ಅಕಾಲಿಕ ಮರಣಗಳು
ಕನಸು ಕಾಣುವ ಖುಷಿಯನ್ನೇ
ಕಸಿದು ಬಿಡುತ್ತದೆ. ... !!!!-
ಚರ್ಮದ ಬಣ್ಣ ಅಳಿಯಲು ತೊನ್ನು
ಮೂಡನಂಬಿಕೆಗಳ ಅಳಿಸಿ ಬೆಳೆಯಲಿ ಹೆಣ್ಣು…
ಆತ್ಮ ವಿಶ್ವಾಸವೇ ಹೊನ್ನು-
ಚರ್ಮದ ಬಣ್ಣ ಅಳಿಯಲು ತೊನ್ನು
ಮೂಡನಂಬಿಕೆಗಳ ಅಳಿಸಿ ಬೆಳೆಯಲಿ ಹೆಣ್ಣು…
ಆತ್ಮ ವಿಶ್ವಾಸವೇ ಹೊನ್ನು-
ಮನುಷ್ಯ ದೇವರಾಗಲು
ಮನುಷ್ಯತ್ವ, ಪ್ರೀತಿ ವಿಶ್ವಾಸ ಸಹಬಾಳ್ವೆಯಿಂದ
ನಡೆದು ಕೊಂಡರೆ ಸಾಕು....
ದೇವರ ವೇಷ ಧರಿಸಿ
ದೇವರಂತೆ ನಟಿಸುವುದು ಬೇಡ..!!
ಮನುಷ್ಯತ್ವವೇ ದೈವತ್ವ...-
ಸೋತು ಹೋಗಿರುವೆ
ಸತ್ತು ಹೋಗಿರುವೆ
ಸದ್ದಿಲ್ಲದೆ ಅಳುತಿರುವೆ
ಸುಮ್ಮನೆ ನಗುತಿರುವೆ
ಸರಿಯಿಲ್ಲದಿದ್ದರೂ ಸಹಿಸುತಿರುವೆ
ಸುಳ್ಳಿನ ಸಂತೆಯಲ್ಲಿ ಸತ್ಯವ ಅರಸುತಿರುವೆ
ಸಂಚುಗಳ ಸುಳಿಯಲ್ಲಿ ಸಿಲುಕಿರುವೆ..
ಸಾಂತ್ವನ ವಿಲ್ಲದೆ ಸೊರಗಿ ಹೋಗಿರುವೆ
ಸತ್ವವಿಲ್ಲದೆ ಸಾಗುತಿರುವ ಇದು
ಸರಕೋ ??? ಬದುಕೋ?? ...-
Sometimes
A decision or mistake made once
Is suffered for lifetime or many more !!!!-
ಪ್ರತಿ ಪ್ರಶ್ನೆಗಳಿಗೂ ಉತ್ತರ ನೀಡಿ
ಜೀವನ ಪರೀಕ್ಷೆಯಲ್ಲಿ ನಮ್ಮನ್ನು
ಉತ್ತಿರ್ಣಗೊಳಿಸುವ
ಗುರುವಿಗೊಂದು
ನಮನ…-
ನೀ ನಮ್ಮನ್ನಗಲಿ ವರುಷವಾಯಿತು ಅಪ್ಪಾ..
ಹೊರಳಿ ಹೋಗಬಹುದೇ ಸಮಯ ವಾಪಸ್ ನೀ ಇರುವ ಕಡೆ .
ಮರಳಿ ಬರಬಹುದೇ ನೀನು ನಾವಿರುವ ಕಡೆ..
ಒಮ್ಮೆಯಾದರೂ...!!!
-
ಹುಟ್ಟು ಸಾವು ನಂತರದ ಬದುಕು
ಇಹ ಪರ ಲೋಕ, ಮುಕ್ತಿ
ಹುಟ್ಟಿದ ಮೇಲೆ ಸಾವು ನಿಶ್ಚಿತ
ಹೀಗೆ
ಅಧ್ಯಾತ್ಮ ವಾಗಿ ಏನೇನೋ ಮಾತನಾಡಬಹುದು...
ನಮಗಾಗಿಯೇ ಪ್ರತಿ ಕ್ಷಣ ಬದುಕಿದ
ಅಪ್ಪಾ ಈಗಿಲ್ಲ ಎನ್ನುವ ಸತ್ಯವ ಅರಗಿಸಿಕೊಳ್ಳಲು ಮನಸ್ಸು ಒಪ್ಪುವುದೇ ಇಲ್ಲ...
ಅಪ್ಪಾ ಈಗ ಎಲ್ಲಿದ್ದಾರೆ ? ..
ಸದಾ ನಮಗಾಗಿ ಕಾಯುವ ಅಪ್ಪಾ
ಈಗ ನಮ್ಮನ್ನು ತೊರೆದು ಹೇಗಿದ್ದಾರೆ??
ಒಂದೇ ಒಂದು ಸಾರಿ ನೋಡಲು ಸಿಗಬಹುದೇ?? .
ಒಂದೇ ಒಂದು ಸಲ ಅವರ ಮಾತುಗಳ ಆಲಿಸಬಹುದೇ??
ಅದು ಹೇಗೆ ನಮ್ಮನ್ನು ಬಿಟ್ಟು ಹೋಗುತ್ತಾರೆ ??
ಎನ್ನುವ ಎಳಸು ಪ್ರಶ್ನೆಗಳಿಗೆ
ಉತ್ತರವೇ ಇಲ್ಲ..
ನೀ ತೊರೆದ ಪ್ರಪಂಚದಲ್ಲಿ
ಎಲ್ಲವೂ , ಎಲ್ಲರೂ ಅಪರಿಚಿತರು
ಎನ್ನುವುದೊಂದೇ ಕಟು ಸತ್ಯ..
ನೀನು ಕಟ್ಟಿಕೊಟ್ಟ ಬದುಕನ್ನು
ನೀನು ನಮಗಾಗಿ ಬಿಟ್ಟುಹೋದ ನೆನಪುಗಳ ಹೊತ್ತು
ನಮಗಾಗಿ ಕೂಡಿಟ್ಟ ಕನಸುಗಳ ನನಸಾಗಿಸುವುದೇ ಈ ಜೀವನ..-
ಮನೆಯಲ್ಲಿ
ಮನದಲ್ಲಿ
ಮೌನದಲ್ಲಿ
ಕೇವಲ ನಿನ್ನ ಮಾತುಗಳೇ
ಕೇಳಿಸುವುದು…
Miss u ಅಪ್ಪಾ,,,
-