ನೀಗಿಸದೀ ರೊಕ್ಕ
ಬಂಧು ಬಳಗ ಪರಿಗಣಿಸೋದು ರೊಕ್ಕ
ಎಲ್ಲದಕ್ಕೂ ಬೇಕೆ ಬೇಕು ರೊಕ್ಕ
ಆಸೆಯ ಕೊಂಡಿ ಬೆಳಸುವುದೀ ರೊಕ್ಕ
ಆಸೆಯೇ ದುಖಃಕ್ಕೆ ಮೂಲವೀ ರೊಕ್ಕ
ಮೌಲ್ಯಗಳ ಮರೆಸುವುದೀ ರೊಕ್ಕ
ಬದುಕನ್ನು ಕಲಿಸುವುದೀ ರೊಕ್ಕ

ಕಿಚ್ಚನು ಹಚ್ಚಿಹುದೀ ರೊಕ್ಕ
ಹುಚ್ಚನು ಹೆಚ್ಚಿಹುದೀ ರೊಕ್ಕ
ದೇಶದ ನಾಡಿಮಿಡಿತವೀ ರೊಕ್ಕ
ದೇಶದ ದಿಕ್ಕು ಬದಲಿಸಿದ್ದು ಈ ರೊಕ್ಕ
ಎಲ್ಲದಕ್ಕೂ ಬೇಕೆ ಬೇಕು ರೊಕ್ಕ
ಕೊನೆಗೆ ಮಣ್ಣಾದರೂ ಬಿಡದೀ ರೊಕ್ಕ
ಕೊನೆಗೆ ಉಳಿವುದೊಂದು ಪ್ರಶ್ನೆ ರೊಕ್ಕ
ಇರುವುದು ಬದುಕಲಿಕ್ಕ ಗಳಿಸಲಿಕ್ಕ

-



ಕರುನಾಡ ಮಗನು
ಜಗಕ್ಕೆಲ್ಲಾ ಉಸಿರು
ಈ ಜೀವದಾ ಹಂಗೇತಕೆ
ಕರೆದೊಯ್ದೆ ಹೇಳು ಶಿವನೇ,,,,
ಅವನಿರದ ಮನೆಯಲ್ಲಿ ನಗುವಿಲ್ಲಾ
ಈ ನಾಡ ಮನೆಯಲ್ಲಿ ಬರಿ ಕಂಬನಿ
ಅಭಿಮಾನಕೆ ಹೆಸರೆಂದರೆ ನೀನಲ್ಲವೇ
ನಟನೆಗೆ ನೀ ನಟಸಾರ್ವಭೌಮನಲ್ಲವೇ
ಅವನಿರದೆ ಹೇಗೆ ಪಯಣ ಸಿನಿರಂಗಕೆ
ಬೆಟ್ಟದ ಹೂ ಮುಡುಡಿ ಹೋಯ್ತೆ ತಾನು
ಬಾನದಾರಿಯಲ್ಲಿ ನೀ ಜಾರಿ ಹೋದೆಯೇನು
ಮೊಗದ ನಗುವ ಮರೆಯಾಗಿ ಇನ್ನೂ
ಅವನಿಟ್ಟ ಪ್ರೀತಿ ಹಸಿರಾಗಿ ಇನ್ನೂ
ಎದೆಯಾಳದಲ್ಲಿ ನೀ ಬಿತ್ತ ಪ್ರೀತಿ ಅಮರ
ನೀನೆಂದೂ ಕರುನಾಡ ರಾಜಕುಮಾರ

-


Fetching ದಯಾನಂದ ಕೆ ಚಂದ್ರಶೇಖರಯ್ಯ Quotes