Bhimesh S Bhimu   (-✍️ ಭೀಮೇಶ ಎಸ್ ಧರೆಪೂರು)
594 Followers · 131 Following

read more
Joined 11 June 2019


read more
Joined 11 June 2019
1 FEB AT 21:09

ಅಧರ್ಮವೆಂಬುದು ಬೊಗಸೆಯಲ್ಲಿ ಹಿಡಿಟಿಟ್ಟ ನೀರಂತೆ
ನಾವು ಅದೆಷ್ಟೇ ಜೋಪಾನವಾಗಿ ಕಾಯ್ದಿರಿಸಿದರು ಕಡೆಗೂ
ಕೈ ತಪ್ಪಿ ಹೋಗುವುದಂತು ನಿಶ್ಚಿತ.
ಧರ್ಮವೆಂಬುದು ವೃಕ್ಷದ ಬೇರಿನಂತೆ ಅದೆಷ್ಟೇ ಶಾಖೆಗಳು
ಬೆಳೆದು ನಿಂತರು ಸಹ ವೃಕ್ಷದ ಬೇರು ಮಾತ್ರ ತಟಸ್ಥವಾಗಿರುತ್ತದೆ

ತಾತ್ಪರ್ಯ.:
ನಮ್ಮ ಆಲೋಚನೆಗಳು ಹಾಗೆಯೇ ವೃಕ್ಷದ
ಬೇರಿನಂತೆಯೇ ತಟಸ್ಥವಾಗಿರಬೇಕು.ಅಂದಾಗ ಮಾತ್ರ
ಜೀವನ ಸಾರ್ಥಕತೆ ಹೊಂದುವುದು.!!

-


8 JAN AT 15:22

ಸಾವು ನೋವುಗಳ ನಡುವೇ
ನೆಮ್ಮದಿಯ ತಾಣ ಒಂದಿರಲಿ.!

-


13 DEC 2022 AT 22:26

ಅನುಭವಿಸಿದ ಸಂಕಷ್ಟಗಳೆಲ್ಲವೂ
ಬದುಕಿಗೆ ಸ್ಪೂರ್ತಿ ತುಂಬಲಿ.ಬಾಳಿನ ಬೇಸರಕ್ಕೆ
ಜೀವನವೇ ಭರವಸೆಯಾಗಲಿ.,!

-


28 AUG 2022 AT 23:29

ಹಾಯ್ಕು
ನನ್ನವಳೆಂದೂ
ಗೆಲುವಿನಲ್ಲೆಂದಿಗೂ
ಮೊದಲಿಗಳು.,

-✍️ಭೀಮೇಶ ಎಸ್ ಡಿ

-


12 AUG 2022 AT 13:34

ಕರ್ಮ..!

ಬಡತನ ನೋವು ಜವಬ್ದಾರಿ ಆಸೆ ನಿರಾಸೆಗಳೆಲ್ಲದರ ನಡುವೆ ಓದಬೇಕು
ಅನ್ನೋ ಛಲ ಒಂಡೆದೆ ಆದ್ರೆ.,

ಶಿಕ್ಷಣಕ್ಕೆ ಸಕಲ ಸೌಕರ್ಯಗಳ ಜೊತೆಗೆ ಪ್ರೋತ್ಸಾಹವಿದ್ದರು ಸಹ ಓದದೆ ನಿರಾಕರಿಸಿ
ಹೆತ್ತವರಿಗೆ ಬಾರ ಆಗೋರು ಇನ್ನೊಂದೆಡೆ.,!

-


30 JUN 2022 AT 14:19

ಬಾನಂಗಳಕೆ ಬೆಳಕಿವಳು
ಮನದ ಸಾಮ್ರಾಜ್ಯದ ಕುವರಿ

ನಸು ನಗೆಯ ನಾವಿಕಳವಳು
ಹೃದಯ ಗೆದ್ದ ಸ್ವಪ್ನ ಸುಂದರಿ

ಭರವಸೆಗೆ ಬೂನಾದಿಯವಳು
ಕಣ್ಸನ್ನೆಯಲಿ ಸೆರೆ ಹಿಡಿದ ಕಿನ್ನರಿ

ಕಲ್ಪನೆಗೂ ಕನವರಿಕೆ ಬರಿಸಿದವಳು
ನೀಲಾಂಬರಿ

ಪ್ರೀತಿಗೆ ದೇವತೆಯವಳು
ನನ್ನಾಸರೆಯ ಮನೋಹರಿ.,

-


30 JUN 2022 AT 13:33

ಗಜಲ್
ನಸು ನಗುವಾಗಲೆಲ್ಲಾ ನೀ ಹೀಗೆ ನಕ್ಷತ್ರಗಳೆ ನಾಚಿಹವು
ಏಕಾಂತದ ನಿನ್ನ ತನುವ ಕಂಡು ನವಿಲು ಗರಿ ಬಿಚ್ಚಿ ಕುಣಿದಿಹವು

ಪ್ರಕೃತಿಗೂ ಸಹ ನಿನ್ನೊಡಲ ಆಸರೆಯೆ ಸಾಕೆನ್ನಿಸುವಂತಿದೆ
ಪ್ರತಿಯೊಂದು ಇಬ್ಬನಿ ಹನಿಗಳು ಆ ನಿನ್ನೊಲವ ಸ್ಪರ್ಶಕ್ಕೆ ಕಾದಿಹವು

ಬಯಕೆಗಳೆ ಬೇಸರವಾಗಿವೆ ಇಂದು ನೀ ಹೇಳುವ ಭರವಸೆಯ ಮಾತಿಂದ,
ನಿನ್ನಾಸರೆಯ ನಲಿವೊಂದು ಜೊತೆಯಿದ್ದರೆ ಆಸೆಗಳೆಲ್ಲ ನನಸಾಗಿಹವು

ಶೃಂಗಾರವೆ ಬೇಕಿಲ್ಲಾ,ನಿನಗೆ ಬೆಳದಿಂಗಳಂತೆ ಹೊಳೆವಾ ಮುಗುಳ್ನಗುವಿಗೆ
ನೀ ನಡೆವ ಹಾದಿ ಬಿದಿಯನ್ನೆಲ್ಲಾ ನೆನದು ಪ್ರಾಣಿ ಪಕ್ಷಿಗಳೆ ಮಂಕಾಗಿಹವು

'ಭೀಮ' ನ ವರ್ಣನೆಗೂ ನಿಲುಕದಾಗಿದೆ ನಿನ್ನೊಲುಮೆಯ ಅಲಂಕಾರ
ಜಗದ ನಲಿವೆಲ್ಲಾ ನಿನ್ನನ್ನೊಮ್ಮೆ ಅಪ್ಪಿ ಮೈ ಮರೆಯಲು ಚಡಪಡಿಸಿಹವು.,
-✍️ಭೀಮೇಶ ಎಸ್ ಡಿ

-


27 JUN 2022 AT 10:44

ಗಜಲ್
ಮಗುವಂತಾ ಮನಸ್ಸುಳ್ಳಾ ಮುಗ್ದೆಯವಳು
ಕಲ್ಮಶವಿರದ ಆತ್ಮೀಯ ಸ್ನೇಹಿತೆಯವಳು

ಕವಿ ಮನದ ಭಾವಕೆ ಬೆಳಕಾಗಿ ಬಂದಿಹಳು
ವರ್ಣನೆಗೆ ನಿಲುಕದ ನಿಸ್ವಾರ್ಥ ಜೀವಿಯವಳು

ಅವಳೊಲವ ಬಣ್ಣಿಸಲು ಪದಗಳೆ ಸಿಗುತ್ತಿಲ್ಲಾ
ಮಾತೃ ಹೃದಯದಷ್ಟೇ ಕಾಳಜಿ ವಹಿಸುವವಳು

ಮಾತಿಂದಲೆ ಎಲ್ಲರ ಮನ ಸೆಳೆವಾ ಮಯೂರಿ
ಎನ್ನೀ ಸ್ನೇಹದೊಸಿಲಿಗೆ ಪವಿತ್ರಳಾಗಿ ಇರುವಳು

ಭೀಮನ ಹೃದಯ ಸಾಮ್ರಾಜ್ಯಕ್ಕೆ ಕಾವಲು ಆಕೆ
ಆತ್ಮೀಯತೆಗೂ ಆತ್ಮೀಯತೆ ಪರಿಚಯಿಸಿದವಳು

-


23 JUN 2022 AT 15:13

ಮೌನವಾಗಿದ್ದಾರೆ ಎಂಬ ಮಾತ್ರಕ್ಕೆ
ಅವರು ಹೋರಾಡಲು ಕಲಿತಿಲ್ಲಾ
ಎಂಬರ್ಥವಲ್ಲಾ.,
ಹೋರಾಟವಿಲ್ಲದೆ ತಾಳ್ಮೆಯಿಂದಲೆ
ಗೆಲುವಿನ ಗರಿ ತಲುಪಲು ಸಿದ್ದರಿದ್ದಾರೆ
ಎಂದರ್ಥ.,!!

-


27 APR 2022 AT 20:44

ಕ್ಷಣಾರ್ಧದಲ್ಲಿ ತೊರೆದು ಹೋಗುವ ಜೀವನಕ್ಕೆ ಎಲ್ಲಿಲ್ಲದಷ್ಟು ಆಸೆ ಆಕಾಂಕ್ಷೆಗಳು ಒಂದೆಡೆಯಾದರೆ ಬೇಡವೆಂದರು ಬೆಂಬಿಡದೆ ಕಾಡುವ ಸಾವಿರ ಸಂಕಷ್ಟಗಳು ಇನ್ನೊಂದೆಡೆ.,

-


Fetching Bhimesh S Bhimu Quotes