To end some chapters,
need not wait for a moments to come;
Just forgetting is enough.
-
Love to teach
free Lancer
Poet, Photographer
Nature lover and rest is secret... read more
ಮಣ್ಣ ತಿಂದು ಸಿಹಿ ಹಣ್ಣು ಕೊಡುವ ಮರ
ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ
(ಸಂ)-
ಸಂಚಾರಿ ಗಂಧರ್ವ
ಸಂಗೀತದಲ್ಲಿ ಭೀಮಸೇನ್ ಜೋಶಿ ಅವರೆಂದರೆ ಒಂದು ಸ್ಥಾಯಿಭಾವ ಆದರೆ ಸ್ವತಃ ಅವರು ಸಂಚಾರ ಪ್ರಿಯ. ಭೀಮಸೇನ್ ಜೋಶಿ ಅವರ ಗುರುಗಳಾದವರನ್ನು "ಸವಾಯಿ ಗಂಧರ್ವ"ಎಂದಿದ್ದರೆ ಭೀಮಸೇನ್ ಜೋಶಿ ಅವರಿಗೆ "ಹವಾಯಿ ಗಂಧರ್ವ " ಎಂದು ಹೆಸರು ಬಂದುಬಿಟ್ಟಿತ್ತು. ಯಾಕೆಂದರೆ ಅವರು ಒಂದು ದಿನ ಮುಂಬೈಲ್ಲಿದ್ದರೆ ಮತ್ತೊಮ್ಮೆ ಕೊಲ್ಕತ್ತಾದಲ್ಲಿ ಇನ್ನೊಮ್ಮೆ ಪುಣೆಯಲ್ಲಿ ಮತ್ತೊಮ್ಮೆ ದುಬೈಯಲ್ಲಿ. ಹೀಗೆ ಸದಾ ಸಂಚಾರದಲ್ಲಿಯೇ ಇದ್ದು ಹಾಡುತ್ತಿದ್ದ ಗಂಧರ್ವ ಭೀಮ್ ಸೇನ್ ಜೋಶಿ. ಹಾಗೆ ಅವರು ಡ್ರೈವಿಂಗ್ ಪ್ರಿಯರು ಕೂಡ ಆಗಿದ್ದು ಮನಸ್ಸು ಬಂದತ್ತ ಖಯಾಲದಂತೆ ಬಹುದೂರ ಡ್ರೈವಿಂಗ್ ಮಾಡಿಕೊಂಡು ಅದಲ್ಲಿಗೋ ಸಾಗಿ ಬಿಡುತ್ತಿದ್ದರು. ಅದು ಅವರ ಖಯಾಲಿ. ಹೇಗೆ ಸ್ವರಗಳು ಮುಕ್ತವಾಗಿ ಸ್ವಚ್ಛಂದವಾಗಿ ಸ್ವರ ಸ್ಥಾನದ ಮೇಲೆ ವಿಹರಿಸುತ್ತವೆಯೋ ಹಾಗೇ ರಸ್ತೆ ಮೇಲೆ ಅವರ ಭೌತಿಕ ಸಂಚಾರಕ್ಕೂ ಕೂಡ ಅದೇ ಓಘವಿತ್ತು. ಹೀಗಾಗಿ ಹವಾಯಿ ಗಂಧರ್ವ ಅಂದರೆ ಸದಾ ಸಂಚಾರದಲ್ಲಿರುವ ಗಂಧರ್ವ ಅವರಾಗಿದ್ದರು. ಉಸ್ತಾದ್ ಕರೀಮ್ ಖಾನ್ ಅವರ ಗ್ರಾಮ ಫೋನ್ ರೆಕಾರ್ಡ್ ಅನ್ನು ಕೇಳಿ ರೈಲ್ವೆ ಟಿಕೆಟ್ ಇರದೇ ಹಾಡು ಹಾಡುತ್ತಲೇ ಜಲಂದರ್ ತಲುಪಿದರು. ನಂತರ ಅಲ್ಲಿಂದ ಮತ್ತೆ ತಮ್ಮ ಊರಾದ ಕುಂದಗೋಳಕ್ಕೆ ಮರಳಿ ಸವಾಯಿ ಗಂಧರ್ವರ ಬಳಿಯಲ್ಲಿ ಸಂಗೀತ ತಾಲಿ ಮುನ್ನಡೆಸಿ ಮತ್ತೆ ಜಗತ್ವ್ಯಾಪಿ ಸಂಚಾರಿಯಾಗಿ ಬಿಟ್ಟರು. ಸಂಗೀತ ಎಂಬುದು ಸಂಚಾರವೇ. ಜೀವನ ಎಂಬುದು ಕೂಡ ಒಂದು ರೀತಿಯ ಅಲೆಮಾರಿತನವೇ. ಜಗತ್ತು ಕೂಡ ನಮಗೆ ಗೊತ್ತಿರದ ಹಾಗೆ ಎಲ್ಲೋ ಸಂಚರಿಸುತ್ತಲೇ ಇರುತ್ತದೆ. ಹೀಗೆ ಸಂಗೀತಗಾರರನ್ನು ಗಾನಗಂಧರ್ವರು ಎಂದರೂ ಕೂಡ ಅವರನ್ನು ಅಪ್ಪಟ ಕನ್ನಡದಲ್ಲಿ ಸಂಚಾರಿ ಜಂಗಮರು ಎನ್ನುತ್ತಾರೆ. ಹಾಗೆ ನೋಡಿದರೆ ಎಲ್ಲರೂ ಕೂಡ ಈ ಜಗತ್ತಿನಲ್ಲಿ ಸಂಚಾರಿಗಳೇ ಅಲ್ಲವೇ?-
ಮಣ್ಣ ತಿಂದು ಸಿಹಿ ಹಣ್ಣು ಕೊಡುವ ಮರ
ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ
ಹಸಿರ ತೋಳಿನಲ್ಲಿ ಬೆಂಕಿಯ ಕೂಸ ಪೊರೆವುದು
ತಾಯಿಯ ಹೃದಯ
ಮರೆಯುವುದುಂಟೆ ಮರೆಯಲಿ ನಿಂತ
ಕಾಯುವ ಕರುಣಾಮಯಿಯಾ
ತನ್ನಾವರಣವೇ ಸೆರೆಮನೆ ಆದರೆ ಜೀವಕೆಯಲ್ಲಿಯ ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ ಮುಕ್ತಿ
ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೇಬೇಕು ಸೋಲಿಲ್ಲದ ಹೋರಾಟ
ರಚನೆ : ಎಚ್ ಎಸ್ ವಿ
-
ನೀನಿರು ನೀರಿನಂತೆ
ತಗ್ಗಿದ್ದ ಕಡೆ ಹರಿಯುವಂತೆ
ಬರುವುದು ನೂರಾರು ಚಿಂತೆ
ತೇಲಿಸಿ ಬಿಡು ನೀರ ಮೇಲೆ ದೋಣಿಯಂತೆ-
ನೀನಿರು ನೀರಿನಂತೆ
ತಗ್ಗಿದ್ದ ಕಡೆ ಹರಿಯುವಂತೆ
ಬರುವುದು ನೂರಾರು ಚಿಂತೆ
ತೇಲಿಸಿ ಬಿಡು ನೀರ ಮೇಲೆ ದೋಣಿಯಂತೆ-
ನೀನಿರು ನೀರಿನಂತೆ
ತಗ್ಗಿದ್ದ ಕಡೆ ಹರಿಯುವಂತೆ
ಬರುವುದು ನೂರಾರು ಚಿಂತೆ
ತೇಲಿಸಿ ಬಿಡು ನೀರ ಮೇಲೆ ದೋಣಿಯಂತೆ-
ಕಾಲ ಎಂದರೇ ಕಳೆದು ಹೋಗುವುದು. ನಂದು - ನಾನು ನಾನು ಎಂದು ಹಾರಾಡುವ ಎಲ್ಲಾರೂ ಕಾಲದ ಕಾಲಾಳುಗಳು ಅಷ್ಟೇ. ಕಾಲ ಇದ್ದ ಹಾಗೇ ಇರೋದಿಲ್ಲ ಯಾವುದು ಕೂಡ ಅಷ್ಟೇ. ಬದಲಾವಣೆ ಜಗದ ನಿಯಮ.
ಈ ಕಾಲದ ಜೊತೆ ಜೊತೆಗೆ ಪ್ರಕೃತಿ ಕೂಡಾ ಬದಲಾಗಿಬಿಡುತ್ತದೆ. ಅದೇ ಬದುಕಿಗೆ ಬೇಕು ಕೂಡಾ. ಮಳೆ, ಚಳಿ ಬೇಸಿಗೆ ಎಂದೆಲ್ಲ ಪ್ರಕೃತಿ ಬಗೆ ಬಗೆಯಾಗಿ ಬದಲಾಗುತ್ತಿರುತ್ತದೆ. ಈ ಪ್ರತಿ ಕಾಲಕ್ಕೂ ಒಂದೊಂದು ವಿಶೇಷ ಗುಣವಿದೆ ಆ ಮೂಲಕ ಸುಸ್ಥಿರತೆಯನ್ನು ಅದು ಕಾಪಾಡಿಕೊಳ್ಳುತ್ತದೆ. ಹಾಗೂ ಜಗತ್ತು ಜೀವಸಂಕುಲ ಬದುಕಲು ದಾರಿ ಮಾಡಿಕೊಡುತ್ತದೆ. ಅದರಲ್ಲಿ ವಿಶೇಷವಾದದ್ದು ಈ ಮಳೆಗಾಲ ಕೂಡ. ಬೇಸಿಗೆಯಲ್ಲಿ ಒಣಗಿ ಬಳಲಿ ಬೆಂಡಾದ ಪ್ರಕೃತಿಯಲ್ಲಮಳೆ ಬಂದಾಗ ಹೆಗ್ಗುತ್ತದೆ ಉಬ್ಬುತ್ತದೆ. ಮಳೆಯ ರಭಸಕ್ಕೆ ಕೊಳೆಯಲ್ಲ ತೊಳೆದು ಪ್ರಕೃತಿ ಮೈ ತೊಳೆದಂತೆ ಭಾಸವಾಗುತ್ತದೆ. ಹಸಿರು ಗಿಡಗಳು ಧೂಳು ಕೊಡವಿಕೊಂಡು ನಳನಳಿಸುತ್ತವೆ. ಹಳ್ಳಕೊಳ್ಳಗಳು ಕಸಕಡ್ಡಿಗಳನ್ನು ದೂರ ದೂರ ಎಸೆದು ಸ್ವಚ್ಛಗೊಳಿಸುತ್ತವೆ. ಚಿಗುರು ಗಿಡಗಳು ಹುಲ್ಲುಗಳು ಹಸಿರನ್ನು ಹೊಮ್ಮಿಸಿ ಮೇಲೆದ್ದು ಬರುವುದು ಈ ಮಳೆಗಾಲದಲ್ಲಿ,ಮಳೆಗಾಲದ ವಾತಾವರಣ ವೆಂದರೆ ಅದು ಜೀವ ಸಂಗತಿಗಳು ಮೊಳೆಯುವ ಕಾಲ. ಚಿಕ್ಕ ಹುಳು ಅಣಬೆ ಹಿಂದೆ ಹಿಡಿದು ಅದೆಷ್ಟು ದೊಡ್ಡ ದೊಡ್ಡ ಮರಗಿಡಗಳೆಲ್ಲ ಮೊಳಕೆ ಹೊಡೆಯಲು ಈ ಮಳೆಗಾಲ ಕಾರಣವಾಗುತ್ತದೆ. ಹೀಗಾಗಿ ಮಳೆಗಾಲ ಬಂತೆಂದರೆ ಅದೊಂದು ನವೀಕರಣವಾದಂತೆ. ಹಳೆಯ ಕೊಳೆಯಲ್ಲ ತೊಳೆದು ಹೊಸ ನೀರು ಬಂತು ಎಂದು ಎಲ್ಲರೂ ಕೂಡ ಸಮರವು ಪಡುವಂತಹ ಚೈತನ್ಯ ಬರುವುದು ಮಳೆಗಾಲದಿಂದ. ಈ ಮಳೆಗಾಲ ಇಡೀ ಜನ ಜೀವನಕ್ಕೆ ಮೂಲ. ಮಳೆ ಬಂದಷ್ಟೇ ಬೆಳೆ, ಮಳೆ ಬಂದು ಕೆರೆಕಟ್ಟೆಗಳು ತುಂಬಿದಾಗ ಒಂದು ವರ್ಷ ನಿರಾಳವಾಗುತ್ತದೆ ಒಂದು ವರ್ಷದ ಶಕ್ತಿಯಲ್ಲ ನವೀಕರಣವಾದಂತೆ ಲೆಕ್ಕ.-
ಅಪ್ಪನಿಗಾಗಿ ಈ ಕ್ಷಣ...
ಏನೆಂದರೂ, ಬೈದರೂ ಮಾತಾಡದ ಅಪ್ಪ ದೇವರಂತೆ ಹೃದಯಲ್ಲಿ ಅದೇಗೆ-ಅದೇಕೆ ಕುಳಿತನೊ ಮಗನಿಗೇ ಗೊತ್ತಾಗಲಿಲ್ಲ.
ಕೇಳಿದಾಗ ದುಡ್ಡು ಕೊಡುವ ಎಟಿಎಮ್ ಅಲ್ಲ, ಅಪ್ಪ.
ಅಪ್ಪ ಎಂದರೆ, ಯಾರದೋ ನುಂಗಿ, ಬಂಗಲೆ ಅಂಥ ಮನೆ ಕಟ್ಟಬೇಕಿಲ್ಲ.
ತನ್ನ ನೋವ ನುಂಗಿ ನಿಲ್ತಾನಲ್ಲ ಅವನೇ ಅಪ್ಪ.
ಹಣದಿಂದ ಆಸ್ತಿಂದ ಅಪ್ಪನನ್ನು ಅಳೆದರೆ ಅದಕ್ಕಿಂತ ಘೋರ ಅಪಮಾನ ಮತ್ತೆ ಬೇರಿಲ್ಲ. ಅದು ಪಿತೃ ದ್ರೋಹನೇ.
ನಿಮಗೆ ಬುದ್ಧಿ ಬಂದ ಬಳಿಕ ನೀವು ಯಾವಾಗಾದರು ಅಪ್ಪನ ಶೂ, ಚಪ್ಪಲು, ಹಾಕಿದ್ದೀರಾ... ? At least ಅವನ ಶೂ ಚಪ್ಲಿ ಹತ್ತಿರದಿಂದ ಸರಿಯಾಗಿ ನೋಡಿ. ಅಷ್ಟು ಸಾಕು ಅಪ್ಪ ಅರ್ಥ ಆಗೋಕೆ.
ಇವತ್ತಿಗೂ ನಾವು ಅನ್ನೋ ಮಾತು ಏನು ಗೊತ್ತಾ? "ನನ್ ಅಪ್ಪನೇ ಕೈ ಎತ್ತಿ ಹೊಡೆದಿಲ್ಲ. ಬೈದಿಲ್ಲ.
ಇವನ್ಯಾರು.. ನಂಗೆ ಅನ್ನೋದಿಕ್ಕೆ? ಕೈ ತೋರಸಿ ಮಾತಾಡದಿಕ್ಕೆ ? " ಅಂತ.
ಅಪ್ಪ ಸಣ್ಣ ತಪ್ಪಿದ್ದರೂ ಬೈದೇ ಇರೊಲ್ಲ. ಅದು confidence. ಅಪ್ಪ ಬೈದಿಲ್ಲ. ಅಂದಿಲ್ಲ ಅನ್ನೋದು certificate ಇದ್ದಂಗೆ.
ಅಪ್ಪ ಎಂದರೆ ಒಂದು ಭಾವನೆ. ಆತ ಹೂಂ ಎನ್ನುವುದಿಲ್ಲ. Ok,ಆಯಿತು ಎನ್ನೋದಿಲ್ಲ.
ಅಪ್ಪ ಎಂದರೆ ಮೌನದ ಮತ್ತಂದು ರೂಪ.
++++
"ಅಪ್ಪಾ...ನಂಗೆ ಒಂದು ಬೈಕ್ ಬೇಕು..
ಒಂದು ಲಕ್ಷ ಕೊಡು... " ಎಂದಾಗ ಅಪ್ಪ ಮಾತಾಡಲಿಲ್ಲ.
ಆಗ ಮಗನಿಗೆ ಅಪ್ಪನ ಮೇಲೆ ಸಿಟ್ಟು.
"ನನಗೆ ಬೇಕಾಗಿದ್ದು ಕೊಡಿಸದ ಮೇಲೆ ಇವನೆಂಥ ಅಪ್ಪ...? ನನ್ನ ಫ್ರೆಂಡಿನ ಡ್ಯಾಡಿ ಕೇಳದೇ ಇದ್ದರೂ ಸಹ ಲಕ್ಷ ಲಕ್ಷ ಕೊಡುತ್ತಾನೆ " ಎಂದೆಲ್ಲ ಅಪ್ಪನ ಮೇಲೆ ಅಸಮಾಧಾನ.
ಕಾಲ ಕಳೆದಂತೆ ಅಪ್ಪನ ಸ್ಥಾನಮಾನದ ಅರಿವಾಯಿತು. ಕಾಲ, ಅನುಭವ & ಪರಿಸ್ಥಿತಿ ಒಂದೂ ಮಾತಾಡದೇ ಅಪ್ಪ ಏನಂತ ಹೇಳಿತು. ನಂತರ, ಅಪ್ಪ ಮಾಡಿದ ಸಾಲ ತೀರಿಸುದರಲ್ಲಿಯೇ ಸಂತೃಪ್ತಿ ಇರುತ್ತೆ.-