ನೆನಪಿನ ಅಂಗಳದಲ್ಲಿ ವಿಹರಿಸುವುದೆಂದರೆ
ಅಲಗಿನ ಮೇಲೆ ನಡೆದಂತೆಯೇ ಜನಾಬ್
ಸಿಹಿ ತುಂಬಿದ ಘಟನೆಗಳನ್ನು ಮೆಲುಕು ಹಾಕುತ್ತಾ
ಜೀವನವನ್ನು ಸಾಗಿಸಬೇಕು ಜನಾಬ್-
ಬರವಣಿಗೆ ಮನೋರಂಜನೆಯ ಸರಕಲ್ಲ, ಬದ್... read more
ಗೆಲುವು ಕುರುಡನನ್ನಾಗಿಸಿದೆ ನಿನಗೆ ಒಂದು ಸೋಲಿನ ಅವಶ್ಯಕತೆ ಇದೆ
ಬಣ್ಣ ಹಚ್ಚಿಕೊಂಡು ತಿರುಗುವ ನಿನಗೆ ಒಂದು ಮಳೆಯ ಅವಶ್ಯಕತೆ ಇದೆ-
ವಚನ
-----------
ಸಮಸ್ಯೆಯ ಅರಿವಿದ್ದೂ ಚೀರಾಡಿದಡೇನೂ ಫಲ
ಸಮಸ್ಯೆಯನ್ನು ಪ್ರೀತಿಸುತ್ತಲೇ ಪರಿಹಾರ ಕಂಡುಕೊಳ್ಳಬೇಕಲ್ಲವೇ?
ಅನ್ಯರು ಕೆಟ್ಟವರೆಂದು ತಿಳಿದಾಗ ಅವರಿಂದ ಬೇಗ ದೂರಾಗಬಹುದು
ನಮ್ಮವರೇ ಕೆಟ್ಟವರೆಂದು ತಿಳಿದಾಗ ಹತ್ತಿರವಾಗಬಾರದಲ್ಲವೆ?
ಮೋಡಗಳ ಮರೆಯಲ್ಲಿ ನೇಸರ ಬಂಧಿಯಾಗಿದ್ದರೂ
ಬೆಳಕಿಗೇನೂ ಮೋಸ ಇಲ್ಲ ಅಲ್ಲವೇ ಸೂರ್ಯದೇವ!!-
ಸತ್ಯ-ಸುಳ್ಳುಗಳು ತಮ್ಮ ಅಸ್ಮಿತೆಯನ್ನು
ಉಳಿಸಿಕೊಳ್ಳಲು ಹೆಣಗಾಡುತ್ತಿವೆ ಗಾಲಿಬ್
ವಿವೇಚನೆಯು ವಿವೇಚನಾರಹಿತವಾಗಿ
ಬಾಯಿಗೆ ಬಂದಂತೆ ಬೊಗಳುತ್ತಿದೆ ಗಾಲಿಬ್-
ಕಾರಣಗಳೇ ಇಲ್ಲದೆ ವಿಷವನ್ನು ಬಡಿಸುವ
ಸಂಬಂಧಗಳಿಂದ ದೂರವಿರಬೇಕು
ಅಮೃತದ ಹೆಸರಲ್ಲಿ ಬೆನ್ನಿಗೆ ಚೂರಿ ಹಾಕುವ ಸಂಬಂಧಗಳಿಂದ ದೂರವಿರಬೇಕು-
ನನ್ನ ಸೋಲಿಗೆ 'ನಾನೇ' ಕಾರಣ ಎಂದಾಗ ಜನ ಸತ್ಯ ಒಪ್ಪಿಕೊಳ್ಳಲು ಧೈರ್ಯ ಬೇಕು ಎಂತಾರೆ ಗಾಲಿಬ್
ನನ್ನ ಗೆಲುವಿಗೆ 'ನಾನೇ ಕಾರಣ ಎಂದಾಗ ಅದೇ ಜನ ದುರಹಂಕಾರದ ಪರಮಾವಧಿ ಎಂತಾರೆ ಗಾಲಿಬ್-
ನಮ್ಮ ಈ ಸಮಾಜವು ತುಂಬಾss ಮುಂದುವರೆದಿದೆ ಜನಾಬ್
ಎಲ್ಲವನ್ನೂ ತನಗೆ ಬೇಕಾದಂತೆ ತಿರುಚುವುದರಲ್ಲಿ ಮುಂದಿದೆ!-
ಎಲ್ಲೆ ಇದ್ದರೂ ಆಶೀರ್ವಾದದ ರೂಪದಲ್ಲಿ ಜೊತೆಯಲ್ಲಿದ್ದಾಳೆ
ಯಾವತ್ತೂ ಈ ಜಗತ್ತಿನ ಜಾತ್ರೆಯಲಿ ಕಳೆದುಹೋಗಲು ಬಿಟ್ಟಿಲ್ಲ
ತರುಣ ಮಗ ವಯಸ್ಸಿಗಿಂತ ಮುಂಚೆಯೇ ಮುದುಕನನ್ನಾಗಿಸಿದ
ಒಬ್ಬಳು ತಾಯಿಯಿದ್ದಾಳೆ ಯಾವತ್ತೂ ದೊಡ್ಡವನಾಗಲು ಬಿಡಲಿಲ್ಲ-
ಯಾರಿಂದಲೂ ಏನನ್ನೂ ನಿರೀಕ್ಷಿಸದೆ ಬಾಳಬೇಕು ಗೆಳೆಯ
ಸಂಬಂಧಗಳ ನಿರ್ವಹಣೆ ಹೂವಿನಷ್ಟೆ ಹಗುರವಾಗುವುದು-
ಮನಸು ಕದಡದೇ ಇದ್ದರೆ ಮುಖದಲ್ಲಿ
ನಗುವಿನ ಹೆಜ್ಜೆ ಗುರುತುಗಳು ಮೂಡಬಲ್ಲವು ಗೆಳೆಯ
ಮನದಲಿ ನೆಮ್ಮದಿಯ ತಂಗಾಳಿ ಬೀಸಲು
ಉತ್ತಮ ಆಲೋಚನೆಯ ಸಸಿಗಳನ್ನು ನೆಡಬೇಕು ಗೆಳೆಯ-