ಸುಮ್ಮನೇ ನಿಂತರೆ,
ಸಕ್ಕರೆಯಂತೆ ನಕ್ಕರೆ,
ಸಿಕ್ಕಸಿಕ್ಕಲ್ಲೆಲ್ಲ ಅಕ್ಕರೆಯ
ಹೆಸರಲ್ಲಿ ಪುಕ್ಕಟೆ ಭಾಷಣ......-
ನಂಗೋಸ್ಕರ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ... read more
ಇರಬೇಕು ನಿಜ
ನಿಮ್ಮೊಳಗಿನ ಹಠವೂ
ಮೇಲ್ಪಟ್ಟು ಸ್ವಾಭಿಮಾನವೂ,
ಆದರೂ ಪಕ್ಕಕ್ಕಿಡಿ ಒಮ್ಮೆ
ನಿಮ್ಮವರ ವಿಷಯದಲ್ಲಿ,
ಸಂಬಂಧಗಳ ಸವಿಯು
ಎಲ್ಲಕ್ಕಿಂತ ಮಿಗಿಲು,
ಇಂದು ಇರುವವರ ಇರುವು
ನಾಳೆಗೆ ಬರೀ ನೆನಪಾಗಬಹುದು.....-
ಆಕರ್ಷಣೆಗೆ ಅಯಸ್ಕಾಂತವೇ ಬೇಕೆಂದಿಲ್ಲ,
ಒಂದೊಳ್ಳೆ ಮನಸ್ಸು ಸಾಕು.
ಅರಿತವರು ಒಂದಾಗುತ್ತಾರೆ;
ಅರಿಯದವರು
ದೂರುತ್ತಾರೆ- ದೂರಾಗುತ್ತಾರೆ:-
ನಿನ್ನರಸಿ ಬಂದಿರುವೆ,
ಕತ್ತಲು ಕವಿಯುವ ಮುನ್ನ
ಕರೆದೊಯ್ಯಿ ನನ್ನನು ನಿನ್ನೊಲವಿನೂರಿಗೆ-
ಬದಲಾವಣೆಗಳು
ಒಂದಷ್ಟು ದಿನ
ಕಷ್ಟವೇ,
ಆಮೇಲೆ ಮತ್ತಿದೇ
ಮಾಮೂಲಿ....
ಹೊಂದಿಕೊಂಡರಷ್ಟೆ
ಬದುಕು,
ಮರುಭೂಮಿಯ
ಒಂಟೆಯಂತೆ....-
ನನ್ನುಸಿರ ಏರಿಳಿತದಲ್ಲಿ ನಿನ್ನದೇ ಧ್ಯಾನ.
ಕೈಬಿಡದಿರು ನನ್ನ ನಿನ್ನೊಳು ಲೀನವಾಗುವ ಮುನ್ನ.-
ಸಂಬಂಧ ಯಾವುದೇ ಇರಲಿ, ವರ್ಷಗಳು ಕಳೆದ ನಂತರವೂ ಮಾತಿನಲ್ಲಿ ಮೊದಲಿನಷ್ಟೇ ಖುಷಿ ಮತ್ತು ಅದೇ ಪ್ರೀತಿ ಲವಲವಿಕೆ ಇದ್ದರೆ ಮಾತ್ರ ಅದು ಕೊನೆ ತನಕ ಉಳಿಯೋದು. ಒಮ್ಮೆ ನೆನಪಿಸಿಕೋ ನಿನಗೆ ಮುಖ್ಯವೆನಿಸಿದವರ ಜೊತೆ ನಿನ್ನ ಪ್ರತಿಕ್ರಿಯೆಯನ್ನು!
-
'ಭಾನದನಿ' - 309
ಬಡವ ಬಡವನಾಗಿ ಬಾಳುವುದು,
ತಾ ಬಡವನೆಂದುಕೊಂಡು ಬದುಕುವುದ ಬಿಡುವತನಕವಷ್ಟೆ !-
ಭಾನದನಿ
ನೆನಪಿನಲ್ಲಿಡಬೇಕಾದ ಮೂರು ಅಂಶಗಳು
1. ಖುಷಿ ಪಡು - ನಿನ್ನ ಕಷ್ಟ ಸುಖಗಳನ್ನು ಆಲಿಸುತ್ತೇನೆ ಎಂದು ನುಡಿವವರು ಸಿಗುವುದಂತು ನಿಜ.
2. ದುಃಖಿಸದಿರು - ಮಾತು ನೀಡಿದವರು ಎಲ್ಲಾ ಸಮಯದಲ್ಲೂ ನಿನಗೆಂದೇ ಬದುಕಲು ಸಾಧ್ಯವಿಲ್ಲ.
3. ಸಮಾಧಾನದಿಂದಿರು - ನಿನ್ನಂತೆಯೇ ಅವರು, ಅವರಿಷ್ಟದ ಬದುಕು ಅವರಿಗೆ ಹೆಚ್ಚು.-