ಡಾ. ಮಲ್ಲಿನಾಥ ಶಿ ತಳವಾರ   (✍️ರತ್ನರಾಯಮಲ್ಲ)
2.4k Followers · 31 Following

read more
Joined 11 May 2018


read more
Joined 11 May 2018

ಮನಸ್ಸಿಗೆ ಕಣ್ಣು
ಕಿವಿಗಳಿಲ್ಲ ಗಾಲಿಬ್
ಅನುಭವ ಸೆರೆ
ಹಿಡಿಯುವ ಜಾಣ್ಮೆಯಿದೆ

-




ನಿರ್ಧಾರ
ಎನ್ನುವುದು
ಮೊಳಕೆ
ಯೊಡೆಯಲಿರುವ
ಬೀಜದಂತೆ!

-



ನೆನ್ನೆ ಬೆತ್ತಲೆಯಾಗಿದ್ದವನಿಗೆ ಬಟ್ಟೆಯ ಅವಶ್ಯಕತೆ ಇತ್ತು ಗಾಲಿಬ್
ಇಂದು ಬೆತ್ತಲೆಯಾಗಿದ್ದವರಲ್ಲಿ ದುಡ್ಡಿದ್ದರೆ ಫ್ಯಾಷನ್ ಅನಿಸಿಕೊಳ್ಳುತದೆ

-



ಭಾವನೆಗಳು ಬಾಳಿಗೆ
ಬೆಳಕಾಗಬೇಕು ಜನಾಬ್
ಕತ್ತಲೆಯನ್ನು ತೊಡಿಸಬಾರದು
ಕತ್ತಲು ಬದುಕಿಗೆ ನೆಮ್ಮದಿ
ತಾಣವಾಗಬೇಕು ಜನಾಬ್
ಶಾಂತಿ ಕದಡಬಾರದು

-



ಗಜಲ್ ಎಂದರೆ..
ಭಾವನೆಗಳನ್ನು ಪದಗಳ ಮೂಲಕ
ಹಾಡುವ ಕಲೆ
ಅದು ಶಬ್ಧವಲ್ಲ, ಅನುಭವ
ಅದು ಓದುವ ಸರಕಲ್ಲ,
ಅನುಭವಿಸುವ ಸೆಲೆ

-



ಗಜಲ್...
ಭಾವನೆಗಳ ಭಾಷೆ
ಮನಸು ಹಾಡುವ ಮೌನ ಗಾನ
ಮಾತುಗಳಿಂದ ಕೇಳಿಸುವ ಮನದಾಳದ ಧ್ವನಿ

-



ಹೈಕು
********
ಅಂಧಾಭಿಮಾನ
ಆಪೋಶನ ವ್ಯಕ್ತಿತ್ವ;
ಸತ್ಯ ಸುಂದರ

-



ಕಂಬನಿ ಒರೆಸುವ ಬೆರಳುಗಳು
ಹತ್ತಿರವಿರದಿದ್ದರೂ ಪರವಾಗಿಲ್ಲ ಸಾಹೇಬ್
ಕಂಗಳನು ಚುಚ್ಚುವ ಉಗುರುಗಳು ಹತ್ತಿರವಿರದಿರಲಿ
ಹೊಟ್ಟೆ-ಬಟ್ಟೆಯಲ್ಲಿಯೇ
ಜೀವನ ಕಳೆದುಹೋಗಬಾರದು ಸಾಹೇಬ್
ಬದುಕೆನ್ನುವುದು ನೆಮ್ಮದಿಯ ತಾಣವಾಗಬೇಕು

-



ತಪ್ಪು ನಿನ್ನದೆ ಎನ್ನುವಷ್ಟು ಸಂಬಂಧಗಳಿಗೆ ಬೆನ್ನು ಹತ್ತಬೇಡ
ಇಲ್ಲಿ ಯಾರನ್ನೂ ದೂರಲಾಗುವುದಿಲ್ಲ ನಿನ್ನನ್ನು ಹೊರತುಪಡಿಸಿ

-



ಇತರರನ್ನು ಕೆರಳಿಸುವ ಇತರರ ಮಾತುಗಳಿಗೆ
ಕೆರಳುವ ಸ್ವಭಾವ ಸಾತ್ವಿಕ ವ್ಯಕ್ತಿತ್ವವನ್ನು ನಿರ್ಮಿಸದು
ಅನ್ಯರ ನಿಯಂತ್ರಣಕ್ಕೆ ಒಳಪಡುವ ಮನಸುಗಳು
ಅಸ್ಮಿತೆಯನ್ನು ಉಳಿಸಿಕೊಳ್ಳಲಾರವು ಜನಾಬ್

-


Fetching ಡಾ. ಮಲ್ಲಿನಾಥ ಶಿ ತಳವಾರ Quotes