ಅಕ್ಕರೆಯಲಿ ಅಕ್ಷರ ಕಲಿಸಿ
ತಿದ್ದಿ,ತೀಡಿ ,ಬುದ್ಧಿ ಹೇಳಿ
ಜೊತೆಗೆ ನೀತಿಯನ್ನು ತಿಳಿಸಿ
ವಿದ್ಯಾರ್ಥಿಗಳಿಗೆ ಗುರಿ ಸೇರಲು
ದಾರಿ ತೋರಿಸಿದ ಶಿಕ್ಷಕರಿಗೆ
ಪ್ರೀತಿ,ಗೌರವದ ನಮನಗಳು
ಇಂದಿಗೂ ಇದ್ದಾರೆ ಮನದೊಳು.-
ಆಕಾಶವಾಣಿ ಎಂದರೆ ... read more
ಜಾಜಿ ಮಲ್ಲಿಗೆಯೇ
ನಿನ್ನ ಚೆಲುವಿಗೆ..ಪರಿಮಳಕೆ
ಜಗದಲಿ ಏನಿದೆ ಹೋಲಿಕೆ
ದಾರದಲಿ ಪೋಣಿಸಿ ಮಾಲೆಯನು ಮುಡಿಗೇರಿಸಿದರೆ
ನಿಜಕು ನೀ ನಾರೀಮಣಿಯರ ಮನದಲಿ
ನವೋಲ್ಲಾಸದ ರಾಗ ಮಾಲಿಕೆ.
-
ನಿಂತು ಹೋಗುವೆಯೇನೋ ಎನ್ನುವ ಭಯವಿತ್ತು
ಒಂದು ಸಲವಲ್ಲ! ದೇವರೊಲುಮೆಯಿತ್ತು.
ನನ್ನುಸಿರೇ...ನೀನು ಉಳಿದೆ..ನನ್ನ ಉಳಿಸಿದೆ
ಉಳಿದ ಕನಸುಗಳ ನನಸಾಗಿಸಲು...
ಮತ್ತೆ ಶ್ರಮಿಸಲು ಅವಕಾಶವಿತ್ತೆ.
ಹಸಿರಿದೆ ಸುತ್ತ,ಮುತ್ತ....ನೀ ನಿರಾಳವಾಗಿರು
ನಾನಿರುವೆ ನಿರಾತಂಕದಲಿ..
-
ಕಷ್ಟವೆಂಬ
ಕತ್ತಲು ಕವಿದಿರಲು
ಕಂಗಳು ಸುರಿಸಿದ ಕಂಬನಿಯು
ಕೆನ್ನೆಯ ಮೇಲೆ ಸಾಕ್ಷಿ ಇಟ್ಟಿತು-
ಸಂಜೆ ಅರಳುವ ಹಲವು
ಹೂವುಗಳ ಬಣ್ಣ ಬಲು ಬಿಳಿ
ಕತ್ತಲಲ್ಲಿ ಬೇಗನೆ ಕಣ್ಣಿಗೆ ಕಾಣಿಸಲೆಂದು
ಆ ಸೃಷ್ಟಿಕರ್ತನಿತ್ತ ಬಳುವಳಿ.-
ನಾಗರ ಹಾವಾಗಿ ಬಂದು
ಚಿತ್ರ ಪ್ರೇಮಿಗಳೆದೆಯಲ್ಲಿ
ಹೂವಾಗಿ ಅರಳಿದವರು.
ಮರೆಯಾಗಿ ಹೋದರೂ
ಮರೆಯದ ಮಾಣಿಕ್ಯವಾಗಿ
ಮನದಲ್ಲೇ ಉಳಿದವರು.-
(ಪೂರ್ತಿ ಕವನ Caption ವಿಭಾಗದಲ್ಲಿದೆ...)
ಈ ಅಮ್ಮನೆಂದರೆ ಅದ್ಭುತ...
ಮಕ್ಕಳ ಹೆಸರು ಹೇಳಿ
ಪ್ರೀತಿಯ ಧಾರೆಯನೆರೆದರೆ
ಒಣಗಿದ ಗಿಡವೂ ಚಿಗುರ ಬಲ್ಲದು...
ಈಗ ನನ್ನ ಮನೆಯಂಗಳದಲ್ಲಿ
ಹಳದಿ ಗುಲಾಬಿಯು ಅರಳಿ ನಗುತಿದೆ
ಅದರಲಿ ನನ್ನಮ್ಮನ ನಗುವೂ ಬೆರೆತಿದೆ...
-
ಮಾಗಿಯ ಮoದಮಾರುತಕೆ
ಮಲ್ಲಿಗೆಯ ಬಳ್ಳಿಯೊಂದು
ಮಾಮರವನು ತಬ್ಬಲು
ಮನದಲಿ ನಲ್ಲನ ನೆನಪು ಕಾಡಿತು
-
ನಗ ಬೇಕೆಂದರೂ ನಗಲು ಆಗದು
ಅಳ ಬೇಕೆಂದರೆ ಅಳಲೂ ಆಗದು
ಪರಿಸ್ಥಿತಿಗೆ ಹೊಂದಿಕೊಂಡು
ಮನೋಸ್ಥಿತಿಯನ್ನು ನಿಯಂತ್ರಣದಲ್ಲಿಡ ಬೇಕು.
ಅರಿತು...ಅದರಂತೆ ನಡೆಯ ಬೇಕು-