ರಾಷ್ಟ್ರ ಕಂಡ ಶ್ರೇಷ್ಠ ನಾಯಕ
ಭಾರತಾಂಬೆಯ ಸೇವಕ
ಸನಾತನ ಧರ್ಮದ ರಕ್ಷಕ
ಮುಕ್ಕೋಟಿ ದೇವರುಗಳ ಆರಾಧಕ
ದೇಶದ ಅಭಿವೃದ್ಧಿಯೇ ಕಾಯಕ
ಶತ್ರುಗಳ ಸೆದೆಬಡಿಯುವ ಸೈನಿಕ
ಹಿತಶತ್ರುಗಳಿಗೆ ದಂಡನಾಯಕ
ಭಯೋತ್ಪಾದಕರಿಗೆ ನಿಯಂತ್ರಕ
ಎಪ್ಪತೈದಾದರೂ ದೇಶದ ಯುವನಾಯಕ
ಪ್ರಪಂಚ ಕಂಡ ಪ್ರಬುದ್ದತೆಯ ಪ್ರಬಲ ವ್ಯಕ್ತಿ
ಇವರ ಮೈಮನಗಳೆಲ್ಲಾ ಸಂಪೂರ್ಣ ದೇಶಭಕ್ತಿ
ಭರತಖಂಡ ವನ್ನು ಮುನ್ನಡೆಸುತ್ತಿರುವ 'ಸಾರಥಿ'
🇮🇳
ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ಸನ್ಮಾನ್ಯ
ಶ್ರೀ "ನರೇಂದ್ರ ಮೋದಿ" ಯವರಿಗೆ
ಗೌರವಪೂರ್ವಕವಾಗಿ
ಹುಟ್ಟು ಹಬ್ಬದ ಶುಭಾಶಯಗಳು...-
❤️
ಕನ್ನಡ ಬರಹ...
ಮನದಾಳದ ಮನದಿಚ್ಚೆಯಂತೆ ✍🏻ಈ ಬರಹಕೆ ಈಗತಾನೆ ಹೆಜ್ಜೆ 👣 ಹಾಕುತ್ತಿರುವೆ.. ಬರಹ ನನಗೆ ... read more
ಹರಿದು ಹಂಚುವಷ್ಟು ಕೊರತೆಗಳಿದ್ದರೂ,
ಬೇಡಿ ಬದುಕುವಷ್ಟು ಸೋಮಾರಿತನ ಬರಬಾರದು,
ಕಿತ್ತು ತಿನ್ನುವಷ್ಟು ಕಷ್ಟಗಳಿದ್ದರೂ,
ದುಡಿದು ಬದುಕುವ ಸ್ವಾಭಿಮಾನ ಬಿಡಬಾರದು..!-
ಭಾವನೆಗಳನ್ನು ಅಳಿಸಬಹುದು,
ಸಂಬಂಧಗಳನ್ನು ಅಳಿಸಲಾಗದು..
ಅಪವಾದವಿತ್ತರೆ ಅರಿವು ಅಸತ್ಯವಾಗುವುದು,
ಅತಿಥಿ ಅಗತ್ಯವಾದರೆ ಅವರವರನ್ನೂ ಅರಿಯಲಾಗದು..
ಹೊಂದಾಣಿಕೆಯಿದ್ದರಷ್ಟೇ ಹೊಂದಿಕೆಯಾಗುವುದು,
ಹೋಲಿಕೆಯಿಟ್ಟರೆ ಹೊಂದಿಸಲಾಗದು..-
ಮನದ ಕಡಲ ಕಡೆದು ನೋಡು
ಬದುಕು ಎಷ್ಟು ಸುಂದರ !
ಬಂದಿದ್ದು ಬರಲಿ ಕಾದು ನೋಡು
ಭರವಸೆಯ ಬೆಳಕಿದೆ ಮಾಡು ನೀ ಸ್ವೀಕಾರ... !!-
ದಿಕ್ಕಿಲ್ಲದ ಹೃದಯಕ್ಕೆ ಹೆತ್ತವಳೇ ಆಸರೆ
ಹೆತ್ತವಳಿಲ್ಲದ ಜೀವನಕ್ಕೆ ದೇವರೇ ಆಸರೆ...
ಹೆತ್ತವಳೊಂದಿಗೆ ಇರಬೇಕೆಂಬ ಇತ್ತೊಂದು ಆಸೆ
ಅವಳಿಲ್ಲದ ಈ ಜೀವನಕ್ಕೆ ಭಗವಂತನೊಬ್ಬನೇ ಭರವಸೆ...-
ಕೈ ತುಂಬಾ ಹಸಿರು ಬಳೆ ತೊಟ್ಟು
ಕೆಂಪು ಕುಂಕುಮವನ್ನಿಟ್ಟು
ಕಣ್ಕಪ್ಪು ಬೈತಲೆಯನ್ನಿಟ್ಟು
ಇಳಕಲ್ ಸೀರೆಯನ್ನುಟ್ಟು
ಮನೆಯ ಜ್ಯೋತಿಯಾಗಿ
ನನಗೆ ಜೊತೆಯಾಗಿ
ಕಾಲ್ಗೆಜ್ಜೆ ತೊಟ್ಟು ಬಲಗಾಲಿಟ್ಟು
ಬಾರೆ ನೀ ನನ್-ಮನೆಗೆ
ಅಮ್ಮನಾಗಿ ನನ್ನ ಬಾಳಿಗೆ
ಕಣ್ಣಿಟ್ಟು ಕಾಪಾಡುವೆ ಕೊನೆವರೆಗೆ...-
ಕಲಿಕೆಯಲ್ಲಿರಲಿ ನಿಮ್ಮ ಪಯಣ
ಮಾಡದಿರಿ ಕಾಲ ಹರಣ
ಕೆಲವರಿಗೆ ಅವಶ್ಯಕ ಗುಣ
ಹಲವರಿಗೆ ಅನಿವಾರ್ಯ ಹಣ
ಸಂಪಾದಿಸಿ ಸ್ನೇಹಿತರ ಗಣ
ಕಲೆಹಾಕಿ ನೆನಪುಗಳ ಹೂರಣ
ಅದ್ಹಾಗೆ ಬರುವುದು ಒಂದಿನ ಮರಣ
ಎಲ್ಲರಿಗೂ ಇದೇ ಅಂತಿಮ ನಿಲ್ದಾಣ...-
ಭಾವನೆಗಳನ್ನು ಬದಿಗಿಟ್ಟಿದ್ದರೆ ಬಹುಷ್ಹಃ
ಮಾತು ಮರೆಯಾಗುತ್ತಿರಲಿಲ್ಲವೇನೋ.. ? 😟
ಅಂದು ಮರೆಮಾಚದಿರುವ ಭಾವನೆಗಳೇ
ಇಂದು ಎಲ್ಲವನ್ನೂ ದೂರವಾಗಿಸಿವೆ... 😟
ದಯಮಾಡಿ ಮನ್ನಣೆಯಿಟ್ಟು ಮನ್ನಿಸು🙏
-
ಕನ್ನಡ ನಿಘಂಟನ್ನೇ ಹೊತ್ತು ತಂದರು ಪದಗಳಲ್ಲಿ ಪೊಣಿಸಲಾಗದ, ವರ್ಣಿಸಲಾಗದವಳನ್ನು ನೆನೆಯಲು ವರ್ಷದ ಒಂದು ದಿನ ಸಾಕೇ..?
...
-