ಭಾಗ್ಯಶ್ರೀ ವೀರೇಶ   (✍🏼ಭಾಗ್ಯಶ್ರೀ ಹಿರೇಮಠ್)
1.9k Followers · 8 Following

🎂🎂20/August
ಬರವಣಿಗೆ ನನ್ನ ಹವ್ಯಾಸ.
ವೈಯಕ್ತಿಕ ಪ್ರಶ್ನೆಗಳಿಗೆ ಇಲ್ಲ ಅವಕಾಶ.
Joined 27 November 2020


🎂🎂20/August
ಬರವಣಿಗೆ ನನ್ನ ಹವ್ಯಾಸ.
ವೈಯಕ್ತಿಕ ಪ್ರಶ್ನೆಗಳಿಗೆ ಇಲ್ಲ ಅವಕಾಶ.
Joined 27 November 2020

ಮಕ್ಕಳಿಗಾಗಿ ಮುಡಿಪಿಟ್ಟೆ ನಿನ್ನ ಜೀವನ,
ಎಂದೆಂದಿಗೂ ತೀರಿಸಲಾರೆ ನಿನ್ನ ಋಣ,
ಮುಕ್ಕೋಟಿ ದೇವತೆಗಳಿಗೂ ಎತ್ತರದಲ್ಲಿರುವ ನಿನ್ನ,
ಪ್ರತಿಕ್ಷಣ ಆರಾಧಿಸಿ ಪೂಜಿಸಿದರೂ ಸಾಲದು ಇನ್ನ,
ಪದಗಳಿಗೂ ಕೊರತೆ ವರ್ಣಿಸಲು ತ್ಯಾಗ ಪ್ರೀತಿಯ ಪ್ರತಿರೂಪವಾದ ದೇವತೆಯನ್ನ,
ಜನ್ಮ ನೀಡಿದ ಅಮ್ಮನಿಗೆ ನನ್ನ ಕೋಟಿ ನಮನ
ನಿನ್ನಿಂದ ನನ್ನ ಈ ಜನ್ಮ ಧನ್ಯ..

-



ನೀ ನನ್ನ ಬದುಕಿಗೆ ಅದ್ಭುತ ತಿರುವು,
ನೀ ಬಂದಮೇಲೆ ಬದಲಾಯಿತು ನನ್ನ ಜಗವು,
ನೀನು ಆ ದೇವರು ನೀಡಿದ ವರವು,
ಇದು ಯಾವ ಜನ್ಮದ ಋಣಾನುಬಂಧವೋ,
ನಿನ್ನ ಪ್ರೀತಿಯ ಮಾತಲ್ಲಿ ಮರೆತೆ ನನ್ನೆಲ್ಲಾ ನೋವು,
ಹೀಗೆಯೇ ಸಾಗಲಿ ನಮ್ಮ ಜೀವನದ ಪಯಣವು..

-



ನನ್ನ ಬದುಕಿಗೆ ಅರ್ಥ ನೀನು,
ನಿನ್ನ ಪ್ರೀತಿಯಲ್ಲಿ ಮರೆತೆ ನನ್ನೇ ನಾನು,
ಈ ಒಲವಿಗೆ ಗೆಲುವು ಆ ದೈವ ನೀಡಿದ ಆಶಿರ್ವಾದವು,
ನಿನ್ನ ಅನುರಾಗದಲಿ ನಕ್ಕ ಈ ಜೀವವು
ನಿನ್ನ ನೆನಪಲ್ಲೇ ಇರಲಿ ನನ್ನ ಉಸಿರಿಗೆ ಅಳಿವು..
ನೀ ನನ್ನ ಒಲವಿನ ಚೆಲುವು

-



ಜೀವನದ ನಾನಾ ರೀತಿಯ ಚಿಂತೆಗಳಲ್ಲಿಯೇ ಬದುಕಿನ ಯಾನ,
ನೆಮ್ಮದಿಯ ಬದುಕು ಸಿಗುವುದರೊಳಗೆ
ಕೊನೆಯಾಗಿರುವುದು ಜೀವನ....

-



ಅವಶ್ಯಕತೆ ಇದ್ದಾಗ ಹತ್ತಿರ ಸುಳಿಯುವವರು
ಬೇಡವಾದಾಗ ದೂರ ಸರಿಯುವವರು
ಈ ಗುಣ ಹೊಂದಿದವರು ಹಲವರು
ಅವರೇ ಬಂಧು ಬಳಗದವರು
ಇಂತಹ ಜನಗಳಿಂದ ನೀ ತುಂಬಾ ದೂರವಿರು..

-



ಯುಗಾದಿ ಹಬ್ಬದ ಸಂಭ್ರಮವು
ತಳಿರು ತೋರಣಗಳಿಂದ ಮನೆಯಲ್ಲಿ
ಸಂತಸದ ಸರಿಗಮವು
ಕಹಿ ನೆನಪುಗಳಿಗೆ ಬರಲಿ ಮರೆವು
ಕಷ್ಟಗಳೆಲ್ಲ ಕಳೆದು ತುಂಬಲಿ ಬದುಕಲ್ಲಿ ನಗುವು
ಸಿಹಿ-ಕಹಿ, ಕಷ್ಟ-ಸುಖಗಳನ್ನು
ಸಮವಾಗಿ ಸ್ವೀಕರಿಸಲಿ ಮನವು,
ಉತ್ಸಾಹ ,ಚೈತನ್ಯ, ಭರವಸೆ ಚಿಗುರೊಡೆಯಲಿ ಪ್ರತಿದಿನವೂ,
ಹೊಸ ವರ್ಷದ ಆರಂಭ ತರಲಿ ಬಾಳಲ್ಲಿ ಗೆಲುವು,
ಬೇವು- ಬೆಲ್ಲ ತಿಂದು ಸಂತಸದಿಂದ ಆಚರಿಸೋಣ
ಈ ನೂತನ ಸಂವತ್ಸರದ ಶುಭದಿನದ ಆರಂಭವು.

-



ಜೀವನದ ದಾರಿಯಲ್ಲಿ ಕಲ್ಲು ಮುಳ್ಳುಗಳು ಸಹಜ,
ಅದನ್ನು ಬದಿಗೆ ಸರಿಸಿ ಎಚ್ಚರದಿಂದ ಸಾಗುವುದು ಕಲಿಯಬೇಕು ಮನುಜ.....

-



ನೀ ಹುಟ್ಟಿದ ಆ ಸುಂದರ ಕ್ಷಣ,
ದೇವತೆಯೇ ಧರೆಗಿಳಿದು ಬಂದಂತಹ ಸುದಿನ,
ನಿನ್ನ ಧ್ವನಿಯ ಆಲಿಸಿದ ಆ ಮಧುರಕ್ಷಣ,
ಸ್ವರ್ಗದಲ್ಲಿ ತೇಲಿತು ನಮ್ಮೆಲ್ಲರ ಮನ,
ನೀ ಹುಟ್ಟಿ ಬಂದ ಈ ಶುಭದಿನ,
ಸಂತೋಷ ಸಂಭ್ರಮ ಸಡಗರದಿಂದ ಮನೆಯಾಯಿತು ಬೃಂದಾವನ,
ನಿನ್ನ ಮಾತಿನಲ್ಲಿರುವ ತುಂಟತನ
ಮರೆಸುವುದು ಎಲ್ಲಾ ನೋವುಗಳನ್ನ,
ಎಷ್ಟು ಜನ್ಮದ ಪುಣ್ಯದ ಫಲವೋ
ನೀ ಮಗಳಾಗಿ ತುಂಬಿದೆ ನನ್ನ ಮಡಿಲನ್ನ,
ಬೆಲೆಕಟ್ಟಲಾಗದ ಉಡುಗೊರೆ ನೀ ನನಗೆ ಚಿನ್ನ,
ವಿದ್ಯೆ, ಆಯುಷ್ಯ, ಆರೋಗ್ಯ ಸಂತೋಷ
ಕೊಟ್ಟು ಕಾಪಾಡಲಿ ಮುಕ್ಕೋಟಿ ದೇವತೆಗಳು ನಿನ್ನ.
ಹುಟ್ಟು ಹಬ್ಬದ ಶುಭಾಶಯಗಳು ಚಿನ್ನು 🎂🎉❤️

-



ದುಷ್ಟರ, ಸ್ವಾರ್ಥಿಗಳ ಮಧ್ಯದಲ್ಲಿ
ನಿಸ್ವಾರ್ಥ ಜೀವ ನರಳುವುದು ಕಣ್ಣೀರಿನಲ್ಲಿ

-



ಶಿವನ ನಾಮಸ್ಮರಣೆಯಿಂದ ಶುಭಕರ
ಕೈ ಹಿಡಿದು ಸನ್ಮಾರ್ಗದಲ್ಲಿ ನಡೆಸುವ ಕೃಪಾಕರ
ನಂಬಿದವರನ್ನು ಸಲಹುವ ಜಟಾಧರ
ಬೇಡಿದ ಭಕ್ತರ ಇಷ್ಟಾರ್ಥಗಳನ್ನು
ಪೂರೈಸುವ ಸಿದ್ದೇಶ್ವರ
ಶಿವನೊಲಿದರೆ ಎಲ್ಲವೂ ಮಂಗಳಕರ
ಹರಸಿ,ಆಶೀರ್ವದಿಸಿ ಅಭಯವ ನೀಡು ಸರ್ವೇಶ್ವರ
ಓಂ ನಮಃ ಶಿವಾಯ ಶಂಕರ ಶುಭಕರ ಹರ ಹರ



-


Fetching ಭಾಗ್ಯಶ್ರೀ ವೀರೇಶ Quotes