ಬೇಜಾರಿಲ್ಲ.,
ಯಾರ ಹೆಸರಿಗೆ ಬರೆದರೂ ನೀ
ಈ ತೋಟ, ಗದ್ದೆಗಳ ಹಸಿರು ಸಂಪತ್ತನ್ನು!
ಮಳೆ ಬಂದಾಗ,
ಗುಲಾಬಿ ಕೊಡೆಯನು ಹಂಚಿಕೊಂಡರೆ
ಸಹಿಸದು ಮನ ಆ ಆಪತ್ತನ್ನು!!-
ಎಷ್ಟ್ ಹೊತ್ ಒಂದೇ ಕಡೆ ಇರಲಿ...
# # # # # # # #
ಉತ್ತರ ಕನ್ನಡ ಜನ್ಮಭೂಮಿ..
ಬೆಂಗಳೂ... read more
ಸಪ್ತಸಾಗರಗಳಲ್ಲಿ ಇನ್ನೂರು ಮಿಲಿಯನ್ ಟನ್ ಗಳಷ್ಟು ಪ್ಲಾಸ್ಟಿಕ್ ಇದೆಯಂತೆ!
ಮನಸ್ಸಿನ ಜೊತೆ ಈ ಕಡಲನ್ನು ಹೋಲಿಸುವುದು ಹೇಗೆ?
ಪ್ಲಾಸ್ಟಿಕ್ ಜೀರ್ಣಿಸುವ ಬ್ಯಾಕ್ಟೀರಿಯಾಗಳೂ ಆಗಲೇ ಸಿಕ್ಕಿವೆ.. ವ್ಯಾಪಾರವೂ ಜೋರಾಗಿದೆ..
ಮನಸ್ಸಲ್ಲಿನ ಅಸೂಯೆ, ಅತೃಪ್ತಿಯ ಕರಗಿಸುವ ಸೂಕ್ಷ್ಮ ಜೀವಿಗಳ ಹುಡುಕುವುದು ಹೇಗೆ?-
ವೇದನೆಗಳು..
ಸಂಜೆಯಲ್ಲಿ, ಹಾದಿ ಬದಿಯ ಅಂಗಡಿಯಲ್ಲಿ ಸಿಗುವ
ವಡಾ ಪಾವ್ ಮತ್ತು ಚಟ್ನಿ ಗಳಂತಿರಬೇಕು.!
ಅವು ಅಪರೂಪವಾಗಿ ಕಣ್ಣೀರು ತರಿಸಿದರೂ
ಖುಷಿ ಕೊಡುತ್ತವೆ!!-
ಬದುಕು ಅವಕಾಶಗಳ
ನೀಡುವುದಂತೆ,
ಬಳಸಿಕೊಳ್ಳಬೇಕು..!
ರೈಲು ಪ್ರಯಾಣವ
ರಾತ್ರಿ ಮಲಗಿ
ಕಳೆಯುವುದರ ಬದಲು
ನಸುಕಿನಲ್ಲಿ "ವಿಸ್ಟಾಡೋಮ್" ಭೋಗಿಗಳಲ್ಲಿ
ಕುಳಿತು ನಿಸರ್ಗವ ಮಾತನಾಡಿಸಬೇಕು..!!-
ಅಳತೆ ಮಾಡಿದ್ದೆ ನಾನು..
ಒಂದೆರಡು ಕೇಜಿ ಮೋಡ, ಹತ್ತು ಪರ್ಸೆಂಟು ಸೂರ್ಯ,
ಇಪ್ಪತ್ತು ಮೀಟರ್ ಕಾಮನಬಿಲ್ಲು
ಅಷ್ಟೇ ಇತ್ತು ಮನೆ ಮುಂದಿನ ಮುಗಿಲಲ್ಲಿ..
ಕುಳಿತು ನೋಡಲು ಆಸನಗಳೇನೋ ಇದ್ದವು.
ಕುಣಿವ ಕಾಲ್ಗಳನ್ನು ಹಿಡಿಯಲಾಗಲಿಲ್ಲ..!!-
ಕಳ್ಳ ರಜೆಗಳ ಹಾಕುತಿರಬೇಕು...
ತಲೆ ಬಿಸಿಯ ಮೀಟಿಂಗ್ ಗಳ ನಡುವೆ
ಚಹಾ ಕಾಫಿ ಬಿಸ್ಕತ್ತುಗಳಿರಬೇಕು..
ಈಮೇಲ್ ನಲ್ಲಿ ಬೈದಾಡಿಕೊಂಡರೂ
ಎದುರಿಗೆ ಸಿಕ್ಕಾಗ ಕೃತಕ ನಗುವಿರಬೇಕು..
ದೂರದ ದೇಶಕೆ ಪ್ರವಾಸಗಳ ನಡುವೆ
ಊರಿಗೆ ಹೋಗಲೂ ಅವಕಾಶಗಳು ಬೇಕು..
ವರ್ಷಕ್ಕೊಮ್ಮೆ ಸಂಬಳ ಏರಿಸಬೇಕು
ಬೋನಸ್ ಗಳು ಬರುತಿರಬೇಕು..😀-
ಹೂವನ್ನು ಮೋಹಿಸುವ ಅಪರಾಧವು
ದಿವಸಗಳ ಹವ್ಯಾಸವೇ ಆಗ್ಹೋಗಿದೆ!
ನೋವಾಗಿದೆ ಬಾಡಿದರೆ.. ಅರಳಿದರೆ ಬೆರಗಾಗೋ
ಅವಸರದ ಈ ಸಜೆಯೂ ಮಜವಾಗಿದೆ!!-
ಕೆಲ ಸಂಬಂಧಿಕರ ಬಳಿ ಹೇಳಿ ನೋಡಿ..!
ಬಲವಾದ ರೆಕ್ಕೆಗಳ ಕೊಡದಿದ್ದರೂ
ಬುಡದಲ್ಲಿ ಕಿಡಿ ಸೋಕಿಸಿ ರಾಕೆಟ್ ನಂತೆ ಹಾರಿಸುತ್ತಾರೆ.!!
-
ಇಟಲಿಯ ಕೆಲವರಲ್ಲಿ
ನಂಬಿಕೆ ಇದೆ !
ಗ್ರಹಣ ಕಾಲದಿ ನೆಟ್ಟ
ಗಿಡಗಳ ಹೂವಿನ
ಬಣ್ಣಗಳಿಗೆ ಮೆರುಗು
ಬರುವುದೆಂದು!
ನಮ್ಮಲ್ಲೂ ಇವೆ..
ನೇರಳಾತೀತ ಕಿರಣಗಳಿಗೆ
ಹೆದರಿದ ಹೂವುಗಳಿಗೆ
ಸನ್ ಸ್ಕ್ರೀನ್ ಕ್ರೀಂ ಗಳ
ಜಾಹೀರಾತುಗಳು!!-
ಪರಿವೆಯಿಲ್ಲದೇ ತಿಂದು ನಿದ್ರಿಸಿ
ಅಲೆದಾಡುತ್ತಿದ್ದೆ ನನ್ನೂರಿನಲ್ಲಿ,
ಹಸಿವೆ ದಣಿವು ಜಾಗರಣೆಯ ತಿಳಿಸಿದ್ದು ಈ ನಗರ..!
ಕೆಲವೇ ನೂರು ರೂಪಾಯಿಗಳಲ್ಲಿ
ದಿನವೇನೋ ಕಳೆಯುತ್ತಿತ್ತು ನನ್ನೂರಿನಲ್ಲಿ,
ಸಾವಿರದಿಂದ ಲಕ್ಷಗಳ ದುಡಿಯಲು ಕಲಿಸಿದ್ದು ಈ ನಗರ..!!-