Divyashree S.M Aradhya   (✨ದಿವ್ಯ ಶ್ರೀ ಆರಾಧ್ಯ ✨)
1 Followers · 1 Following

ಕನ್ನಡತಿ 💚
Joined 22 January 2023


ಕನ್ನಡತಿ 💚
Joined 22 January 2023
19 APR AT 9:11

🍂🥭 ಬಂದ ವಸಂತ 🍃🌞

ಬಂದ ವಸಂತ
ತಂದ ತಂಪು ಮಳೆ, ಹೊಂಬಿಸಿಲ ಹೊಳೆ
ಎಲ್ಲೆಲ್ಲೂ ಹಸಿರ ಕಳೆ, ಸಂಪಾದ ಬೆಳೆ
ನಕ್ಕು ನಲಿದಿದೆ ಇಳೆ
ಮತ್ತೆ ಬಂದ ವಸಂತ


-


7 MAR AT 21:26

ಕಳೆದುಹೋದ ನೆಮ್ಮದಿಯ ಹುಡುಕಾಟ
ಕಳೆದುಹೋಗುವ ನೆಮ್ಮದಿಯ ಉಳಿಸಿಕೊಳ್ಳಲು ಹೋರಾಟ
ಹೋರಾಟ ಹಾರಾಟದ ನಡುವೆ ಪರದಾಟ!
Lifu ಇಷ್ಟೇನೆ!!

-


21 DEC 2024 AT 22:04

ಎಷ್ಟೇ ದೊಡ್ಡ ವ್ಯಾಪಾರಿಯಾಗಿದ್ದರು
ತನ್ನ ದುಃಖವನ್ನು ಪರರಿಗೆ ಮಾರಲು ಸಾಧ್ಯವಿಲ್ಲ
ಎಷ್ಟೇ ದೊಡ್ಡ ಸಿರಿವಂತನಾಗಿದ್ದರು
ಸಿಗದ ನೆಮ್ಮದಿಯ ಕೊಳ್ಳಲು ಸಾಧ್ಯವಿಲ್ಲ

-


21 JUL 2024 AT 20:22

ಶ್ರೀ ಕೃಷ್ಣನ ಪರಮಾಪ್ತರು
ಮುಖ್ಯಪ್ರಾಣನೇ ಇವರ ಪಂಚಪ್ರಾಣ
ತುಂಗಾನದಿ ತೀರದ ಬೃಂದಾವನ ವಾಸಿ
ಕಲಿಯುಗ ಕಾಮಧೇನು ಕಲ್ಪವೃಕ್ಷ
ಧರ್ಮದ ಹಾದಿಯ ಬಿಡದ ಭಕ್ತರ ಸದಾ ಪೊರೆವರು
ವಿದ್ಯಾಲಕ್ಷ್ಮಿಯ ಅನುಗ್ರಹದಿಂದ ಗುರುಸಾರ್ವಭೌಮರಾದರು
"ಮಂಚಾಲೆಯ ಬರಡುಭೂಮಿಯ ಮಂತ್ರಾಲಯವನನ್ನಾಗಿಸಿದ ಮಹಾ ಮಹಿಮರು "
ನಂಬಿದ ಭಕ್ತರ ಜೀವನವ ಹಸನಾಗಿಸುವರು 🙏



-


21 JUL 2024 AT 17:47

ದೀನರ ಉದ್ದಾರಕ್ಕೆ ಧರೆಗಿಳಿದ ಈಶ್ವರನ ಅಂಶ
"ಬಾಬಾ" ಎಂದರೆ ಬೇಗನೆ ಬಂದು
ಭಕ್ತರ ಪೊರೆವ ಕರುಣಾಳು
ಮಾನವರೆಲ್ಲಾ ಒಂದೇ ಕುಲ
ದಯೆಯೇ ಧರ್ಮದ ಮೂಲವೆಂದು
ಸರ್ವಧರ್ಮದ ತತ್ವವ ಸಾರಿದ ದಯಾಳು
ಜಾತಿ ಮತ ಪಥದಿಂದ ಸದಾ ದೂರ ನಿನ್ನಾತ್ಮ
ಮಂಗಳದಾತ ನಮಾಮಿ ಶ್ರೀ ಶಿರಡಿ ಸದ್ಗುರು ಸಾಯಿನಾಥ 🙏

-


21 JUL 2024 AT 17:47

ದೀನರ ಉದ್ದಾರಕ್ಕೆ ಧರೆಗಿಳಿದ ಈಶ್ವರನ ಅಂಶ
"ಬಾಬಾ" ಎಂದರೆ ಬೇಗನೆ ಬಂಧು
ಭಕ್ತರ ಪೊರೆವ ಕರುಣಾಳು
ಮಾನವರೆಲ್ಲಾ ಒಂದೇ ಕುಲ
ದಯೆಯೇ ಧರ್ಮದ ಮೂಲವೆಂದು
ಸರ್ವಧರ್ಮದ ತತ್ವವ ಸಾರಿದ ದಯಾಳು
ಜಾತಿ ಮತ ಪಥದಿಂದ ಸದಾ ದೂರ ನಿನ್ನಾತ್ಮ
ಮಂಗಳದಾತ ನಮಾಮಿ ಶ್ರೀ ಶಿರಡಿ ಸದ್ಗುರು ಸಾಯಿನಾಥ 🙏

-


21 JUL 2024 AT 17:08

ಧರೆಯಲ್ಲಿ ಕಲಿಯ ಪ್ರಾಭಲ್ಯ ಹೆಚ್ಚಿದಾಗ
ಧಮೋದ್ದಾರಕೆಂದು ಧರೆಗಿಳಿದ ಧರ್ಮಾತ್ಮ
ಗುರು ಗೋಸಲರ ಉಪದೇಶ ಪಡೆದು
ಸನ್ಯಾಸ ದೀಕ್ಷೆತೊಟ್ಟು ಪ್ರಪಂಚ ಪರ್ಯಟನೆ ಮಾಡಿ
ಜಗತ್ತಿಗೆ ಗುರುಗಳಾದ ಶಿವನ ಅಂಶ ಇವರು
ಶ್ರೀ ಕ್ಷೇತ್ರ ಸಿದ್ದಗಂಗೆಯಲ್ಲಿ ಗಂಗಾ ಮಾತೆ ನೆಲೆಸಲು
ಕಾರಣರು, ಜ್ಞಾನ ವಿಜ್ಞಾನದ ಗುರುಪೀಠವಾಗಲಿ ಎಂದು ಆಶೀರ್ವದಿಸಿದ ಸಿದ್ದ ಪುರುಷರು
ವೃದ್ಧಭಕ್ತೆಯ ಭಕ್ತಿನಿಷ್ಠೆಗೆ ಒಲಿದು ಎಡೆಯೂರಿನಲ್ಲಿ ನೆಲೆಸಿದ ನಿರಂಜನ, ನಿರ್ಮಾಯ, ನಿಷ್ಕಳ ಎಡೆಯೂರುಪುರಾದೀಶ ಶ್ರೀ ಗುರು ಸಿದ್ದಲಿಂಗೇಶ್ವರರು 🙏

-


21 JUL 2024 AT 14:35

ಶ್ರೀ ಮಾರುತಿಗೆ ಲಿಂಗ ದೀಕ್ಷೆಯಿತ್ತ ಮಹಾಗುರು
ಹರನ ಜಟೆಯಿಂದ ಉದ್ಭವಿಸಿದ ರೌದ್ರರೂಪ
ಶಿವ ಯಜ್ಞವ ರೂಡಿಗೆ ತಂದ ಶಿವಸುತ
ದಕ್ಷನ ಮಧವಡಗಿಸಿದ ಮಹೇಶಪಾಲ
ನಿತ್ಯದಲಿ ಸತ್ಯದಲಿ ನಡೆವ ಭಕ್ತರ ಬಂಧು
ಸದಾ ರಕ್ಷತು ಶ್ರೀ ಗುರು ವೀರಭದ್ರ🙏

-


21 JUL 2024 AT 13:09

ಹರಿ ಮುನಿದರೆ ಹರ ಕಾಯುವನು
ಹರ ಮುನಿದರೆ ಗುರು ಕಾಯುವನು
ಗುರು ಮುನಿದರೆ ಹರಿ ಹರರು ಮುನಿವರು

-


1 MAY 2024 AT 14:10

ಸ್ವಾಭಿಮಾನದಿಂದ ಮಾಡುವ ಯಾವ ಕೆಲಸಾನು ಸಣ್ಣದಲ್ಲ
ಸ್ವಾಭಿಮಾನ ಬಿಟ್ಟು ಮಾಡೋ ಯಾವ ಕೆಲಸಾನು ದೊಡ್ಡದೂ ಅಲ್ಲ
ಪರಪಂಚವೆಂಬೊ ಅವನ ಈ ಕಾರ್ಖಾನೆಯಲ್ಲಿ
ನಾವೆಲ್ಲರೂ ಕಾರ್ಮಿಕರೇ
ಅವನೊಬ್ಬನೇ ನಮ್ಮೆಲ್ಲರ ಜೀವದ ಮಾಲೀಕ

-


Fetching Divyashree S.M Aradhya Quotes