ಇಲ್ಲಿ ದೇವರಲ್ಲಿ ಕೇಳೋ ಎಲ್ಲಾ ಬೇಡಿಕೆಗಳಲ್ಲೂ ಸ್ವಾರ್ಥ ಕಾಣಸಿಗೋಲ್ಲ.... ತನ್ನವರ ಉಳಿವಿಗಾಗಿ ತಾನು ಏನು ಮಾಡಕ್ಕಾಗ್ತಿಲ್ಲ ಅನ್ನೋ ಅಸಹಾಯಕತೆಯ ನೋವು ಮಾತ್ರ ಎಲ್ಲಾರಲ್ಲೂ ಕಾಣ್ತಾಯಿತ್ತು.... ದೇವಸ್ಥಾನದ ಗಂಟೆಯ ಶಬ್ದಕ್ಕಿಂತ, ಇಲ್ಲಿ ಅಳುವಿನ ಶಬ್ದವೇ ಹೆಚ್ಚಾಗಿತ್ತು...... ನೆನೆಯದ ದೇವರಿಲ್ಲ, ಮಾಡದ ಹರಕೆಗಳಿಲ್ಲ ಆದರೂ ಕೆಲವೂ ಹರಕೆಗಳೂ ದೇವರಿಗೆ ತಲುಪಲೆ ಇಲ್ಲ.....
ಅವಿತ ಭಾವನೆಗಳ ಬಡಿದೇಬಿಸಲೇ ಅರಿವಿಲ್ಲದೆ ಭಾವನೆಗಳಲೀ ಬೆರತು ಬಿಡಲೇ ಬೆರತ ಭಾವನೆಗಳ ಕೊಂದು ಬಿಡಲೇ ನಲಿದು ನಲಿಸುವ ಭಾವಗಳಿಗೆ ಬೆಲೆ ಕೊಡಲೇ ಜೀವಗಳಿಗೆ ಭಾವಗಳ ಬೆಲೆ ತಿಳಿಸಲೇ ಸತ್ತಂತಿರೋ ಭಾವಗಳ ಜೀವವ ಮರು ಸೃಷ್ಟಿಸಲೇ ಈ ಬದುಕೊಂದು ಸುಂದರ ಭಾವನೆಗಳ ಗೊಂದಲಮಯ ಪ್ರಶ್ನೆಯಾಗಿದೆ.
ಪದಗಳು ಕೊಳೆತಂತಾಗಿವೆ, ಭಾವನೆಯ ವ್ಯಕ್ತಪಡಿಸಲು ಸಮಯವಿಲ್ಲ... ಮನದೊಳಗಿನಳಲನು ಇಣುಕಿ ಅರಿವ ಮನವಿಲ್ಲ.... ಬದುಕಿದೋ ಮುಂದಕ್ಕೂ ಹೊಗಲೋಲ್ಲದು ಮತ್ತೆ ಹಿಂದಕ್ಕೂ ಹೋಗಲೋಲ್ಲದು..... ತಟಸ್ಥ ವಾತಾವರಣ ಉಸಿರಕಟ್ಟಿಹಾಕುತಿದೆ.....